ಆ್ಯಪ್ನಗರ

ಲಿಂಗಾಯತ ಹಲವರಿಂದ ಅಡ್ಡಿ :ತೋಂಟದ ಶ್ರೀ

ಗದಗ : ಲಿಂಗಾಯತ ಧರ್ಮಕ್ಕೆ 12ನೇ ಶತಮಾನದಿಂದಲೂ ಪಟ್ಟಭದ್ರರು ಅಡೆತಡೆಗಳನ್ನು ಉಂಟು ಮಾಡುತ್ತಿದ್ದಾರೆ. ಈಗಲೂ ಅದು ಮುಂದುವರಿದಿದೆ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Vijaya Karnataka 27 Jun 2019, 5:00 am
ಗದಗ : ಲಿಂಗಾಯತ ಧರ್ಮಕ್ಕೆ 12ನೇ ಶತಮಾನದಿಂದಲೂ ಪಟ್ಟಭದ್ರರು ಅಡೆತಡೆಗಳನ್ನು ಉಂಟು ಮಾಡುತ್ತಿದ್ದಾರೆ. ಈಗಲೂ ಅದು ಮುಂದುವರಿದಿದೆ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
Vijaya Karnataka Web GDG-26RUDRAGOUD1
ಗದಗ ಜ.ತೋಂಟದಾರ್ಯಮಠದಲ್ಲಿ ನಡೆದ ಶಿವಾನುಭವದಲ್ಲಿ ಪ್ರೊ.ಜಿ.ಬಿ.ಹಳ್ಯಾಳ ಮಾತನಾಡಿದರು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಚಂದ್ರಕಲಾ ಮುನವಳ್ಳಿ, ಮಂಜುನಾಥ ಇದ್ದರು.


ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ನಡೆದ 2438ನೇ ಶಿವಾನುಭವದಲ್ಲಿ ಮಾತನಾಡಿದರು.

ವೈದಿಕ ಧರ್ಮದ ಆಚರಣೆಗಳು ಜನಸಾಮಾನ್ಯರ ಶೋಷಣೆ ಮಾಡುವುದನ್ನು ವಿರೋಧಿಸಿ 12 ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಲಿಂಗಾಯತ ಧರ್ಮ ಸ್ಥಾಪಿಸಿದರು. ದೇಹವೇ ದೇಗುಲವೆಂದು ಸಾರಿ ಕರ್ಮಠ ದೂರಿಕರಿಸುವ ಪ್ರಯತ್ನ ಮಾಡಿದರು. ಲಿಂಗಬೇಧ, ಜಾತಿಬೇಧ ಎಣಿಸದೆ ಸಕಲ ಜೀವಾತ್ಮರಿಗೆ ಲೇಸ ಬಯಸುವ ಶರಣರ ಪ್ರಯತ್ನವನ್ನು ಆ ಕಾಲದಲ್ಲಿಯೇ ವೈದಿಕ ಪುರೋಹಿತಶಾಹಿಗಳು ವಿರೋಧಿಸಿ, ಕಲ್ಯಾಣ ಕ್ರಾಂತಿಗೆ ಕಾರಣರಾದರು ಎಂದರು.

ಈಗ ವೀರಶೈವ ಲಿಂಗಾಯತ ನಿಗಮ ಸ್ಥಾಪಿಸುವ ಮೂಲಕ ಲಿಂಗಾಯತರನ್ನು ಒಡೆಯುವ ಹುನ್ನಾರ ನಡೆದಿದೆ. ಆದರೆ, ಎಂತಹ ಪರಿಸ್ಥಿತಿಯಲ್ಲೂ ಲಿಂಗಾಯತ ಧರ್ಮದ ಸ್ವತಂತ್ರ ಮಾನ್ಯತೆಯ ಹೋರಾಟ ನಿಲ್ಲುವುದಿಲ್ಲ. ಲಿಂಗಾಯತ ಧರ್ಮದ ವಿಚಾರಗಳು ಲೋಕಮಾನ್ಯತೆ ಪಡೆದು ವಿಶ್ವಧರ್ಮವಾಗಿದೆ ಎಂದರು.

ಲಿಂಗಾಯತ ಧರ್ಮ ಅಡೆತಡೆಗಳು ವಿಷಯವಾಗಿ ಬಸವಕೇಂದ್ರ ಗದಗ -ಹುಬ್ಬಳ್ಳಿಯ ಕಾರ್ಯಾಧ್ಯಕ್ಷ ಪ್ರೊ.ಜಿ.ಬಿ.ಹಳ್ಯಾಳ ಉಪನ್ಯಾಸ ನೀಡಿ, ಕನ್ನಡ ನಾಡಿನ ಮೊದಲ ಧರ್ಮ ಲಿಂಗಾಯತ ಧರ್ಮವಾಗಿದೆ. ಉಳಿದ ಎಲ್ಲ ಧರ್ಮಗಳು ವಲಸೆ ಧರ್ಮಗಳಾಗಿವೆ. ಸಂಸ್ಕೃತ ಧಿಕ್ಕರಿಸಿ ಜನರಾಡುವ ಭಾಷೆಯಲ್ಲಿಯೇ ಸರಳವಾಗಿ ಜೀವನದ ಮೌಲ್ಯಗಳನ್ನು ವಚನಗಳಲ್ಲಿ ಪ್ರತಿಪಾದಿಸಿದ್ದಾರೆ. ವಿಶ್ವಸಂಸ್ಥೆ ಪ್ರತಿಪಾದಿಸಿರುವ ಎಲ್ಲ 30 ಅಂಶಗಳು ಶರಣರ ವಚನಗಳಲ್ಲಿವೆ. ಸಂವಿಧಾನದ ಎಲ್ಲ ಅಂಶಗಳನ್ನು ಶರಣರು ಪ್ರತಿಪಾದಿಸಿ, ಆಚರಣೆಗೆ ತಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಸವಾದಿಶರಣರ ವಿಚಾರಗಳು ಪ್ರಚಾರ ಪಡೆದು ಲಂಡನ್ನನಲ್ಲಿ ಬಸವಣ್ಣವರ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಇಂದಿನ ಯುವಪೀಳಿಗೆ ಈ ಸಂಗತಿ ಅರಿಯಬೇಕು. ಲಿಂಗಾಯತಧರ್ಮದ ಹೋರಾಟದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.

ಸಂಗೀತಗಾರ ಸಂದೀಪ ಹೆದ್ದೂರಿ ಹಾಗೂ ಸಂಗಮೇಶ್ವರ ಗವಾಯಿಗಳಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ಧರ್ಮಗ್ರಂಥ ಪಠಣ ಆದಿತ್ಯ ಮುನವಳ್ಳಿ ಹಾಗೂ ವಚನ ಚಿಂತನ ಶ್ರೇಯಾ ಮುನವಳ್ಳಿ ನೆರವೇರಿಸಿದರು.

ಕರುನಾಡ ಸಿರಿ ಪ್ರಶಸ್ತಿ ಪಡೆದ ಗುರುಬಸವ ಸಿಬಿಎಸ್‌ಇ ಶಾಲೆ ಪ್ರಾ. ಮಂಜುನಾಥ ಅವರನ್ನು ಸನ್ಮಾನಿಸಲಾಯತು.

ಚಂದ್ರಕಲಾ ಮುನವಳ್ಳಿ, ಶಿವಾನುಭವ ಸಮಿತಿ ಚೇರಮನ್‌ ವಿವೇಕಾನಂದಗೌಡ ಪಾಟೀಲ, ಗೌರಕ್ಕ ಬಡಿಗಣ್ಣವರ, ಶಶಿಧರ ಬೀರನೂರ, ಡಾ. ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಪ್ರಕಾಶ ಅಸುಂಡಿ, ವೀರಣ್ಣ ಗೊಡಚಿ ಇದ್ದರು. ಮಂಜುಳಾ ಹಾಸಲಕರ ನಿರೂಪಿಸಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ