ಆ್ಯಪ್ನಗರ

ಏಡ್ಸ್‌ ಜಾಗೃತಿ ಮೂಡಿಸುವುದು ಅವಶ್ಯ

ಗದಗ: ಏಡ್ಸ್‌ ಕಾಯಿಲೆ ಮಾರಣಾಂತಿಕವಾಗಿದ್ದು ಅದನ್ನು ತಡೆಗಟ್ಟುವುದು ಅತ್ಯವಶ್ಯಕವಾಗಿದೆ. ಮಧ್ಯ ವಯಸ್ಸಿನ ಯುವ ಜನಾಂಗದವರಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದು ಗದಗ ತಾಪಂ ಅಧ್ಯಕ್ಷ ಶರಣಬಸನಗೌಡ ಹೇಳಿದರು.

Vijaya Karnataka 6 Dec 2019, 5:00 am
ಗದಗ: ಏಡ್ಸ್‌ ಕಾಯಿಲೆ ಮಾರಣಾಂತಿಕವಾಗಿದ್ದು ಅದನ್ನು ತಡೆಗಟ್ಟುವುದು ಅತ್ಯವಶ್ಯಕವಾಗಿದೆ. ಮಧ್ಯ ವಯಸ್ಸಿನ ಯುವ ಜನಾಂಗದವರಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದು ಗದಗ ತಾಪಂ ಅಧ್ಯಕ್ಷ ಶರಣಬಸನಗೌಡ ಹೇಳಿದರು.
Vijaya Karnataka Web it is essential to raise awareness of aids
ಏಡ್ಸ್‌ ಜಾಗೃತಿ ಮೂಡಿಸುವುದು ಅವಶ್ಯ


ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾವಾರ್ತಾ ಮತ್ತು ಪ್ರಸಾರ ಇಲಾಖೆ, ಜಿಮ್ಸ… ರಕ್ತ ನಿಧಿ ಕೇಂದ್ರ ಜಿಲ್ಲಾಆಸ್ಪತ್ರೆ, ಜಿಲ್ಲಾರೆಡ್‌ ಕ್ರಾಸ್‌ ಸಂಸ್ಥೆ, ಎನ್‌ಎಸ್‌ಎಸ್‌ ಘಟಕ, ಎನ್‌ಸಿಸಿ ಘಟಕ, ಮದರ್‌ಥೆರೆಸಾ ಸ್ಕೂಲ್‌ ಆಫ್‌ ನರ್ಸಿಂಗ್‌, ಮಹೇಶ್ವರಿ ನರ್ಸಿಂಗ್‌ ಕಾಲೇಜ್‌, ಬಸವೇಶ್ವರ ಪ್ಯಾರಾಮೆಡಿಕಲ್‌ ಕಾಲೇಜ್‌, ರಕ್ಷಣೆ ಜಿಲ್ಲಾಮಹಿಳಾ ಒಕ್ಕೂಟ, ಸೃಷ್ಠಿ ಸಂಕುಲ ಸಂಸ್ಥೆ, ನವಚೇತನ ಸಂಸ್ಥೆ, ಕೆಎಚ್‌ಪಿಟಿ ಸಂಸ್ಥೆ, ಕೆಕೆಎಸ್‌. ಬಿಎಸ್‌ಡಬ್ಲೂ, ಎಂಎಸ್‌ಡಬ್ಲೂಕಾಲೇಜ್‌, ಗುರು ಸೇವಾ ಸೊಸೈಟಿ, ತೋಂಟದಾರ್ಯ ಮಹಾವಿದ್ಯಾಲಯ, ರೆಡ್‌ ರಿಬ್ಬನ್‌ ಕ್ಲಬ್‌, ಯೂತ್‌ ರೆಡ್‌ ಕ್ರಾಸ್‌ವಿಂಗ್‌ ಹಾಗೂ ಶಿಕ್ಷಣ ಇಲಾಖೆ ಗದಗ ಆಶ್ರಯದಲ್ಲಿಜಗದ್ಗುರು ತೋಂಟದಾರ್ಯ ಕಾಲೇಜ್‌ನಲ್ಲಿನಡೆದ ಗದಗ ಜಿಲ್ಲಾಮಟ್ಟದ ವಿಶ್ವ ಏಡ್ಸ್‌ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ7 ಸಾವಿರ ಜನ ಏಡ್ಸ್‌ ರೋಗಿಗಳಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಜತೆಗೆ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು. ವಿವಿಧ ಕಲಾತಂಡಗಳಿಂದ ಬೀದಿ ನಾಟಕ ಮತ್ತು ಭಿತ್ತಿ ಪತ್ರಗಳ ವಿತರಣೆ ಮೂಲಕ ಜನರಲ್ಲಿಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಹಮ್ಮಿಕೊಂಡು ಏಡ್ಸ್‌ ಸಂಪೂರ್ಣ ತಡೆಗಟ್ಟುವಲ್ಲಿಯಶಸ್ವಿಯಾಗಬೇಕು ಎಂದರು.

ಜಿಲ್ಲಾಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ ಸಲಗೆರೆ ಮಾತನಾಡಿ, ಏಡ್ಸ್‌ ಕಾಯಿಲೆ ವೈರಸ್‌ ಮುಖಾಂತರ ದೇಹದ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಇದಕ್ಕೆ ಉಚಿತ ಚಿಕಿತ್ಸೆ ಲಭ್ಯವಿದ್ದು ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ, ಅತಿಥಿ ಉಪನ್ಯಾಸ ನೀಡಿದ ಡಾ. ಅರವಿಂದ ಕರಿನಾಗಣ್ಣವರ ಮಾತನಾಡಿದರು.

ಈ ಸಂದರ್ಭದಲ್ಲಿಜಿಲ್ಲೆಯಲ್ಲಿಹೆಚ್‌ಐವಿ ನಿಯಂತ್ರಣದಲ್ಲಿಉತ್ತಮ ಸೇವೆ ಸಲ್ಲಿಸಿದ ಐಸಿಟಿಸಿ ಗದಗ ಆಪ್ತಸಮಾಲೋಚಕರು ಹಾಗೂ ಐಸಿಟಿಸಿ ರೋಣ ಪ್ರಯೋಗ ಶಾಲಾ ತಂತ್ರಜ್ಞ, ಏ.ಆರ್‌.ಟಿ. ಕೇಂದ್ರ ಗದಗ, ರಕ್ಷಣಾ ಮಹಿಳಾ ಒಕ್ಕೂಟ, ನವಚೇತನ ಸಮುದಾಯ ಆರೈಕೆ ಕೇಂದ್ರ ಹೀಗೆ 5 ಕೇಂದ್ರಗಳಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಮ್ಸ… ವಿದ್ಯಾರ್ಥಿಗಳು ಏಡ್ಸ್‌ ತಡೆಗಟ್ಟುವ ಕುರಿತು ಕಿರುನಾಟಕ ಪ್ರಸ್ತುತಪಡಿಸಿದರು.

ಜಿಲ್ಲಾಏಡ್ಸ್‌ ನಿಯಂತ್ರಣ ಅಧಿಕಾರಿ ಡಾ. ಎಸ್‌.ಎಸ್‌. ನೀಲಗುಂದ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಹಿರೇಮಠ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಎಂ.ಡಿ ಸಾಮುದ್ರಿ, ಡಾ.ಅನಿಲ, ಎಸ್‌.ಎಸ್‌.ನಿರ್ಮಲ, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ‍್ಯಕರ್ತೆಯರು, ಕಾಲೇಜಿನ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜೆ.ಟಿ.ಕಾಲೇಜ್‌ ಪ್ರಾಚಾರ್ಯ ಪ್ರೋ.ಸಿ.ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಪ್ರಾರ್ಥಿಸಿದರು. ಜಿಲ್ಲಾಮೇಲ್ವಿಚಾರಕ ಬಸವರಾಜ ಲಾಳಗಟ್ಟಿ ಸ್ವಾಗತಿಸಿದರು. ರೂಪಾಲಿ ಪೀರಣ್ಣವರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ