ಆ್ಯಪ್ನಗರ

ಮರಳು ಅಕ್ರಮ ಸಾಗಣೆ:ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

ಲಕ್ಷ್ಮೇಶ್ವರ : ಅಕ್ರಮ ಮರಳು ಸಾಗಣೆಯಲ್ಲಿ ಎರಡು ಕೋಮುಗಳ ನಡುವೆ ನಡೆದ ಮನಸ್ತಾಪ ಪೊಲೀಸರ ಮಧ್ಯಸ್ತಿಕೆಯಿಂದ ತಿಳಿಯಾದ ಘಟನೆ ಲಕ್ಷ್ಮೇಶ್ವರ ಠಾಣೆ ವ್ಯಾಪ್ತಿಯ ಪುಟಗಾಂವ ಬಡ್ನಿ ಗ್ರಾಮದಲ್ಲಿ ಬುಧವಾರ ನಡೆದಿದೆ.

Vijaya Karnataka 13 Jun 2019, 5:00 am
ಲಕ್ಷ್ಮೇಶ್ವರ : ಅಕ್ರಮ ಮರಳು ಸಾಗಣೆಯಲ್ಲಿ ಎರಡು ಕೋಮುಗಳ ನಡುವೆ ನಡೆದ ಮನಸ್ತಾಪ ಪೊಲೀಸರ ಮಧ್ಯಸ್ತಿಕೆಯಿಂದ ತಿಳಿಯಾದ ಘಟನೆ ಲಕ್ಷ್ಮೇಶ್ವರ ಠಾಣೆ ವ್ಯಾಪ್ತಿಯ ಪುಟಗಾಂವ ಬಡ್ನಿ ಗ್ರಾಮದಲ್ಲಿ ಬುಧವಾರ ನಡೆದಿದೆ.
Vijaya Karnataka Web illegal sanding of sand police aware of situation
ಮರಳು ಅಕ್ರಮ ಸಾಗಣೆ:ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು


ಸ್ಮಶಾನ ಭೂಮಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು.ಒಂದು ಕೋಮಿನ ಯುವನೊಬ್ಬ ಸ್ಮಶಾನ ಭೂಮಿಯಲ್ಲಿ ಮರಳು ಹೇರಲು ಹೋಗಿದ್ದಾನೆ. ಇದರಿಂದ ಇನ್ನೊಂದು ಕೋಮಿನ ಯುವ ಕಬರಸ್ಥಾನದಲ್ಲಿನ ಕಲ್ಲುಗಳನ್ನು ಹೇರಿಕೊಂಡು ಗ್ರಾಮದಲ್ಲಿ ತಂದು ಹಾಕಿದ್ದಾನೆ. ಇದರಿಂದ ಎರಡು ಗುಂಪುಗಳ ಮಧ್ಯ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.ಜನರು ಗುಂಪು ಗುಂಪಾಗಿ ಚರ್ಚೆ ಮಾಡತೊಂಡಗಿದರು.

ಪಿಎಸ್‌ಐ ವಿಶ್ವನಾಥ ಚೌಗಲೆ ನೇತೃತ್ವದಲ್ಲಿ ಪೊಲೀಸರು ಆಗಮಿಸಿ ಸ್ಥಳ ಪರಿಶೀಲಿಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಎಲ್ಲರೂ ಶಾಂತವಾಗಿರಿ ಎಂದು ಜನರಿಗೆ ತಿಳಿವಳಿಕೆ ನೀಡಿ ಜನರನ್ನು ಸಮಾಧಾನಗೊಳಿಸಿದರು.

ಸ್ಮಶಾನ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ ತಡೆಗಟ್ಟಲು ಗ್ರಾಪಂನವರು ಸ್ಮಶಾನ ಕಾಯಲು ಆಳುಗಳನ್ನು ಯಾವ ಪ್ರಯೋಜನವೂ ಆಗಿರಲಿಲ್ಲ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ