ಆ್ಯಪ್ನಗರ

ಹೆಚ್ಚಿದ ಬಿಸಿಲಿನ ತಾಪ

ಗಜೇಂದ್ರಗಡ: ಬಿಸಿಲಿನ ಪ್ರಖರತೆಯಿಂದಾಗಿ ಪಟ್ಟಣದ ಜನತೆ ಕುಡಿಯುವ ನೀರಿನ ಅರವಟ್ಟಿಗೆ, ಎಳನೀರು, ಕಬ್ಬಿನ ಹಾಲು, ಕಲ್ಲಂಗಡಿ ಹಾಗೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.

Vijaya Karnataka 20 Mar 2020, 5:00 am
ಗಜೇಂದ್ರಗಡ: ಬಿಸಿಲಿನ ಪ್ರಖರತೆಯಿಂದಾಗಿ ಪಟ್ಟಣದ ಜನತೆ ಕುಡಿಯುವ ನೀರಿನ ಅರವಟ್ಟಿಗೆ, ಎಳನೀರು, ಕಬ್ಬಿನ ಹಾಲು, ಕಲ್ಲಂಗಡಿ ಹಾಗೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
Vijaya Karnataka Web increased sunlight temp
ಹೆಚ್ಚಿದ ಬಿಸಿಲಿನ ತಾಪ


ಪಟ್ಟಣದಲ್ಲಿಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಜನರು ತಂಪು ಪಾನೀಯ ಅಂಗಡಿಗಳತ್ತ ಮೊರೆ ಹೋಗುತ್ತಿದ್ದಾರೆ. ಪರಿಣಾಮ ನಗರಕ್ಕೆ ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸಿದ ಸುತ್ತಲಿನ ಗ್ರಾಮಗಳ ಜನತೆಯು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಕೊಡೆ ಹಾಗೂ ತಲೆಯ ಮೇಲೆ ಕರವಸ್ತ್ರ ಹೊತ್ತುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.

ನಗರದ ಯಾವುದೇ ರಸ್ತೆ ಸಂಚರಿಸಿದರೂ ಎಳೆನೀರು, ಕಲ್ಲಂಗಡಿ ಹಣ್ಣು, ಮೊಸಂಬಿ, ಪೈನಾಪಲ್‌ ಜ್ಯೂಸ್‌, ಕಬ್ಬಿನ ಹಾಲು, ಲಸ್ಸಿ, ಮಜ್ಜಿಗೆ, ಐಸ್‌ ಕ್ಯಾಂಡಿ, ಕುಲ್ಪಿ ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಗಜೇಂದ್ರಗಡ ನಗರದ ಸುತ್ತಲೂ ಗುಡ್ಡ ಆವರಸಿದೆ. ಹೀಗಾಗಿ ಸಹಜವಾಗಿಯೇ ಬಿಸಿಲಿನ ಝಳ ಹೆಚ್ಚಾಗುವಂತೆ ಮಾಡಿದೆ. ಬೆಸೀಗೆಯ ಆರಂಭದ ದಿನಗಳಲ್ಲಿಯೇ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದು ಜನತೆಯನ್ನು ಕೆಂಗೆಡಿಸಿದೆ.

ಬೇಸಿಗೆಯಲ್ಲಿಆರೋಗ್ಯದ ದೃಷ್ಟಿಯಿಂದ ತಂಪು ಪಾನೀಯಗಳಿಗಿಂತ ಎಳೆನೀರು ಕುಡಿಯುವುದು ಒಳ್ಳೆಯದು ಎಂಬುದು ವೈದ್ಯರ ಅಭಿಪ್ರಾಯ. ಪಟ್ಟಣ ಸುತ್ತಲಿನ ಕೊಳವೆಬಾವಿ ಆಶ್ರಿತ ತೋಟಗಳಿಂದ ಎಳೆನೀರು ತಂದು ಯುವಕರು ಮಾರಾಟದಲ್ಲಿತೊಡಗಿದ್ದಾರೆ. ಒಂದು ಎಳೆನೀರು ಕಾಯಿಗೆ 30 ರಿಂದ 40 ರೂ. ಇದ್ದು ಏಪ್ರಿಲ್‌ನಲ್ಲಿಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ