ಆ್ಯಪ್ನಗರ

ಲಕ್ಷ್ಮೇಶ್ವರ: ಸೂರ‍್ಯ'ಕಾಂತಿ' ಕುಂದಿಸುತ್ತಿರುವ ಕೀಟ, ರೈತರಿಗೆ ಸಂಕಟ

ಉತ್ತಮ ಆದಾಯದ ನಿರೀಕ್ಷೆಯಿಂದ, ಮಾರುಕಟ್ಟೆಯಲ್ಲಿ ಸೂರ್ಯಕಾಂತಿಗೆ ಉತ್ತಮ ಬೆಲೆ ಇರುವುದರಿಂದ ಅನೇಕ ರೈತರು ಶೇಂಗಾ, ಹೆಸರು ಬೆಳೆದ ಹೊಲ ಹದಗೊಳಿಸಿ ಮತ್ತು ನೀರಾವರಿ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದಿದ್ದಾರೆ.

Vijaya Karnataka 16 Oct 2021, 5:10 pm
ಲಕ್ಷ್ಮೇಶ್ವರ (ಗದಗ): ತಾಲೂಕಿನಲ್ಲಿ ಹಿಂಗಾರಿ ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿಗೆ ಇದೀಗ ಕೀಟಬಾಧೆ ಆವರಿಸಿದ್ದು ತಪ್ಪದ ಕೀಟಬಾಧೆಯಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ.
Vijaya Karnataka Web ಸೂರ್ಯಕಾಂತಿ
ಸೂರ್ಯಕಾಂತಿ


ಮುಂಗಾರಿನಲ್ಲಿಅತಿವೃಷ್ಟಿ, ಹವಾಮಾನ ವೈಪರೀತ್ಯ, ಕೀಟ, ರೋಗಬಾಧೆ ಸಂಕಷ್ಟದಿಂದ ರೈತ ಸಮುದಾಯ ಪಾರಾಗುವಷ್ಟರಲ್ಲಿಯೇ ಮತ್ತೆ ಹಿಂಗಾರಿನ ಬಿತ್ತನೆ ಚಿಂತೆ. ಬಿತ್ತನೆ ಮಾಡಿ ಬೆಳೆದ ಬೆಳೆದ ಪೈರಿಗೆ ಕೀಟ ಆವರಿಸಿದ್ದರಿಂದ ಕಷ್ಟ ತಪ್ಪದಂತಾಗಿದೆ.

ಮುಂಗಾರಿನ ಶೇಂಗಾ, ಹತ್ತಿ, ಉಳ್ಳಾಗಡ್ಡಿಯಂತಹ ವಾಣಿಜ್ಯ ಬೆಳೆ ಕೆಲ ರೈತರ ಕೈ ಹಿಡಿದರೆ, ಕೆಲ ರೈತರು ಕೈ ಸುಟ್ಟುಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯದ ನಿರೀಕ್ಷೆಯಿಂದ ಮತ್ತು ಸದ್ಯ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಗೆ ಉತ್ತಮ ಬೆಲೆ ಇರುವುದರಿಂದ ಅನೇಕ ರೈತರು ಶೇಂಗಾ, ಹೆಸರು ಬೆಳೆದ ಹೊಲ ಹದಗೊಳಿಸಿ ಮತ್ತು ನೀರಾವರಿ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದಿದ್ದಾರೆ. ಸೆಪ್ಟಂಬರ್‌ ಮೊದಲ ವಾರದಲ್ಲಿ ಬಿತ್ತನೆ ಮಾಡಿದ ಬೆಳೆ ಹುಲುಸಾಗಿ ಬೆಳೆದು ನಿಂತಿದೆ. ಆದರೆ ಬೆಳೆ ತುಂಬ ಕೀಟ, ಕಂಬಳಿ ಹುಳಗಳು ಆವರಿಸಿಕೊಂಡು ಎಲೆಗಳನ್ನು ಸಂಪೂರ್ಣ ತಿಂದು ದೇಟು ಮಾತ್ರ ಉಳಿಯುತ್ತಿರುವುದರಿಂದ ರೈತರು ಚಿಂತೆಗೊಳಗಾಗಿದ್ದಾರೆ.

6250 ಎಕರೆಯಲ್ಲಿ ಸೂರ್ಯಕಾಂತಿ

ಗದಗದ ಲಕ್ಷ್ಮೇಶ್ವರ ತಾಲೂಕಿನಲ್ಲಿ ಖುಷ್ಕಿ ಮತ್ತು ನೀರಾವರಿ ಸೇರಿ ಒಟ್ಟು 6250 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಲಕ್ಷ್ಮೇಶ್ವರ, ಶಿಗ್ಲಿ, ಸೂರಣಗಿ, ಬಡ್ನಿ, ಗೊಜನೂರ, ಅಡರಕಟ್ಟಿ, ಆದ್ರಳ್ಳಿ, ಹರದಗಟ್ಟಿ, ದೊಡ್ಡೂರ ವ್ಯಾಪ್ತಿಯ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಪ್ರಾರಂಭದಲ್ಲಿಯೇ ಕೀಟದಿಂದ ಇಳುವರಿ ಕುಸಿತದ ಜತೆಗೆ ಕಾಳು ಟೊಳ್ಳಾಗುವ ಆತಂಕ ರೈತರದ್ದಾಗಿದೆ. ಕೀಟ ನಿಯಂತ್ರಣಕ್ಕಾಗಿ ರೈತರು ಕ್ರಿಮಿನಾಶಕ ಸಿಂಪಡಣೆ ಕಾರ್ಯದಲ್ಲಿ ತೊಡಗಿದ್ದಾರೆ.

ನಿರಂತರ ಮಳೆಯಿಂದ ಇಳುವರಿ ಕುಂಠಿತ: ಮಾರುಕಟ್ಟೆಯಲ್ಲಿ ಏರುತ್ತಿದೆ ಈರುಳ್ಳಿ ರೇಟು

ಭೂಮಿಯಲ್ಲಿನ ಹಸಿರು, ಹವಾಮಾನದಿಂದ ಈ ರೀತಿಯ ಕೀಟಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿದೆ.ಆರಂಭದಲ್ಲಿಯೇ ಗಮನಿಸಿ ಎಲೆ ತಿನ್ನುವ ಸ್ಪೋಡೋಪ್ಪೆರಾ ಮತ್ತು ಕಂಬಳಿ ಹುಳು ತಡೆಯಲು ಕ್ರಿಮಿನಾಶಕ ಸಿಂಪಡಣೆ ಮಾಡಬೇಕು. ಪ್ರತಿ ಎಕರೆಗೆ 8.ಕಿಗ್ರಾಂ ಮೆಲಾಥಿಯನ್‌ ಪುಡಿ ಸಿಂಪಡಿಸಬಹುದು. ಅಥವಾ ಪ್ರತಿ ಲೀ. ನೀರಿಗೆ 0.5 ಮಿ.ಲೀ ಲ್ಯಾಮ್ಡಾ ಸೈಲೋರ್ಥಿನ್‌, 2 ಮಿ.ಲೀ ಕ್ವಿನಾಲ್‌ಪಾಸ್‌ ಸಿಂಪಡಣೆ ಮಾಡಬೇಕು.
-ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ

ಪ್ರತಿ ಎಕರೆಗೆ ಬೀಜ, ಗೊಬ್ಬರ, ಆಳಿನ ಖರ್ಚು ಸೇರಿ ಈಗಾಗಲೇ ಕನಿಷ್ಠ 5 ಸಾವಿರ ರೂ. ಖರ್ಚು ಮಾಡಲಾಗಿದೆ. 1 ತಿಂಗಳ ಕಾಲದ ಬೆಳೆಗೆ ದೊಡ್ಡ ಪ್ರಮಾಣದಲ್ಲಿ ಕಂಬಳಿ ಹುಳು ಆವರಿಸಿಕೊಂಡು ಬೆಳಗಾಗುವಷ್ಟರಲ್ಲಿ ಎಲೆ ತಿಂದು ಬೆಳೆ ಹಾಳು ಮಾಡುತ್ತಿವೆ. ಮೊದಲೇ ಮುಂಗಾರಿನ ಬೆಳೆಹಾನಿಯಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು ಮತ್ತೇ ಕ್ರಿಮಿನಾಶಕ ಸಿಂಪಡಣೆಗೆ ಖರ್ಚು ಭರಿಸುವುದು ಕಷ್ಟವಾಗಿದೆ.
-ಬಾಬಣ್ಣ ಕಳ್ಳಿ,ಲಕ್ಷ್ಮೇಶ್ವರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ