ಆ್ಯಪ್ನಗರ

ಜನರಿಗೆ ನೋವು ಕೊಡುತ್ತಿರುವ ಈಶ್ವರಪ್ಪ

ಗದಗ : ನೆರೆಯಿಂದ ಜನ ಮನೆಯನ್ನಷ್ಟೆ ಅಲ್ಲ, ಬದುಕನ್ನು ಕಳೆದುಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ 10 ಸಾವಿರ ರೂ. ಕೊಟ್ಟಿದ್ದೇ ಹೆಚ್ಚು ಎನ್ನುವ ಮೂಲಕ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಜನರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ಶಾಸಕ ಎಚ್‌.ಕೆ. ಪಾಟೀಲ ಆರೋಪಿಸಿದರು.

Vijaya Karnataka 10 Sep 2019, 6:19 pm
ಗದಗ : ನೆರೆಯಿಂದ ಜನ ಮನೆಯನ್ನಷ್ಟೆ ಅಲ್ಲ, ಬದುಕನ್ನು ಕಳೆದುಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ 10 ಸಾವಿರ ರೂ. ಕೊಟ್ಟಿದ್ದೇ ಹೆಚ್ಚು ಎನ್ನುವ ಮೂಲಕ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಜನರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ಶಾಸಕ ಎಚ್‌.ಕೆ. ಪಾಟೀಲ ಆರೋಪಿಸಿದರು.
Vijaya Karnataka Web isvarappa is giving people pain
ಜನರಿಗೆ ನೋವು ಕೊಡುತ್ತಿರುವ ಈಶ್ವರಪ್ಪ


ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ''ನೆರೆ ಪರಿಹಾರ ವಿತರಣೆ ವಿಳಂಬವಾದರೂ ಜನ ಸಹಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ಕಷ್ಟಗಳಿಗೆ ಸ್ಪಂದಿಸಬೇಕೆ ಹೊರತು ಅವರ ಭಾವನೆಗಳಿಗೆ ನೋವು ಕೊಡಬಾರದು'' ಎಂದರು.

''ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ಹಣ ಬರದಿದ್ದರೆ ಆ ನಿಯಮಗಳೇ ಬದಲಾಗಬೇಕು. ಕೇಂದ್ರದಲ್ಲಿ ಯಾರೇ ಅಧಿಕಾರದಲ್ಲಿರಲಿ ಜನರ ಧ್ವನಿ ಮುಟ್ಟಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕು. ಅದನ್ನು ಬಿಟ್ಟು ಕೇಂದ್ರದ ಪರವಾಗಿ ವಕಾಲತ್ತು ವಹಿಸುವುದು ಸರಿಯಲ್ಲ. ಕೂಡಲೇ ರಾಜ್ಯ ಸರಕಾರ ಪ್ರಧಾನಿ ಮೋದಿ ಅವರನ್ನು ನೆರೆ ಪರಿಸ್ಥಿತಿ ವೀಕ್ಷಣೆಗೆ ಆಗಮಿಸುವಂತೆ ಒತ್ತಾಯಿಸಿ ಅನುದಾನ ತರುವ ಕೆಲಸ ಮಾಡಬೇಕು'' ಎಂದು ಒತ್ತಾಯಿಸಿದರು.

''ಉತ್ತರ ಕರ್ನಾಟಕದಲ್ಲಿ ನೆರೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ಪಠ್ಯ ಪುಸ್ತಕ ಕೊಚ್ಚಿ ಹೋಗಿವೆ. ಶಾಲೆಗಳಿಗೆ ರಜೆ ನೀಡಲಾಗಿದೆ. ಈ ಎಲ್ಲ ಅಂಶಗಳನ್ನು ಅಧ್ಯಯನ ಮಾಡಿ ಸೆ. 1ರಿಂದ ಮೇ ವರೆಗೆ ಶಾಲೆಗಳನ್ನು ನಡೆಸುವುದು ಸೇರಿದಂತೆ ಒಟ್ಟು 25 ಶಿಫಾರಸು ಮಾಡಲಾಯಿತು. ಆದರೆ ರಾಜ್ಯ ಸರಕಾರ ಮಾನ್ಯ ಮಾಡಲಿಲ್ಲ. ನೆರೆ ಪರಿಹಾರಕ್ಕೆ ವೈಜ್ಞಾನಿಕ ಪರಿಹಾರಗಳನ್ನು ಕೊಟ್ಟರೂ ಪ್ರಯೋಜನ ಆಗಿಲ್ಲ'' ಎಂದು ದೂರಿದರು.

ನಳೀನ್‌ ಹೇಳಿಕೆಗೆ ತಿರುಗೇಟು:
''ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರಿಂದ ಡಿ.ಕೆ. ಶಿವಕುಮಾರ ಬಂಧನವಾಗಿದೆ ಎಂದು ಪ್ರಧಾನಿ ಮೋದಿ ಅಥವಾ ಸಂಬಂಧಿಸಿದ ಸಚಿವರು ಹೇಳಿಕೆ ಕೊಡಲಿ. ಅದನ್ನು ಬಿಟ್ಟು ನ್ಯಾಯದಾನ ವ್ಯವಸ್ಥೆಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಸಂವಿಧಾನಬದ್ಧ ವಿಚಾರಣಾ ಸಂಸ್ಥೆಗಳ ಬಗ್ಗೆ ಬೇಜವಾಬ್ದಾರಿಯಿಂದ ಹೇಳಿಕೆ ನೀಡುವುದು ರಾಜಕಾರಣದ ದುರ್ದೈವದ ಸಂಗತಿ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್‌ ವಿರುದ್ಧ ಹರಿಹಾಯ್ದರು.

ಏರದ ಜಿಡಿಪಿ
ದೇಶದ ಆರ್ಥಿಕತೆಗೆ ಹೊಡೆತ ಬೀಳುವ ಹಾಗೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ಜಿಡಿಪಿ ಶೇ. 5ಕ್ಕಿಂತ ಕೆಳಗಿಳಿಯುತ್ತಿದೆ. ದೇಶದ ಆರ್ಥಿಕ ಸುಧಾರಣೆಗೆ ಬಿಜೆಪಿ ಯಾವುದೇ ಪರಿಣಾಮಕಾರಿ ಹೆಜ್ಜೆ ಇಡುತ್ತಿಲ್ಲ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಬಹಳ ದಿನ ನಡೆಯುವುದಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ