ಆ್ಯಪ್ನಗರ

ಆರೋಗ್ಯ ಉತ್ತಮವಾಗಿದ್ದರೆ ಮನಸ್ಸು ಸದೃಢ

ಗದಗ: ಸದೃಢ ಆರೋಗ್ಯದಿಂದ ಸದೃಢ ಮನಸ್ಸು ರೂಪುಗೊಳ್ಳಲು ಸಾಧ್ಯ. ಆದ್ದರಿಂದ ಮಕ್ಕಳು ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಸ್‌.ಕೆಳದಿಮಠ ಹೇಳಿದರು.

Vijaya Karnataka 24 Jan 2020, 6:22 pm
ಗದಗ: ಸದೃಢ ಆರೋಗ್ಯದಿಂದ ಸದೃಢ ಮನಸ್ಸು ರೂಪುಗೊಳ್ಳಲು ಸಾಧ್ಯ. ಆದ್ದರಿಂದ ಮಕ್ಕಳು ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಸ್‌.ಕೆಳದಿಮಠ ಹೇಳಿದರು.
Vijaya Karnataka Web if the health is good the mind is strong
ಆರೋಗ್ಯ ಉತ್ತಮವಾಗಿದ್ದರೆ ಮನಸ್ಸು ಸದೃಢ


ನಗರದ ಸರಕಾರಿ ಮಾದರಿ ಹಿರಿಯ ಪ್ರಾ.ಕ.ಗಂ.ಮ.ಶಾಲೆ ನಂ. 10 (ಸೆಂಟ್ರಲ್‌ ಸ್ಕೂಲ್‌)ರಲ್ಲಿಗದಗ-ಬೆಟಗೇರಿ ರೋಟರಿ ಕ್ಲಬ್‌ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಕೈ ತೊಳೆಯುವ ವಿಧಾನ ಕಾರ್ಯಕ್ರಮದಲ್ಲಿಮಾತನಾಡಿದರು.

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹಾಗೂ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿಎಲ್ಲಕ್ರಮಗಳನ್ನು ಕೈಗೊಳ್ಳಲಾಗಿದ್ದು ಇದರೊಟ್ಟಿಗೆ ಮಕ್ಕಳ ಆರೋಗ್ಯ ಜಾಗೃತಿ ಮಾಡಲಾಗುತ್ತಿದೆ. ವಾಟರ್‌ ಬೆಲ್‌, ಊಟಕ್ಕೂ ಮುನ್ನ, ಶೌಚದ ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳುವ ಪದ್ಧತಿ ರೂಢಿಸಿಕೊಂಡರೆ ವಿದ್ಯಾರ್ಥಿಗಳು ಆರೋಗ್ಯವಂತರಾಗಲು ಸಾಧ್ಯ ಎಂದರು.

ಸರಕಾರಿ ಶಾಲೆಗಳಿಗೆ ಸಮುದಾಯದ ಸಹಭಾಗೀತ್ವ, ಸಾಮಾಜಿಕ ಕಾರ್ಯದಲ್ಲಿತೊಡಗಿಕೊಂಡಿರುವ ಸಂಘ ಸಂಸ್ಥೆಗಳ ಸಹಕಾರವೂ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿಗದಗ-ಬೆಟಗೇರಿ ರೋಟರಿ ಕ್ಲಬ್‌ ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕೈ ತೊಳೆಯುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುವ ಕಾರ್ಯಕ್ರಮಗಳನ್ನು ರೂಪಿಸಿರುವುದು ಶಿಕ್ಷಣ ಇಲಾಖೆಗೆ ಇನ್ನಷ್ಟು ಬಲ ಬಂದಂತಾಗಿದೆ ಎಂದರು.

ರೋಟರಿ ಕ್ಲಬ್‌ ಸುವರ್ಣ ಮಹೋತ್ಸವ ವರ್ಷಾಚರಣೆ ಸಮಿತಿ ಚೇರಮನ್‌ ಡಾ.ಶೇಖರ ಸಜ್ಜನರ ಮಾತನಾಡಿ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿಯು ಮಕ್ಕಳ ಆರೋಗ್ಯ ಜಾಗೃತಿ ಕುರಿತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರಿಯಾಗಿ ಕೈತೊಳೆಯುವ ಕ್ರಮ ಅನುಸರಿಸಿದರೆ, ಬಾಲ್ಯದಲ್ಲಿಯೇ ಇದನ್ನು ರೂಢಿಸಿಕೊಂಡರೆ ಉತ್ತಮ ಆರೋಗ್ಯ ರೂಪಿಸಿಕೊಳ್ಳಬಹುದು. ಸಂಸ್ಥೆಯು ಇದೀಗ ಶಾಲಾ ಮಕ್ಕಳಿಗೆ ಕೈ ತೊಳೆಯುವ ಬಗ್ಗೆ ಸರಿಯಾಗಿ ಮಾಹಿತಿಯೊಂದಿಗೆ ಪ್ರಾತ್ಯಕ್ಷಿಕೆ ನೀಡಲು ಮುಂದಾಗಿದೆ ಎಂದರು.

ಶಾಲೆ ಮುಖ್ಯೋಪಾಧ್ಯಾಯ ಎಸ್‌.ಎನ್‌.ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ, ಮಹೇಶಗೌಡ ಪಾಟೀಲ, ರೋಟರಿ ಕ್ಲಬ್‌ ಸುವರ್ಣ ಮಹೋತ್ಸವ ವರ್ಷಾಚರಣೆ ಸಮಿತಿ ಕಾರ್ಯದರ್ಶಿ ಶ್ರೀಧರ ಸುಲ್ತಾನಪೂರ, ಶಿಕ್ಷಕರ ಸಂಘದ ಅಧ್ಯಕ್ಷ ವಿ.ಜಿ.ಖೋಡೆ, ಎಂ.ಎನ್‌.ಮಕಾನದಾರ, ಸಿ.ಎಸ್‌.ನದಾಫ, ಎಸ್‌.ಎಸ್‌.ಪಿಳ್ಳೆ, ಕೆ.ಎಸ್‌.ಬೇಲೇರಿ,ಎಸ್‌.ಕೆ.ಮಂಗಳಗುಡ್ಡ, ವಿ.ಎನ್‌.ಸೋಳಂಕಿ, ಮಕಾನದಾರ ಇದ್ದರು.

ಕೆ.ಟಿ.ಪೂಜಾರ ಪ್ರಾರ್ಥಿಸಿದರು. ಜಿ.ಎಸ್‌.ಜತ್ತಿ ನಿರೂಪಿಸಿದರು. ಜೆ.ಜಿ.ಬಿಸರಳ್ಳಿ ವಂದಿಸಿದರು. ಕ್ಲಸ್ಟರ್‌ ನಂ. 4 ರ ಎಲ್ಲಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾಬೂನು ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ