ಆ್ಯಪ್ನಗರ

ಕಟ್ಟಡ ಕಾರ್ಮಿಕರ ಬದಕು ರಕ್ಷಿಸಲು ಒತ್ತಾಯ

ಗಜೇಂದ್ರಗಡ : ಸಾಮಾಜಿಕ ಸುರಕ್ಷಾ ಸಂಹಿತೆ ಕಲ್ಯಾಣ ಮಸೂದೆ 2018 ಕೈಬಿಟ್ಟು ಕಟ್ಟಡ ಕಾರ್ಮಿಕ ಕಾನೂನು 1996 ಹಾಗೂ ಸೆಸ್‌ ಕಾನೂನು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕರ ಬದುಕು ರಕ್ಷಿಸಲು ಕೇಂದ್ರ ಸರಕಾರ ಮುಂದಾಗಬೇಕು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ರಾಜ್ಯ ಉಪಾಧ್ಯಕ್ಷ ಹರೀಶ ನಾಯಕ ಒತ್ತಾಯಿಸಿದರು.

Vijaya Karnataka 5 Nov 2019, 5:00 am
ಗಜೇಂದ್ರಗಡ : ಸಾಮಾಜಿಕ ಸುರಕ್ಷಾ ಸಂಹಿತೆ ಕಲ್ಯಾಣ ಮಸೂದೆ 2018 ಕೈಬಿಟ್ಟು ಕಟ್ಟಡ ಕಾರ್ಮಿಕ ಕಾನೂನು 1996 ಹಾಗೂ ಸೆಸ್‌ ಕಾನೂನು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕರ ಬದುಕು ರಕ್ಷಿಸಲು ಕೇಂದ್ರ ಸರಕಾರ ಮುಂದಾಗಬೇಕು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ರಾಜ್ಯ ಉಪಾಧ್ಯಕ್ಷ ಹರೀಶ ನಾಯಕ ಒತ್ತಾಯಿಸಿದರು.
Vijaya Karnataka Web insist on protecting the lives of building workers
ಕಟ್ಟಡ ಕಾರ್ಮಿಕರ ಬದಕು ರಕ್ಷಿಸಲು ಒತ್ತಾಯ


ಸ್ಥಳೀಯ ವಿಜಯ ಕಾಲೊನಿಯಲ್ಲಿನಡೆದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಸಂಘಟನೆ ಗಜೇಂದ್ರಗಡ ತಾಲೂಕು ಪ್ರಥಮ ಸಮ್ಮೇಳನ, ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಕಟ್ಟಡ ನಿರ್ಮಾಣ ಮಾಡಿಕೊಳ್ಳುವ ಮಾಲೀಕರಿಗೆ ಸಮರ್ಪಕ ಮರಳು ನೀಡಲು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಿರಂತರ ಉದ್ಯೋಗ ಸಿಗುವಂತಾಗಲು ಜಿಲ್ಲಾಡಳಿತ, ತಾಲೂಕು ಆಡಳಿತ ಸಮರ್ಪಕ ಮರಳು ನೀಡಲು ಮುಂದಾಗಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತ್ವರಿತವಾಗಿ ಎಲ್ಲಸೌಲಭ್ಯ ನೀಡಲು ಆಗ್ರಹಿಸಿದರು.

ಕಾರ್ಮಿಕರು ಹಲವು ವರ್ಷಗಳ ಕಾಲ ಹೋರಾಟ ನಡೆಸಲಾಗಿದೆ. ಕಾನೂನು ಮೂಲಕ ದೊರಕುತ್ತಿದ್ದ ಸೌಲಭ್ಯ ಇಲ್ಲದಂತೆ ಮಾಡುವ ಹುನ್ನಾರದ ವಿರುದ್ದ ಕಟ್ಟಡ ಕಾರ್ಮಿಕ ಕಾನೂನು 1996 ಉಳಿಸಿ-ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಿ ಎನ್ನುವ ವಿಶಾಲ ಆಂದೋಲನ ಚುನಾವಣೆ ಪೂರ್ವದಲ್ಲೇ ರಾಜ್ಯದ ಸಂಸದರ ಮನೆಗಳ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಹೀಗಿದ್ದರೂ ಕೇಂದ್ರ ಸರಕಾರ ಈಗಾಗಲೇ ಕಟ್ಟಡ ಕಾರ್ಮಿಕರ ವಿರೋಧಿಯಾದ ಸಾಮಾಜಿಕ ಸುರಕ್ಷಾ ಸಂಹಿತೆ ಕಲ್ಯಾಣ ಮಸೂದೆ 2018ನ್ನು ಕುರಿತ ಮಸೂದೆ ಸಂಸತ್ತಿನಲ್ಲಿಮಂಡಿಸಿ ಪಾಸು ಮಾಡಿದರೆ ಕೋಟ್ಯಂತರ ಕಟ್ಟಡ ವಲಯದ ಕಾರ್ಮಿಕರಿಗೆ ಈಗ ಸಿಗುತ್ತಿರುವ 14 ಸೌಲಭ್ಯ ಇಲ್ಲದಂತಾಗುತ್ತವೆ ಎಂದರು.

ಜಿಲ್ಲಾಸಂಚಾಲಕ ಪೀರು ರಾಠೋಡ ಮಾತನಾಡಿ, ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಮದುವೆ, ಪಿಂಚಣಿ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯಗಳು ಬಾಕಿ ದೊರಕಿಸಬೇಕು ಎಂದು ಒತ್ತಾಯಿಸಿದರು.

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಗಳು ವಿತರಣೆ ಮಾಡಿದರು. ಸಿಐಟಿಯು ಜಿಲ್ಲಾಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ. ಎಸ್‌. ಹಡಪದ, ದೇವಲೆಪ್ಪ ರಾಠೋಡ, ಪ್ರಕಾಶ ಕಲ್ಗುಡಿ. ಅಂದಪ್ಪ ಕುರಿ, ಮೈಬು ಹವಾಲ್ಹಾರ. ನಜೀರ ಮಾಲ್ದಾರ. ಕನಕವ್ವ ಮಾದರ ಇನ್ನಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ