ಆ್ಯಪ್ನಗರ

ಸರಕಾರಿ ಯೋಜನೆ ಪರಿಚಯ ಕಾರ್ಯಕ್ರಮ

ಲಕ್ಷ್ಮೇಶ್ವರ: ರೈತರು ಇಸ್ರೇಲ್‌ ಮಾದರಿಯಂತ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಗ್ರಾಮ ನೈರ್ಮಲ್ಯ ಯೋಜನೆಯಡಿ ಗ್ರಾಮದ ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂದು ಬಸವರಾಜ ಹುಲಕೋಟಿ ಹೇಳಿದರು.

Vijaya Karnataka 26 Jan 2020, 5:00 am
ಲಕ್ಷ್ಮೇಶ್ವರ: ರೈತರು ಇಸ್ರೇಲ್‌ ಮಾದರಿಯಂತ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಗ್ರಾಮ ನೈರ್ಮಲ್ಯ ಯೋಜನೆಯಡಿ ಗ್ರಾಮದ ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂದು ಬಸವರಾಜ ಹುಲಕೋಟಿ ಹೇಳಿದರು.
Vijaya Karnataka Web introduction to government planning
ಸರಕಾರಿ ಯೋಜನೆ ಪರಿಚಯ ಕಾರ್ಯಕ್ರಮ


ತಾಲೂಕಿನ ಉಂಡೆನಹಳ್ಳಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿದ ಗ್ರಾಮ ಸಂಪರ್ಕ ಯೋಜನೆಯಡಿ ನಡೆದ ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀ ಸಿದ್ದಲಿಂಗೇಶ್ವರ ಜಾನಪದ ಕಲಾ ತಂಡ ಅಡವಿಸೋಮಾಪೂರ ಹಾಗೂ ಶ್ರೀ ಗುರು ಶಿಷ್ಯ ಪರಂಪರೆ ಜಾನಪದ ಕಲಾ ತಂಡ ಲಕ್ಕುಂಡಿ ತಂಡದವರು ಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ನೀಡಿದರು.

ಚನ್ನವ್ವ ಕಾರಬಾರಿ, ಬಸವರಾಜ ಹುಲಕೋಟಿ, ನಂದೇಶ ಹುಲಕೋಟಿ, ಬಸವರಾಜ ಹಮ್ಸಾಗರ, ಭೀಮಣ್ಣ ಬಳ್ಳಾರಿ, ಮರಿಲಿಂಗಪ್ಪ ನಾದಿಗಟ್ಟಿ, ಮರಿಯಪ್ಪ ಹುಲಕೋಟಿ, ಮಾರುತಿ ಹೊನ್ನಣ್ಣವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ