ಆ್ಯಪ್ನಗರ

ಶರಣರ ವಿಚಾರ ತಿಳಿದರೆ ಬದುಕು ಸರಳ

ಶಿರಹಟ್ಟಿ : ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ, ಲೌಕಿಕತೆ ಅಷ್ಟೇ, ಅಲ್ಲಅಲೌಕಿಕತೆಯೂ ಮುಖ್ಯ. 12ನೇ ಶತಮಾನದ ಶರಣರ ದೃಷ್ಠಿಕೋನ ಅಥೈರ್‍ಸಿಕೊಂಡರೆ ಜೀವನ ಸರಳತೆಯೊಂದಿಗೆ ಸಾರ್ಥಕತೆಯ ದಾರಿಯಲ್ಲಿಸಾಗುತ್ತದೆ ಎಂದು ಎಫ್‌.ಎಂ.ಡಬಾಲಿ ಸಂಯುಕ್ತ ಪಪೂ ಮಹಾವಿದ್ಯಾಲಯದ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಹೇಳಿದರು.

Vijaya Karnataka 16 Oct 2019, 7:14 pm
ಶಿರಹಟ್ಟಿ : ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ, ಲೌಕಿಕತೆ ಅಷ್ಟೇ, ಅಲ್ಲಅಲೌಕಿಕತೆಯೂ ಮುಖ್ಯ. 12ನೇ ಶತಮಾನದ ಶರಣರ ದೃಷ್ಠಿಕೋನ ಅಥೈರ್‍ಸಿಕೊಂಡರೆ ಜೀವನ ಸರಳತೆಯೊಂದಿಗೆ ಸಾರ್ಥಕತೆಯ ದಾರಿಯಲ್ಲಿಸಾಗುತ್ತದೆ ಎಂದು ಎಫ್‌.ಎಂ.ಡಬಾಲಿ ಸಂಯುಕ್ತ ಪಪೂ ಮಹಾವಿದ್ಯಾಲಯದ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಹೇಳಿದರು.
Vijaya Karnataka Web if you know about surrender life is simple
ಶರಣರ ವಿಚಾರ ತಿಳಿದರೆ ಬದುಕು ಸರಳ


ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ರಾಮಲಿಂಗೇಶ್ವರ ದಾಸೋಹಮಠದಲ್ಲಿಶ್ರೀ ಬಸವರಾಜ ಸ್ವಾಮಿಗಳ 108 ದಿನದ ಶಿವಯೋಗಾನುಷ್ಠಾನದ ನಿಮಿತ್ತ ಶ್ರೀಗಳ ದರ್ಶನ ಹಾಗೂ ಆಧ್ಯಾತ್ಮಿಕ ಚಿಂತನ ಕಾರ‍್ಯಕ್ರಮದಲ್ಲಿಮಾತನಾಡಿದರು.

ಜನ್ಮ ನೀಡಿದ ತಾಯಿ ಹೆಣ್ಣಲ್ಲವೇ, ಒಂದು ಮನೆಯ ನಂದಾದೀಪ ಹೆಣ್ಣು, ಅಷ್ಟೇ ಅಲ್ಲದೇ ಸಮಾಜದ ಅವಿಭಾಜ್ಯ ಅಂಗವು ಸಹ ಹೆಣ್ಣೆ ಆಗಿದ್ದಾಳೆ. ನಿಜವಾಗಿಯೂ ಹೆಣ್ಣು, ಹೊನ್ನು, ಮಣ್ಣು ಇವು ಮಾಯೆಯಲ್ಲ. ಆದರೆ ಮನುಷ್ಯನ ಮನದ ಮುಂದಿರುವ ದುರಾಸೆಯೇ ಮಾಯೆ. ಮನುಷ್ಯ ತನ್ನ ಜೀವನದುದ್ದಕ್ಕೂ ಆಸೆ-ಆಮಿಷಗಳಿಗೆ ದಾಸನಾಗುತ್ತಾ ನಾನು ನನ್ನದು ಎಂಬ ಸ್ವಾರ್ಥಪರ ಚಿಂತನೆಯಲ್ಲಿಯೇ ಆಯುಷ್ಯಕಳೆಯುತ್ತಾನೆ. ಹುಟ್ಟು-ಸಾವಿನ ಮಧ್ಯದ ಈ ಬದುಕು ಸುಂದರವಾಗಬೇಕಾದರೆ ಇಂತಹ ಶ್ರೀಗಳ ದರ್ಶನ, ಹಿತವಚನದ ಪಾಲನೆ ಹಾಗೂ ಆಧ್ಯಾತ್ಮಿಕ ಚಿಂತನ ಕಾರ‍್ಯಕ್ರಮಗಳು ಪ್ರತಿಯೊಬ್ಬರಿಗೂ ದಾರಿದೀಪ.

ಹುಣ್ಣಿಮೆ ನಿಮಿತ್ತ ಬಸವರಾಜ ಶ್ರೀ ಭಕ್ತರಿಗೆ ದರ್ಶನವನ್ನು ನೀಡಿ ಶಿವಯೋಗಾನುಷ್ಠಾನಕ್ಕೆ ತೆರಳಿದರು.

ವೀರನಗೌಡ ಪಾಟೀಲ, ರಾಜೇಂದ್ರ ಹಲಗಲಿ, ತಿಮ್ಮರಡ್ಡಿ ಅಳವಂಡಿ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಸಿದ್ರಾಮಪ್ಪ ಮೊರಬದ, ಕೊಟ್ರೇಶ ಸಜ್ಜನರ, ನಾಗರಾಜ ಅಕ್ಕೂರ, ಶಿವನಗೌಡ ಪಾಟೀಲ, ಮದನಾಲ್‌ ಬಾಫಣಾ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ