ಆ್ಯಪ್ನಗರ

ಮೋದಿಯಿಂದ ದೇಶದ ಆದಾಯ ಹೆಚ್ಚಳ

ಡಂಬಳ: ವಾಜಪೇಯಿ ಅವರ ಕನಸನ್ನು ನರೇಂದ್ರ ಮೋದಿಯವರು ನನಸು ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಹಗಲು ದರೋಡೆ ಕೆಲಸ ಮಾಡುತ್ತಾರೆ ಎಂದು ಶಾಸಕ ಬಸವರಾಜ ಪಾಟೀಲ(ಯತ್ನಾಳ) ಹೇಳಿದರು.

Vijaya Karnataka 12 Apr 2019, 5:00 am
ಡಂಬಳ: ವಾಜಪೇಯಿ ಅವರ ಕನಸನ್ನು ನರೇಂದ್ರ ಮೋದಿಯವರು ನನಸು ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಹಗಲು ದರೋಡೆ ಕೆಲಸ ಮಾಡುತ್ತಾರೆ ಎಂದು ಶಾಸಕ ಬಸವರಾಜ ಪಾಟೀಲ(ಯತ್ನಾಳ) ಹೇಳಿದರು.
Vijaya Karnataka Web increase the countrys revenue from modi
ಮೋದಿಯಿಂದ ದೇಶದ ಆದಾಯ ಹೆಚ್ಚಳ


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಮೋದಿಯವರು ಇಡೀ ಜಗತ್ತಿಗೆ ದೇಶದ ತಾಕತ್ತನ್ನು ತೋರಿಸಿದ್ದಾರೆ. ಜಿಎಸ್‌ಟಿ ಜಾರಿ ತಂದ ಮೇಲೆ ದೇಶದ ಆರ್ಥಿಕ ಆದಾಯ ಏರಿಕೆಯಾಗಿದೆ. ದೇಶದ ಯುವಕರು ಜಾಗೃತರಾಗಿದ್ದು, ಅವರೆಲ್ಲ ಬಿಜೆಪಿಯೊಂದಿಗೆ ಕೈಜೋಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ನೀರಾವರಿ, ಕೃಷಿ ಉತ್ಪನ್ನಕ್ಕೆ ಒತ್ತು ನೀಡಲಾಗುವುದು. ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕೆನ್ನುವ ದೃಷ್ಟಿಯಿಂದ ಹಾವೇರಿ ಮತ್ತು ಗದಗನಲ್ಲಿ ಫುಡ್‌ಪಾರ್ಕ್‌ ಪ್ರಾರಂಭಿಸಲಾಗುವುದು. ನಿಮ್ಮ ಮತ್ತು ದೇಶದ ಸೇವೆಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿದರು. ಜಿ.ಪಂ.ಸದಸ್ಯೆ ಶಕುಂತಲಾ ಚವ್ಹಾಣ, ಮಂಜುನಾಥ ಕೊನ್ನೂರ, ಎಂ.ಎಸ್‌.ಕರಿಗೌಡ್ರ, ಎಸ್‌.ವಿ.ಪಾಟೀಲ, ಭೀರಪ್ಪ ಬಂಡಿ, ಸೋಮಶೇಖರ ಚೆನ್ನಳ್ಳಿ, ದೇವಪ್ಪ ಕಂಬಳಿ, ಗಂಗಣ್ಣ ಸೊರಟೂರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಅಂದಪ್ಪ ಹಾರೋಗೇರಿ, ಪ್ರಕಾಶ ಸಂಕಣ್ಣವರ, ಬಸವರಾಜ ಸಂಗನಾಳ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ