ಆ್ಯಪ್ನಗರ

ಸಂಸ್ಕಾರ ಇದ್ದರೆ ಉತ್ತಮ ವ್ಯಕ್ತಿಯಾಗಲು ಸಾಧ್ಯ

ಗದಗ : ನಗರದ ಜ.ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ವರ್ಗದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

Vijaya Karnataka 14 Mar 2019, 5:00 am
ಗದಗ : ನಗರದ ಜ.ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ವರ್ಗದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
Vijaya Karnataka Web if there is a ritual it can be a good person
ಸಂಸ್ಕಾರ ಇದ್ದರೆ ಉತ್ತಮ ವ್ಯಕ್ತಿಯಾಗಲು ಸಾಧ್ಯ


ಜ.ತೋಂಟದಾರ್ಯ ಮಠದ ಜಾತ್ರಾ ಸಮಿತಿ ಅಧ್ಯಕ್ಷ ಡಾ.ಎಂ.ಬಿ.ನಿಂಬಣ್ಣವರ ಮಾತನಾಡಿ, ಜೀವನದಲ್ಲಿ ಒಬ್ಬ ವ್ಯಕ್ತಿ ಶ್ರೇಷ್ಠನಾಗಬೇಕಾದರೆ ಸಂಸ್ಕಾರ ಮತ್ತು ವಿದ್ಯೆ ಇದ್ದರೆ ಸಮಾಜಕ್ಕೆ ಮತ್ತು ದೇಶಕ್ಕೆ ಮಾದರಿ ಆಗುತ್ತಾನೆ ಎಂದರು.

ಸಂಸ್ಥೆ ಕಾರ್ಯದರ್ಶಿ ಎಸ್‌.ಎಸ್‌.ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳ ಹೃದಯ ಹೊಸ ಪಾಠಿ ಇದ್ದ ಹಾಗೆ, ಗುರುಗಳು ಹೇಗೆ ಅದರಲ್ಲಿ ಬರೆಯುತ್ತಾರೊ ಹಾಗೆಯೇ ಮಕ್ಕಳ ಜೀವನ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳು ಸದಾ ಗುರುಗಳ ಅನುಕರಣೆಕಂಡು, ಗುರುಗಳು ಹಾಗೆಯೇ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನವೆಂಬ ಜ್ಯೋತಿ ಬೆಳೆಸಿ ತಮ್ಮ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು. ಗುರುಗಳು ಮಕ್ಕಳಿಗೆ ಸರಳ ಹಾಗೂ ಸುಲಲಿತವಾಗಿ ಪಾಠ ಬೋಧನೆ ಮಾಡಿ ಕಲಿಕೆಗೆ ಸೂಕ್ತ ವೇದಿಕೆ ಕಲ್ಪಿಸಬೇಕು. ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗೆ ತೊಡಗಿಸಿಕೊಂಡು ಸೃಜನಾತ್ಮಕ, ಸಂಸ್ಕೃತಿ ಮತ್ತು ಸಂಸ್ಕಾರಗಳಿಂದ ಬೆಳೆಯಬೇಕು ಎಂದರು.

ಮಕ್ಕಳು ಸ್ವಹಸ್ತಾಕ್ಷ ರದಿಂದ ಕೂಡಿದ 'ಮಕ್ಕಳ ಮಂದಾರ' ಎಂಬ ಪುಸ್ತಕ ಬಿಡುಗಡೆಗೊಳಿಸಿದರು.

ಪ್ರಧಾನ ಗುರು ಎಸ್‌.ಆರ್‌.ಗಿಡ್ಡಕೆಂಚಣ್ಣವರ, ಎಸ್‌.ಎನ್‌.ಹಿರೇಮಠ, ಎಸ್‌.ಎಂ. ತುಪ್ಪದ, ಎಸ್‌.ಎಂ.ಬುರಡಿ, ಶಿವರಾಜ ಯಲಿಗಾರ, ಅಪೂರ್ವಾ ಖಟವಟೆ, ಶ್ರೇಯಾ ಚಿಕ್ಕಮಠ, ಬಿ.ಬಿ.ಇಬ್ರಾಹಿಂಪೂರ, ಎಸ್‌.ಇ.ದಾಮೋದರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ