ಆ್ಯಪ್ನಗರ

ಊರೆಲ್ಲ ಕೆಸರು: ಹಾಳಾಯಿತು ಹೆಸರು

ನರಗುಂದ : ಶೇ.60ರಷ್ಟು ರೈತರು ತಿಂಗಳ ಮೊದಲ ವಾರದಲ್ಲಿ ಹೆಸರು ಬಿತ್ತನೆ ಮಾಡಿ ವರುಣ ದೇವರ ಮೋರೆ ಹೋದರೂ ಕರುಣೆ ತೋರದ ಮಳೆರಾಯ ಬಿತ್ತಿದ ಹೆಸರು ಬೀಜ ಹಾಳಾಗಿ ಹೋದ ನಂತರ ಗಂಟೆಗಟ್ಟಲೆ ತುಂತುರು ಮಳೆ ಸುರಿದು ಊರೆಲ್ಲ ಕೆಸರು ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

Vijaya Karnataka 24 Jun 2019, 5:00 am
ನರಗುಂದ : ಶೇ.60ರಷ್ಟು ರೈತರು ತಿಂಗಳ ಮೊದಲ ವಾರದಲ್ಲಿ ಹೆಸರು ಬಿತ್ತನೆ ಮಾಡಿ ವರುಣ ದೇವರ ಮೋರೆ ಹೋದರೂ ಕರುಣೆ ತೋರದ ಮಳೆರಾಯ ಬಿತ್ತಿದ ಹೆಸರು ಬೀಜ ಹಾಳಾಗಿ ಹೋದ ನಂತರ ಗಂಟೆಗಟ್ಟಲೆ ತುಂತುರು ಮಳೆ ಸುರಿದು ಊರೆಲ್ಲ ಕೆಸರು ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
Vijaya Karnataka Web in village sludge spoiled crop
ಊರೆಲ್ಲ ಕೆಸರು: ಹಾಳಾಯಿತು ಹೆಸರು


ಭಾನುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು, ಮಧ್ಯಾಹ್ನ 12 ಗಂಟೆಗೆ ತುಂತುರು ಮಳೆ ಆರಂಭವಾಗಿ ನಿರಂತರ ಒಂದು ಗಂಟೆ ಸುರಿಯಿತು. ರಾತ್ರಿ 7.20ರ ನಂತರ ಜಿಟಿ ಜಿಟಿ ಮಳೆ ಆರಂಭಗೊಂಡಿತ್ತು. ಇದರಿಂದ ವಾತಾವರಣ ತಂಪೇರಿದ್ದು ಜನ ಬೆಚ್ಚನೆ ಉಡುಪು ಧರಿಸಿ ಸಂಚರಿಸುತ್ತಿರುವುದು ಕಂಡು ಬಂದಿತು. ಮಳೆಗೆ ರಸ್ತೆಗಳು ಕೆಸರುಮಯವಾಗಿದ್ದರೆ, ಅಲ್ಲಲ್ಲಿ ಚರಂಡಿಗಳು ಕೆಸರು ತುಂಬಿಕೊಂಡು ರಸ್ತೆ ಮೇಲೆ ಹರಿಯುತ್ತಿತ್ತು.

ಜಿಟಿ ಜಿಟಿ ಮಳೆ ಸುರಿಯುತ್ತಿದ್ದಂತೆ ರೈತರಲ್ಲಿ ಮತ್ತೆ ಆಶಾಭಾವನೆ ಮೂಡಿದೆ. ಆದರೆ ಈಗಾಗಲೇ ಬಿತ್ತನೆ ಮಾಡಿದ ಬೀಜಗಳು ಶಕ್ತಿ ಕಳೆದುಕೊಂಡಿವೆ. ಮೊಳಕೆ ಒಡೆದ ಹೆಸರು ಬೆಳೆಗೆ ಮರುಜೀವ ತಂದು ಕೊಡಬಹುದು. ಆದರೆ ಇಳುವರಿ ಕುಂಠಿತಗೊಳ್ಳುವ ಆತಂಕ ಮನೆ ಮಾಡಿದೆ. ಅವಧಿ ಮುಗಿದ ನಂತರ ಮುಂಗಾರು ಮಳೆ ಕಾಲಿಟ್ಟಿದೆ. ಹೆಸರು ಬಿತ್ತನೆ ತಿಥಿ ಮುಗಿದು ಹೋಗಿದೆ. ಇದೆ ರೀತಿ ಮಳೆ ಸುರಿದರೆ ಸೂರ್ಯಕಾಂತಿ, ಶೇಂಗಾ, ಗೋವಿನ ಜೋಳ ಸೇರಿದಂತೆ ಮುಂತಾದ ಬೆಳೆ ಬಿತ್ತನೆಗೆ ಸಹಾಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ