ಆ್ಯಪ್ನಗರ

ಯೋಗದಿಂದ ಉತ್ಸಾಹ ಹೆಚ್ಚಳ

ಗಜೇಂದ್ರಗಡ : ನಿತ್ಯ ಬದುಕಿನಲ್ಲಿ ಒಂದು ಗಂಟೆ ಯೋಗಕ್ಕೆ ಮೀಸಲಿಡಿ. ಇದರಿಂದ ಉತ್ಸಾಹ, ಉಲ್ಲಾಸದಿಂದ ಇರಲು ಸಾಧ್ಯ ಎಂದು ಭಗವಾನ್‌ ಮಹಾವೀರ ಜೈನ್‌ ಆಯುರ್ವೆದಿಕ್‌ ಮೆಡಿಕಲ್‌ ಕಾಲೇಜ ಹಾಗೂ ಪಿಜಿ ಸೆಂಟರ್‌ ವೈದ್ಯೆ ರೇಷ್ಮಾ ಕೋಲಕಾರ ಹೇಳಿದರು.

Vijaya Karnataka 17 Jun 2019, 5:00 am
ಗಜೇಂದ್ರಗಡ : ನಿತ್ಯ ಬದುಕಿನಲ್ಲಿ ಒಂದು ಗಂಟೆ ಯೋಗಕ್ಕೆ ಮೀಸಲಿಡಿ. ಇದರಿಂದ ಉತ್ಸಾಹ, ಉಲ್ಲಾಸದಿಂದ ಇರಲು ಸಾಧ್ಯ ಎಂದು ಭಗವಾನ್‌ ಮಹಾವೀರ ಜೈನ್‌ ಆಯುರ್ವೆದಿಕ್‌ ಮೆಡಿಕಲ್‌ ಕಾಲೇಜ ಹಾಗೂ ಪಿಜಿ ಸೆಂಟರ್‌ ವೈದ್ಯೆ ರೇಷ್ಮಾ ಕೋಲಕಾರ ಹೇಳಿದರು.
Vijaya Karnataka Web GDG-16GJD3
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಗಜೇಂದ್ರಗಡ ಮೈಸೂರಮಠದಲ್ಲಿ ಭಾನುವಾರ ಇನ್ನರ್‌ವ್ಹಿಲ್‌ ಕ್ಲಬ್‌ನಿಂದ ನಡೆಯುವ ಉಚಿತ ಯೋಗ, ಪ್ರಾಣಾಯಾಮ ಶಿಬಿರವನ್ನು ರೇಷ್ಮಾ ಕೋಲಕಾರ ಉದ್ಘಾಟಿಸಿದರು.


ಸ್ಥಳೀಯ ಮೈಸೂರಮಠದಲ್ಲಿ ಭಾನುವಾರ ಬೆಳಗ್ಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇನ್ನರ್‌ವ್ಹಿಲ್‌ ಕ್ಲಬ್‌ನಿಂದ ಜೂ. 21 ವರೆಗೆ ನಿತ್ಯ ನಡೆಯುವ ಉಚಿತ ಯೋಗ, ಪ್ರಾಣಾಯಾಮ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇನ್ನರ್‌ವ್ಹಿಲ್‌ ಅಧ್ಯಕ್ಷೆ ಮಂಜುಳಾ ರೇವಡಿ, ಯೋಗ ಬಲ್ಲವರ ಬಳಿ ರೋಗಗಳು ಸುಳಿಯುವುದಿಲ್ಲ. ಯೋಗ ಎಲ್ಲರ ನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಬೇಕು. ದೇಶದ ಪ್ರತಿಯೊಬ್ಬರ ಆರೋಗ್ಯ ರಕ್ಷ ಣೆಯಲ್ಲಿ ರಾಷ್ಟ್ರದ ಭವಿಷ್ಯ ಅಡಗಿದೆ. ಈ ಹಿನ್ನೆಲೆಯಿಂದ ನಿತ್ಯ ಯೋಗಭ್ಯಾಸ ಮಾಡಲು ಎಲ್ಲ ವಯೋಮಾನದವರು ಮುಂದಾಗಬೇಕು ಎಂದರು.

ಯಲಬುರ್ಗಾದ ಯೋಗ ಗುರು ಸುರೇಶ ಹೊಸಮನಿ, ವೀರೇಶ ಗಾಳಿ, ಶ್ರೀಕಾಂತ ದಲಬಂಜನ, ಲಕ್ಷ ್ಮಣಸಾ ಬಾಕಳೆ, ಸುವರ್ಣಾ ನಂದಿಹಾಳ, ಅನಸೂಯಾ ವಾಲಿ, ಎಸ್‌.ಪಿ. ಸಂಗಳದ, ಬಿ.ಟಿ. ಹೊಸಮನಿ, ಸುರೇಶ ಪತ್ತಾರ. ಎಂ.ಎಸ್‌. ಮಕಾನದಾರ, ಮೋನಿಕಾ ನಾಡೆ, ಶರಣಮ್ಮಾ ಅಂಗಡಿ, ಲಕ್ಷ್ಮಿ ಶೆಟ್ಟರ್‌, ಮೀನಾಕ್ಷಿ ಚುಂಚಾ, ಶಿವಾನಂದ ಮಠದ ಇನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ