ಆ್ಯಪ್ನಗರ

ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ

ನರಗುಂದ : ಇಂದಿನ ಮಕ್ಕಳಲ್ಲಿ ಆಟ ಪಾಠದ ಜತೆಗೆ ದೇಶ ಭಕ್ತಿ, ದೇಶಾಭಿಮಾನ ಮೂಡಿಸುವುದು ಅವಶ್ಯವಾಗಿದ್ದು ಪ್ರತಿ ಶಾಲೆಯಲ್ಲೂ ಸ್ಕೌಟ್ಸ್‌, ಗೈಡ್ಸ್‌ನಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರೆರೇಪಿಸಬೇಕು ಎಂದು ಸ್ಕೌಟ್ಸ್‌, ಗೈಡ್ಸ್‌ ಸಂಸ್ಥೆ ಅಧ್ಯಕ್ಷ ಎಂ.ಆರ್‌.ಕಾಳೆ ಸಲಹೆ ನೀಡಿದರು.

Vijaya Karnataka 26 Aug 2019, 5:36 pm
ನರಗುಂದ : ಇಂದಿನ ಮಕ್ಕಳಲ್ಲಿ ಆಟ ಪಾಠದ ಜತೆಗೆ ದೇಶ ಭಕ್ತಿ, ದೇಶಾಭಿಮಾನ ಮೂಡಿಸುವುದು ಅವಶ್ಯವಾಗಿದ್ದು ಪ್ರತಿ ಶಾಲೆಯಲ್ಲೂ ಸ್ಕೌಟ್ಸ್‌, ಗೈಡ್ಸ್‌ನಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರೆರೇಪಿಸಬೇಕು ಎಂದು ಸ್ಕೌಟ್ಸ್‌, ಗೈಡ್ಸ್‌ ಸಂಸ್ಥೆ ಅಧ್ಯಕ್ಷ ಎಂ.ಆರ್‌.ಕಾಳೆ ಸಲಹೆ ನೀಡಿದರು.
Vijaya Karnataka Web instill patriotism in children
ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ


ಇಲ್ಲಿನ ಶಾಸಕರ ಮಾದರಿ ಶಾಲೆ ನಂ.1 ಶಾಲೆಯಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಸಂಸ್ಥೆ ಬೆಂಗಳೂರು, ಭಾರತ್‌ ಸ್ಕೌಟ್ಸ್‌, ಗೈಡ್ಸ್‌ ಜಿಲ್ಲಾ ಸಂಸ್ಥೆ ಗದಗ ಮತ್ತು ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರ್ಯಾಲಯ ಹಾಗೂ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ತಾಲೂಕು ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ದೇಶಭಕ್ತಿ ಗೀತೆಗಳ ಗೀತಗಾಯನ ಸ್ಫರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ರೀತಿಯಲ್ಲಿ ಹಾಡಿ, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಭಾಗವಹಿಸುವಂತಾಗಲಿ ಎಂದರು ಶುಭ ಹಾರೈಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಫ್‌. ಮಜ್ಜಗಿ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಲು ಸಹಾಯವಾಗುತ್ತದೆ ಎಂದರು.

ಶಿವಕುಮಾರ ಮಾತನಾಡಿದರು. ತಾಲೂಕಿನ ವಿವಿಧ ಶಾಲೆಗಳಿಂದ 10 ಗೈಡ್ಸ್‌ ತಂಡ ಹಾಗೂ 5 ಶಾಲೆಗಳಿಂದ ಸ್ಕೌಟ್ಸ್‌ ತಂಡಗಳು ಭಾಗವಹಿಸಿದ್ದವು. ಗೈಡ್ಸ್‌ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-5 ಪ್ರಥಮ ಸ್ಥಾನ ಸಂಕದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ, ತೃತೀಯ ಸ್ಥಾನ ಪಡೆದವು.

ಸ್ಕೌಟ್ಸ್‌ ವಿಭಾಗದಲ್ಲಿ ಸಂಕದಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಕುರ್ಲಗೇರಿ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದವು. ಸಂಸ್ಥೆ ಗೌರವ ಕಾರ್ಯದರ್ಶಿ ಬಿ.ಪಿ. ಶಿರಿಯಪ್ಪಗೌಡ್ರ, ಆರ್‌.ಎಚ್‌. ಹಾನಾಪುರ, ಎಂ.ಕೆ. ಕುರಿಯವರ, ವಿ. ಕೆ. ಮುತಾಲಿಕದೇಸಾಯಿ, ಎಸ್‌.ಎಂ.ಹಿರೇಮಠ,ಜಿ.ಜಿ.ಭಿಂಗಿ, ಎಲ್‌. ಡಿ. ಹಿತ್ತಲಮನಿ, ಎನ್‌.ಎಸ್‌.ಗೋಡೆವಾಲೆ. ಸುಜಾತಾ ಭೋಗಾರ, ರತ್ನಾ ಲಕ್ಕುಂಡಿ, ಜೆ. ಎಚ್‌. ಕಳಸದ, ಬಿ. ಆರ್‌.ಅಂಗಡಿ, ನಿರ್ಣಾಯಕರಾಗಿ ಎಚ್‌.ಎ. ಕಣವಿ,ಎಸ್‌.ವಿ. ಇನಾಮದಾರ ಉಪಸ್ಥಿತರಿದ್ದರು. ಸಂಸ್ಥೆ ಕಾರ್ಯದರ್ಶಿ ಎಂ.ಎಸ್‌.ಮುಲ್ಲಾ ಸ್ವಾಗತಿಸಿದರು. ಎಸ್‌.ಜಿ. ವಾಲಿ ನಿರೂಪಿಸಿದರು. ಎಂ.ಕೆ. ಕುರಿಯವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ