ಆ್ಯಪ್ನಗರ

ಹೆದ್ದಾರಿ ಪಕ್ಕದಲ್ಲಿ ಸಸಿ ಹಚ್ಚಲು ಒತ್ತಾಯ

ಗದಗ : ತಾಲೂಕಿನ ಹುಲಕೋಟಿಯ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಪರಿಸರ ಜಾಗೃತಿ ಜಾಥಾ ಹಾಗೂ ರಸ್ತೆ ಗುತ್ತಿಗೆ ಪಡೆದ ಕೆಎನ್‌ಆರ್‌ ಕಂಪನಿಗೆ ಪರಿಸರದ ಮಹತ್ವ ತಿಳಿಸಲು ಪ್ರತಿಭಟನೆ ಮೂಲಕ ಮನವಿ ಮಾಡಲಾಯಿತು.

Vijaya Karnataka 16 Jun 2019, 5:00 am
ಗದಗ : ತಾಲೂಕಿನ ಹುಲಕೋಟಿಯ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಪರಿಸರ ಜಾಗೃತಿ ಜಾಥಾ ಹಾಗೂ ರಸ್ತೆ ಗುತ್ತಿಗೆ ಪಡೆದ ಕೆಎನ್‌ಆರ್‌ ಕಂಪನಿಗೆ ಪರಿಸರದ ಮಹತ್ವ ತಿಳಿಸಲು ಪ್ರತಿಭಟನೆ ಮೂಲಕ ಮನವಿ ಮಾಡಲಾಯಿತು.
Vijaya Karnataka Web GDG-15RUDRAGOUD11
ಗದಗ ತಾಲೂಕಿನ ಹುಲಕೋಟಿಯ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಸಸಿಗಳನ್ನು ನೆಡಲು ಒತ್ತಾಯಿಸಿ ಯುವಕರು ಪ್ರತಿಭಟನೆ ಮಾಡಿದರು.


ಗದಗ-ಹುಬ್ಬಳ್ಳಿ ರಸ್ತೆಯ ಹೆದ್ದಾರಿ ದುರಸ್ಥಿ ಕಾಮಗಾರಿ ಗುತ್ತಿಗೆ ಪಡೆದಿರುವಂತಹ ಕೆಎನ್‌ಆರ್‌ ಕಂಪನಿಗೆ ರಸ್ತೆ ದುರಸ್ಥಿ ವೇಳೆ ಮರಗಳು ನಶಿಸಿ ಹೋಗಿದೆ. ಹೀಗಾಗಿ ಪ್ರಕೃತಿಗೆ ತುಂಬಲಾಗದ ನಷ್ಟವೇ ಉಂಟಾಗಿದೆ. ಅದರ ನಷ್ಟವನ್ನು ಕೊಂಚ ಮಟ್ಟಿಗೆ ತುಂಬಲು ಗ್ರಾಮದ ಯುವಕರು ಹಾಗೂ ಸಚಿನ ಪಾಟೀಲರ ಪರಿಸರ ಬಗೆಗಿನ ಕಾಳಜಿಯ ಫಲವಾಗಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಪರಿಸರ ಜಾಗೃತಿಗಾಗಿ ಜಾಥಾ ಹಾಗೂ ಗುತ್ತಿಗೆದಾರರಿಗೆ ಸಾವಿರಕ್ಕೂ ಹೆಚ್ಚು ಗಿಡ ನೆಡಲು ಪ್ರತಿಭಟನೆ ಮೂಲಕ ಒತ್ತಾಯಿಸಲಾಯಿತು.

ವಿಶ್ವ ಪರಿಸರದಿನದಂದು ಸಚಿನ ಪಾಟೀಲ ಅವರು ಯುವಕರಿಗೆ ಒಂದು ತಿಂಗಳಲ್ಲಿ 500 ಸಸಿ ನೆಡಲು ಪ್ರತಿಜ್ಞೆ ಮಾಡಿ ಯುವಕರಿಗೆ ಪರಿಸರ ಜಾಗೃತಿಯನ್ನು ಮೂಡಿಸಿದ್ದರಿಂದ ಹುಲಕೋಟಿ ಗ್ರಾಮದ ಯುವಕರು ಪ್ರೇರಣೆಗೊಂಡಿದ್ದರಿಂದ ಗಿಡಗಳನ್ನು ನಡೆಯುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ರಮೇಶ ಹೊನ್ನಿನಾಯಕರ, ರಮೇಶ ಕರಿಕಟ್ಟಿ, ಮುದಾಸೀರ ಬಾಳೆಕುಂದ್ರಿ, ಇಮಾಮ್‌ ತಹಸೀಲ್ದಾರ, ಈರಣ್ಣ ಹಂಪನ್ನವರ, ಮಂಜು ಹಂಗನಕಟ್ಟಿ, ಮಂಜು ಗೋಣಿ, ಶಿವು ಎಲಿಶೆಟ್ಟರ್‌, ಸುರೇಶ ಕರಿಕಟ್ಟಿ, ರಾಘು ಹಾದಿಮನಿ, ಹಾಲೇಶ ಕೆಂಬಾವಿಮಠ, ಮಂಜು ತಿರ್ಲಾಪೂರ, ಮಂಜು ಬಳಗಾನೂರ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ