ಆ್ಯಪ್ನಗರ

ಪ್ರೌಢಶಾಲಾ ಸಂಸತ್‌ ಉದ್ಘಾಟನೆ

ಹೊಳೆಆಲೂರ : ದೇಶದ ಸಂಸತ್ತಿನಲ್ಲಿ ಆಯ್ಕೆಯಾದ ಸದಸ್ಯರಿಗೆ ಯಾವ ರೀತಿ ಖಾತೆ ಹಂಚಿಕೆ ಮಾಡಿ ಜವಾಬ್ದಾರಿ ವಹಿಸಿ ಕೊಡುತ್ತಾರೋ ಅದೇ ರೀತಿಯ ಜ್ಞಾನ ವಿದ್ಯಾರ್ಥಿಗಳಲ್ಲಿ ಮೂಡಿ ಅವರಲ್ಲಿಯೂ ನಾಯಕತ್ವದ ಗುಣ ಬೆಳೆಸಲೆಂದು ಶಾಲೆಯಲ್ಲಿ ಸಂಸತ್‌ ರಚನೆ ಮಾಡಲಾಗುತ್ತದೆ ಎಂದು ಕಲ್ಮೇಶ್ವರ ವಿದ್ಯ ಪ್ರಸಾರಕ ಸಮಿತಿ ಕಾರ್ಯದರ್ಶಿ ಶಿವಣ್ಣ ಕಲ್ಯಾಣಿ ಹೇಳಿದರು.

Vijaya Karnataka 17 Jul 2019, 6:26 pm
ಹೊಳೆಆಲೂರ : ದೇಶದ ಸಂಸತ್ತಿನಲ್ಲಿ ಆಯ್ಕೆಯಾದ ಸದಸ್ಯರಿಗೆ ಯಾವ ರೀತಿ ಖಾತೆ ಹಂಚಿಕೆ ಮಾಡಿ ಜವಾಬ್ದಾರಿ ವಹಿಸಿ ಕೊಡುತ್ತಾರೋ ಅದೇ ರೀತಿಯ ಜ್ಞಾನ ವಿದ್ಯಾರ್ಥಿಗಳಲ್ಲಿ ಮೂಡಿ ಅವರಲ್ಲಿಯೂ ನಾಯಕತ್ವದ ಗುಣ ಬೆಳೆಸಲೆಂದು ಶಾಲೆಯಲ್ಲಿ ಸಂಸತ್‌ ರಚನೆ ಮಾಡಲಾಗುತ್ತದೆ ಎಂದು ಕಲ್ಮೇಶ್ವರ ವಿದ್ಯ ಪ್ರಸಾರಕ ಸಮಿತಿ ಕಾರ್ಯದರ್ಶಿ ಶಿವಣ್ಣ ಕಲ್ಯಾಣಿ ಹೇಳಿದರು.
Vijaya Karnataka Web GDG-16HLR1
ಹೊಳೆಆಲೂರಿನ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ನಡೆದ ಸಂಸತ್‌ ಉದ್ಘಾಟನೆಯನ್ನು ಶಿವಣ್ಣ ಕಲ್ಯಾಣಿ ನೆರವೇರಿಸಿದರು.


ಅವರು ಇಲ್ಲಿಯ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ನಡೆದ ಶಾಲೆ ಸಂಸತ್‌ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಅಣ್ಣಿಗೇರಿ ಅಧ್ಯಕ್ಷ ತೆ ವಹಿಸಿ, ಪ್ರಧಾನ ಮಂತ್ರಿ, ಕಾರ್ಯದರ್ಶಿ, ಆರೋಗ್ಯ ಮುಂತಾದ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಂಡಿದ್ದು ಶಾಲೆ ಅಭಿವೃದ್ಧಿಯಾಗಲು ಎಲ್ಲರೂ ಶ್ರಮಿಸಬೇಕೇಂದರು. ಎಸ್‌.ಕೆ. ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಎಂ. ಡುರೆ, ಕೆ.ಕೆ. ಅರಹುಣಸಿ, ಆರ್‌.ಎಚ್‌. ಪಾಟೀಲ, ಎಸ್‌.ಎಸ್‌. ಅಂದಾನಶೆಟ್ರ,ಬಿ.ಬಿ. ಖ್ಯಾಡದ, ಐ. ಎಂ. ಗಂಗೂರ ಉಪಸ್ಥಿತರಿದ್ದರು. ಪ್ರಧಾಯಾಗಿ ಎಸ್‌.ಎ. ಭೈರಜ ಆಯ್ಕೆಯಾದರು. ಎಂ. ಎಸ್‌. ಕರಡದ ಸ್ವಾಗತಿಸಿ, ನಿರೂಪಿಸಿದರು. ಎ.ಎನ್‌. ನದಾಫ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ