ಆ್ಯಪ್ನಗರ

ಹೆಚ್ಚುತ್ತಿರುವ ಸೈಬರ್‌ ಅಪರಾಧ

ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜ. ತೊಂಟದಾರ್ಯ ಕಾಲೇಜಿನಲ್ಲಿ ಪಂ.ಮದನ ಮೋಹನ ಮಾಳವಿಯಾ ರಾಷ್ಟ್ರೀಯ ಘಟಕ ಶಿಕ್ಷಕರ ಮತ್ತು ಬೋಧನ,ಕೊಲ್ಲಾಪುರ ಶಿವಾಜಿ ವಿವಿ ಹಾಗೂ ಕೆಎಲ್‌ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಬಿಸಿಎ ವಿಭಾಗದ ಸಹಯೋಗದಡಿಯಲ್ಲಿಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರ ಶ್ರೇಯೋಭಿವೃದ್ಧಿಗಾಗಿ ಸೈಬರ್‌ ಅಪರಾಧ ಸೆಕ್ಯೂರಿಟಿ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

Vijaya Karnataka 17 Sep 2019, 5:00 am
ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜ. ತೊಂಟದಾರ್ಯ ಕಾಲೇಜಿನಲ್ಲಿ ಪಂ.ಮದನ ಮೋಹನ ಮಾಳವಿಯಾ ರಾಷ್ಟ್ರೀಯ ಘಟಕ ಶಿಕ್ಷಕರ ಮತ್ತು ಬೋಧನ,ಕೊಲ್ಲಾಪುರ ಶಿವಾಜಿ ವಿವಿ ಹಾಗೂ ಕೆಎಲ್‌ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಬಿಸಿಎ ವಿಭಾಗದ ಸಹಯೋಗದಡಿಯಲ್ಲಿಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರ ಶ್ರೇಯೋಭಿವೃದ್ಧಿಗಾಗಿ ಸೈಬರ್‌ ಅಪರಾಧ ಸೆಕ್ಯೂರಿಟಿ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
Vijaya Karnataka Web increasing cyber crime
ಹೆಚ್ಚುತ್ತಿರುವ ಸೈಬರ್‌ ಅಪರಾಧ


ವಿಧಾನ ಪರಿಷತ್‌ ಸದಸ್ಯ ಪ್ರೊ.ಎಸ್‌.ವಿ.ಸಂಕನೂರ ಕಾರ್ಯಕ್ರಮ ಉದ್ಘಾಟಿಸಿ, ಅಂತರ್ಜಾಲದಲ್ಲಿಮೋಸ ಅನ್ಯಾಯದಿಂದ ಕಳ್ಳತನ ದರೋಡೆ ನಡೆಯುತ್ತಲಿದ್ದು ಅಕ್ಷರಸ್ಥರು ಮೋಸಕ್ಕೆ ಬಲಿಯಾಗುತ್ತಿದ್ದು ಕಳವಳಕಾರಿ ಸಂಗತಿ. ಇದರ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಾಗಾರ ಏರ್ಪಡಿಸಿದ್ದು ಸಂತಸದ ಸಂಗತಿ. ಮೋಸಕ್ಕೆ ಬಲಿಯಾಗದಂತೆ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬ ಕೌಶಲದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯ ಎಂದು ಸಲಹೆ ನೀಡಿದರು.

ಪದವಿ ಪ್ರಾ. ಸಿ.ಲಿಂಗಾರಡ್ಡಿ ಮಾತನಾಡಿ, ಸೈಬರ್‌ ಸೆಕ್ಯೂರಿಟಿ ಕುರಿತು ವಿವಿಧ ತಜ್ಞರು ತರಬೇತಿ ನೀಡುತ್ತಿದ್ದು ಸೈಬರ್‌ ಸೆಕ್ಯೂರಿಟಿ ಕಾರ್ಯಾಗಾರದ ಪ್ರಯೋಜನವನ್ನು ಸರ್ವರು ಪಡೆದು ಮೋಸದಿಂದ ಮುಕ್ತರಾಗಬೇಕೆಂದರು.

ಅನಿಕೇತ ಬದಾಮಿ, ಅಕ್ಷಯ ಕುತವಾಡ, ಸೌರಭ ಕುಲಕರ್ಣಿ, ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ವಿ.ಐ.ಕುರಗೋಡ, ಪ್ರೊ.ಎಚ್‌.ಎಸ್‌.ಕೌಲಗಿ, ಅಶೋಕ ನಿಲೂಗಲ, ವೀರೇಶ ಕೂಗು, ಈಶಣ್ಣ ಮುನವಳ್ಳಿ ಇದ್ದರು.

ವೈಶಾಲಿ ಪ್ರಾರ್ಥಿಸಿದರು. ಪ್ರೊ.ಎಂ.ಎಂ.ನರಗುಂದ ಸ್ವಾಗತಿಸಿದರು. ಪ್ರೊ.ಶ್ವೇತಾ ಗುಂಡಾ, ಪ್ರೊ.ಅರ್ಚನಾ ಪಾಟೀಲ್‌ ನಿರೂಪಿಸಿದರು. ಪ್ರೊ.ಎಸ್‌.ವಿ.ಅಂಗಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ