ಆ್ಯಪ್ನಗರ

ಭಾರತೀಯ ಮುಸ್ಲಿಮರಿಗೆ ತೊಂದರೆ ಇಲ್ಲ

ಗದಗ: ನಗರದ ವಾರ್ಡ್‌ 19 ರ ಬೂತ್‌ ನಂ. 68 ರ ಮುಲ್ಲಾಗಲ್ಲಿಯಲ್ಲಿಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ ನೇತೃತ್ವದಲ್ಲಿಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಜಾಗೃತಿ ಅಭಿಯಾನ ಕೈಗೊಳ್ಳಲಾಯಿತು.

Vijaya Karnataka 6 Jan 2020, 5:00 am
ಗದಗ: ನಗರದ ವಾರ್ಡ್‌ 19 ರ ಬೂತ್‌ ನಂ. 68 ರ ಮುಲ್ಲಾಗಲ್ಲಿಯಲ್ಲಿಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ ನೇತೃತ್ವದಲ್ಲಿಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಜಾಗೃತಿ ಅಭಿಯಾನ ಕೈಗೊಳ್ಳಲಾಯಿತು.
Vijaya Karnataka Web indian muslims have no problem
ಭಾರತೀಯ ಮುಸ್ಲಿಮರಿಗೆ ತೊಂದರೆ ಇಲ್ಲ


ದೇಶದ ಉದ್ದಗಲಕ್ಕೂ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಮುಸ್ಲಿಂ ಬಾಂಧವರಲ್ಲಿತಪ್ಪು ತಿಳಿವಳಿಕೆ ಮೂಡಿಸಲು ಹಲವಾರು ರಾಜಕೀಯ ಪಕ್ಷಗಳು ಪ್ರಯತ್ನ ಮಾಡುತ್ತಿದ್ದು, ಈ ಸುಳ್ಳು ಸುದ್ದಿಗೆ ದೇಶದ ಯಾವುದೇ ಮುಸ್ಲಿಮರು ಕಿವಿಗೊಡಬಾರದು. ಈ ದೇಶದಲ್ಲಿತಲೆತಲಾಂತರದಿಂದ ವಾಸಿಸುತ್ತಿರುವ ಮುಸ್ಲಿಮರು ಭಾರತ ಮಾತೆಯ ಸುಪುತ್ರರಾಗಿದ್ದಾರೆ.

ಈ ದೇಶದ ಸಂವಿಧಾನ ಅಲ್ಪಸಂಖ್ಯಾತರ ಮಾನ್ಯತೆಯನ್ನು ನೀಡಿ ಕಾಪಾಡುತ್ತಿದೆ. ಎಲ್ಲಧರ್ಮ ಹಾಗೂ ಸಮಾಜದ ಬಂಧುಗಳು ಸಹೋದರರಂತೆ ಜೀವಿಸುತ್ತಿರುವುದನ್ನು ಸಹಿಸದ ಕೆಲ ಸಮಾಜಘಾತಕ ಶಕ್ತಿಗಳು ಹಾಗೂ ರಾಜಕೀಯ ಪಕ್ಷಗಳು ಅದರಲ್ಲೂವಿಶೇಷವಾಗಿ ಕಾಂಗ್ರೆಸ್‌ ಪಕ್ಷವು ತನ್ನ ರಾಜಕೀಯ ಹಿತಾಸಕ್ತಿಗಾಗಿ ಮುಸ್ಲಿಂ ಸಮಾಜವನ್ನು ದಾರಿ ತಪ್ಪಿಸುವ ಕಾರ್ಯ ಕೈಗೊಂಡಿದೆ. ಈ ಕಾಯಿದೆ ಜಾರಿಯಿಂದ ಈ ದೇಶದಲ್ಲಿಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪಘಾನಿಸ್ತಾದಿಂದ ಭಾರತಕ್ಕೆ ಆಗಮಿಸಿರುವ ಅಲ್ಲಿಯ ಅಲ್ಪಸಂಖ್ಯಾತ ಬಂಧುಗಳಾದ ಹಿಂದು, ಕ್ರೈಸ್ತ, ಪಾರ್ಸಿ, ಬೌದ್ಧ, ಸಿಕ್‌ ಹಾಗೂ ಜೈನ್‌ ಬಾಂಧವರಿಗೆ ಪೌರತ್ವ ನೀಡಿ ಈ ದೇಶದ ಎಲ್ಲನಾಗರಿಕರಂತೆ ಸಮಾನ ಹಕ್ಕುನ್ನು ನೀಡಲಾಗುತ್ತದೆ ಎಂದರು.

ಈ ದೇಶದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪಘಾನಿಸ್ತಾನ ದೇಶಗಳಿಂದ ಬಂದಂತಹ ಒಳನುಸುಳುಕೋರರಿಂದ ದೇಶಕ್ಕೆ ಆಗುತ್ತಿರುವ ಹಾನಿ ತಪ್ಪಿಸುವುದಕ್ಕಾಗಿ ಮಾತ್ರ ಈ ಕಾಯಿದೆ ಜಾರಿಗೆ ಬಂದಿದೆ ಎಂದರು.

ಈ ಸಂದರ್ಭದಲ್ಲಿಶಂಕರ ಕರಿಬಿಷ್ಟಿ, ಗಂಗಾಧರ ಹಬೀಬ, ಕಿರಣ ಕಲಾಲ, ಮಾಂತೇಶ ನಲವಡಿ, ಸಿದ್ರಾಮೇಶ ಹಿರೇಮಠ, ಸುರೇಶ ಚಿತ್ತರಗಿ, ಅಶೋಕ ಉಳ್ಳಾಗಡ್ಡಿ, ಬಾಬು ಯಲಿಗಾರ, ಅರವಿಂದ ಹಬೀಬ, ಮಂಜು ಆಲೂರ ಹಾಗೂ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ