ಆ್ಯಪ್ನಗರ

ಹುತಪ್ಪನಿಗೆ ಹಾಲೆರದು ಸಂಭ್ರಮ

ನರಗುಂದ : ನಾಗರ ಪಂಚಮಿ ಮರುದಿನ ಬರುವ ನಾಗ ಗರುಡ ಪಂಚಮಿ ಅಂಗವಾಗಿ ಸಾರ್ವಜನಿಕ ಸ್ಥಳದಲ್ಲಿ ಅರಲಿನ ಐದು ಹೆಡೆ ನಾಗದೇವರನ್ನು ನಿರ್ಮಿಸಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಹಾಲೆರೆಯುವ ಮೂಲಕ ನಾಗ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

Vijaya Karnataka 7 Aug 2019, 5:00 am
ನರಗುಂದ : ನಾಗರ ಪಂಚಮಿ ಮರುದಿನ ಬರುವ ನಾಗ ಗರುಡ ಪಂಚಮಿ ಅಂಗವಾಗಿ ಸಾರ್ವಜನಿಕ ಸ್ಥಳದಲ್ಲಿ ಅರಲಿನ ಐದು ಹೆಡೆ ನಾಗದೇವರನ್ನು ನಿರ್ಮಿಸಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಹಾಲೆರೆಯುವ ಮೂಲಕ ನಾಗ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
Vijaya Karnataka Web GDG-5NRD3
ನರಗುಂದ ದಂಡಾಪುರದಲ್ಲಿ ಮಣ್ಣಿನ ನಾಗ ದೇವರಿಗೆ ಹಾಲೆರೆಯಲಾಯಿತು.


ನಗರದ ನಾನಾ ಬಡಾವಣೆ ಯುವಕರು ಕೆರೆಯಿಂದ ಅರಲು ಹೊತ್ತು ತಂದು ಓಣಿಯಲ್ಲಿ ಎರಡರಿಂದ ಐದು ಅಡಿ ಎತ್ತರದ ಐದು ಹೆಡೆ ನಾಗ ದೇವರನ್ನು ನಿರ್ಮಿಸಿದರು. ಮಧ್ಯಾಹ್ನ ದವರೆಗೆ ಅಕ್ಕಪಕ್ಕದ ಮಹಿಳೆಯರು, ಮಕ್ಕಳು ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಮಧ್ಯಾಹ್ನ ನಂತರ ಹುತ್ತ ಮುರಿದು ಅರಲನ್ನು ಒಬ್ಬರಿಗೊಬ್ಬರು ಎಸೆದರು. ದಾರಿ ಹೋಗುವವರ ಮೇಲೆ, ಬೈಕ್‌ ಸವಾರರ ಮೇಲೆ, ವಾಹನಗಳ ಮೇಲೆ ಅರಲು ಎಸೆದು ಖುಷಿ ಪಟ್ಟರು. ಅರಲು ಎಸೆಯುವುದನ್ನು ಕಂಡ ಜನ ಓಡಿಹೋದರೆ ಅವರ ಬೆನ್ನಟ್ಟಿ ಗುರಿ ಇಟ್ಟು ಅರಲೆಸೆಯುವ ಮೂಲಕ ನಾಗರ ಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ