ಆ್ಯಪ್ನಗರ

ಬದುಕಲ್ಲಿ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಿ

ಗದಗ : ಧರ್ಮ ಸಂಸ್ಕಾರಗಳು ಮಾನವೀಯತೆಯ ಆಗರ. ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಸಂಸ್ಕಾರ ಅಳವಡಿಸಿಕೊಂಡು ಬಾಳಬೇಕೆಂದು ಶರಣೆ ರತ್ನಕ್ಕ ಪಾಟೀಲ ಹೇಳಿದರು.

Vijaya Karnataka 6 Aug 2019, 5:00 am
ಗದಗ : ಧರ್ಮ ಸಂಸ್ಕಾರಗಳು ಮಾನವೀಯತೆಯ ಆಗರ. ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಸಂಸ್ಕಾರ ಅಳವಡಿಸಿಕೊಂಡು ಬಾಳಬೇಕೆಂದು ಶರಣೆ ರತ್ನಕ್ಕ ಪಾಟೀಲ ಹೇಳಿದರು.
Vijaya Karnataka Web incorporate a good culture in life
ಬದುಕಲ್ಲಿ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಿ


ತಾಲೂಕಿನ ಕಬಲಾಯತಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕದಳಿ ಮಹಿಳಾ ವೇದಿಕೆ ಏರ್ಪಡಿಸಿದ್ದ ವಚನ ಸಿರಿ ಸೌರಭ ಹಾಗೂ ಅಮೃತ ಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶರಣರು ನುಡಿದಂತೆ ನಡೆದ ಮಹಾಪುರುಷರು ಅವರ ಒಂದೊಂದು ವಚನಗಳು ನಮಗೆ ದಾರಿದೀಪವಾಗಿವೆ ಎಂದರು.

ಕದಳಿ ವೇದಿಕೆ ಅಧ್ಯಕ್ಷೆ ಕವಿತಾ ದಂಡಿನ ಮಾತನಾಡಿ, ಪ್ರತಿ ವರ್ಷ ಕದಳಿ ಮಹಿಳಾ ವೇದಿಕೆಯಿಂದ ಶ್ರಾವಣ ಮಾಸದ ಅಂಗವಾಗಿ ಗ್ರಾಮೀಣ ಭಾಗದ ಶಾಲೆ ಆಯ್ದುಕೊಂಡು ಶಾಲಾ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಸಿಹಿ ಭೋಜನ ವ್ಯವಸ್ಥೆ ಮಾಡಿಕೊಂಡು ಬಂದಿದ್ದು ಇದಕ್ಕೆ ಸಹಕರಿಸಿದ ಸರ್ವ ದಾನಿಗಳನ್ನು ಸ್ಮರಿಸಿದರು.

ಹಾತಲಗೇರಿಯ ಕವಿ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, ಶರಣರ ವಚನಗಳು ತತ್ವಗಳಿಂದ ಕೂಡಿದ್ದು ಮಕ್ಕಳು ಅವುಗಳನ್ನು ಪ್ರತಿನಿತ್ಯ ಓದುವುದರಿಂದ ಸಂಸ್ಕಾರವು ಬೆಳೆದು ಬರುತ್ತದೆ ಎಂದರು. ಕದಳಿ ವೇದಿಕೆ ಈ ಕಾರ್ಯಕ್ರಮ ನಿಜವಾಗಿಯೂ ಪ್ರಶಂಸನೀಯ ಎಂದರು.

ಕಬಲಾಯತಕಟ್ಟಿ ಗ್ರಾಪಂ ಉಪಾಧ್ಯಕ್ಷೆ ಸಾಲವ್ವ ಲಮಾಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಹಿ ವಿತರಣೆಯೊಂದಿಗೆ ವಚನಗಳ ತಿಳಿವಳಿಕೆ ಮೂಡಿಸಿದ್ದು ಸಂತೋಷವನ್ನುಂಟು ಮಾಡಿದೆ ಎಂದರು.

ಬೆಳಧಡಿ ಗ್ರಾಪಂ ಮಾಜಿ ಅಧ್ಯಕ್ಷ ಶಂಭುಲಿಂಗಯ್ಯ ಕಲ್ಮಠ ಅಧ್ಯಕ್ಷ ತೆ ವಹಿಸಿದ್ದರು. ಸುನಂದಾ ಮಾಳೇಕೊಪ್ಪಮಠ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಎಸ್‌.ಐ.ನಾಯ್ಕರ್‌ ನಿರೂಪಿಸಿದರು.ಅಂಬಿಕಾ ಲಮಾಣಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ