ಆ್ಯಪ್ನಗರ

ಆಂತರಿಕ ವಿಕಾಸದಿಂದ ಉನ್ನತಿ ಸಾಧ್ಯ

ಗಜೇಂದ್ರಗಡ : ಮನುಷ್ಯನ ಮನಸ್ಸಿನಲ್ಲಿ ಅಡಗಿರುವ ದುರ್ಗುಣ ದೂರಮಾಡಿ ಸದ್ಗುಣಗಳನ್ನು ಬಡಿದೆಬ್ಬಿಸುವುದು ಶಿವಾನುಭವಗೋಷ್ಠಿಯ ಮೂಲ ಉದ್ದೇಶವಾಗಿದೆ. ಆಂತರಿಕ ವಿಕಾಸದಿಂದ ನಿಜವಾದ ಉನ್ನತಿ ಸಾಧ್ಯ ಎಂದು ನರೇಗಲ್‌ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು

Vijaya Karnataka 9 Mar 2019, 5:00 am
ಗಜೇಂದ್ರಗಡ : ಮನುಷ್ಯನ ಮನಸ್ಸಿನಲ್ಲಿ ಅಡಗಿರುವ ದುರ್ಗುಣ ದೂರಮಾಡಿ ಸದ್ಗುಣಗಳನ್ನು ಬಡಿದೆಬ್ಬಿಸುವುದು ಶಿವಾನುಭವಗೋಷ್ಠಿಯ ಮೂಲ ಉದ್ದೇಶವಾಗಿದೆ. ಆಂತರಿಕ ವಿಕಾಸದಿಂದ ನಿಜವಾದ ಉನ್ನತಿ ಸಾಧ್ಯ ಎಂದು ನರೇಗಲ್‌ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು
Vijaya Karnataka Web GDG-8GJD1
ಗಜೇಂದ್ರಗಡ ಮೈಸೂರಮಠದಲ್ಲಿ ನಡೆದ ಶಿವಾನುಭವಗೋಷ್ಠಿಯಲ್ಲಿ ನರೇಗಲ್‌ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳನ್ನು ಸನ್ಮಾನಿಸಲಾಯಿತು.


ಸ್ಥಳೀಯ ಮೈಸೂರಮಠದಲ್ಲಿ ಗುರುವಾರ ಸಂಜೆ ನಡೆದ ಮಾಸಿಕ ಶರಣಧರ್ಮ ಶಿವಾನುಭವಗೋಷ್ಠಿಯಲ್ಲಿ ಅವರು ಆಶೀರ್ವಚನ ನೀಡಿದರು.

ವಿಕಾಸ ಹೊಂದಬೇಕು, ಅಭಿವೃದ್ಧಿ ಹೊಂದಬೇಕು ಎನ್ನುವ ಅಪೇಕ್ಷೆ ಇರುತ್ತದೆ. ನಿರ್ಜಿವ ವಸ್ತುಗಳಿಂದ ವಿಕಾಸ ಹೊಂದುವುದು ಸಾಧ್ಯವಿಲ್ಲ. ಮನಸ್ಸಿನಲ್ಲಿ ಅಡಗಿರುವ ಕಲ್ಮಷಗಳು ಹೋದಾಗ ನಿಜವಾದ ಅಭಿವೃದ್ಧಿ ಮತ್ತು ಬದಲಾವಣೆ ಸಾಧ್ಯ. ಸಿಟ್ಟು, ಲೋಭ ಗಳಿಂದ ದೂರವಾಗಲು ಸದ್ಗುಣಗಳ ಪ್ರವೇಶ ಅವಶ್ಯ. ಇದರಿಂದ ಅಂತರಂಗ ಮತ್ತು ಬಹಿರಂಗ ಶುದ್ಧಿ ಕಾಣುತ್ತೇವೆ ಎಂದರು.

ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಟಿ.ಎಸ್‌. ರಾಜೂರ ಮಾತನಾಡಿ, ಅಧ್ಯಾತ್ಮಿಕ ಚಿಂತನೆಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಬದುಕು ಸಾಗಿಸಲು ಶಿವಾನುಭವಗೋಷ್ಠಿ ಸಹಕಾರಿಯಾಗಿದೆ ಎಂದರು.

ಕಸಾಪ ಅಧ್ಯಕ್ಷ ಈಶ್ವರಪ್ಪ ರೇವಡಿ, ಸಮಿತಿ ಅಧ್ಯಕ್ಷ ಕಳಕಪ್ಪ ಮಳಗಿ, ಕೆ.ಎಸ್‌.ಗಾರವಾಡಹಿರೇಮಠ, ವಿಜಯ ನೂಲ್ವಿ, ಹುಚ್ಚಪ್ಪ ಹಾವೇರಿ, ಮುತ್ತಣ್ಣಾ ಯಲಬುಣಚಿ, ಕೆ.ಜಿ. ಸಂಗಟಿ, ಈಶಪ್ಪ ಜಟ್ಟಿ, ಸಿ.ಕೆ. ಪಾಟೀಲ, ಶರಣಪ್ಪ ಪಟ್ಟೇದ, ಈರಪಣ್ಣಾ ಇಂಡಿ, ಈಶಪ್ಪ ಇಟಗಿ, ಸುರೇಶ ಪತ್ತಾರ, ಸಿದ್ದಪ್ಪ ಚುರ್ಚುಹಾಳ, ಪರಮೆಶ್ವರಯ್ಯಾ ಬಜಾರಮಠ, ಶಾಂತಯ್ಯಾ ಶಾಂತಗಿರಿಮಠ, ಶಶಿಕಲಾ ನೂಲ್ವಿ, ಭೀಮಾಂಬಿಕಾ ನೂಲ್ವಿ, ಅಕ್ಕಮ್ಮಾ ಪಟ್ಟೇದ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ