ಆ್ಯಪ್ನಗರ

ಅಕ್ರಮ ಮದ್ಯ ವಶ

ಗದಗ : ಚುನಾವಣೆ ನೀತಿ ಸಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 42.030 ಲೀಟರ್‌ ಮದ್ಯ ಹಾಗೂ 7.80 ಲಿಟರ್‌ ಬೀಯರ್‌ ಸೇರಿದಂತೆ ಅಂದಾಜು 17,122 ರೂ.ಮೌಲ್ಯದ ಮದ್ಯವನ್ನು ಅಬಕಾರಿ ಉಪ ಆಯುಕ್ತ ಅಬೀದ್‌ ಹುಸೇನ್‌ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷ ಕ ಮಂಜುನಾಥ ಮಾಲಿಪಾಟೀಲ್‌ ಅವರ ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದಾರೆ.

Vijaya Karnataka 14 Mar 2019, 5:00 am
ಗದಗ : ಚುನಾವಣೆ ನೀತಿ ಸಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 42.030 ಲೀಟರ್‌ ಮದ್ಯ ಹಾಗೂ 7.80 ಲಿಟರ್‌ ಬೀಯರ್‌ ಸೇರಿದಂತೆ ಅಂದಾಜು 17,122 ರೂ.ಮೌಲ್ಯದ ಮದ್ಯವನ್ನು ಅಬಕಾರಿ ಉಪ ಆಯುಕ್ತ ಅಬೀದ್‌ ಹುಸೇನ್‌ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷ ಕ ಮಂಜುನಾಥ ಮಾಲಿಪಾಟೀಲ್‌ ಅವರ ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದಾರೆ.
Vijaya Karnataka Web illegal alcohol extraction
ಅಕ್ರಮ ಮದ್ಯ ವಶ


ತಾಲೂಕಿನ ಹುಲಕೋಟಿ ಗ್ರಾಮದ ರೇಣುಕಾ ಶಲವಡಿ ಅವರಿಗೆ ಸೇರಿದ ಅಂಗಡಿಯ ಮೇಲೆ ಅಬಕಾರಿ ದಾಳಿ ನಡೆಸಿ ಒಟ್ಟು 28.350 ಲೀಟರ್‌ ಮದ್ಯ ಹಾಗೂ 7.80 ಲಿಟರ್‌ ಬೀಯರ್‌ನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದನ್ನು ಜಪ್ತಿ ಮಾಡಿದ್ದಾರೆ. ಶಹರದ ಭೂಮರಡ್ಡಿ ಸರ್ಕಲ್‌ ಹತ್ತಿರದಲ್ಲಿ ನರಸಪ್ಪ ವಡವಿ ಇತನ ವಶದಲ್ಲಿದ್ದ ಒಟ್ಟು 13.680 ಲೀಟರ್‌ ಮದ್ಯ ವಶಪಡಿಸಿಕೊಂಡು ಆರೋಪಿಗಳÜನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಲ್‌.ಎಸ್‌ ಸಲಗರೆ, ಶ್ರೀಶೈಲ್‌ ಅವಜಿ, ಅಬಕಾರಿ ಉಪ ನಿರೀಕ್ಷ ಕ ಹೊನ್ನೂರು ವಲಿ, ಸುರೇಶಕುಮಾರ್‌ ಮಳೇಕರ್‌, ಎಸ್‌.ಎಸ್‌. ಹೊಳೆಯಣ್ಣವರ, ಅಂಬೊಜಿ ಹಾಲಕೇರಿ, ನಜೀರಸಾಬ ಖುದಾವಂದ, ಗಿರೀಶ ಮುದರಡ್ಡಿ, ಗುರುರಾಜ್‌ ವಸ್ತ್ರದ ದಾಳಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ