ಆ್ಯಪ್ನಗರ

ಮಕ್ಕಳ ಭವಿಷ್ಯ ರೂಪಿಸುವುದು ಎಲ್ಲರ ಕರ್ತವ್ಯ

ಗದಗ: ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹ, ಜೀತ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಹಾಗೂ ಅವುಗಳ ನಿರ್ಮೂಲನೆ ಮಾಡಿ ಮಕ್ಕಳ ಭವ್ಯ ಭವಿಷ್ಯ ಉತ್ತಮವಾಗಿ ರೂಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಬಿಂಕದಕಟ್ಟಿ ಗ್ರಾಪಂ ಅಧ್ಯಕ್ಷ ವಿ.ಡಿ.ರಂಗಪ್ಪನವರ ಹೇಳಿದರು.

Vijaya Karnataka 2 Dec 2019, 5:00 am
ಗದಗ: ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹ, ಜೀತ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಹಾಗೂ ಅವುಗಳ ನಿರ್ಮೂಲನೆ ಮಾಡಿ ಮಕ್ಕಳ ಭವ್ಯ ಭವಿಷ್ಯ ಉತ್ತಮವಾಗಿ ರೂಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಬಿಂಕದಕಟ್ಟಿ ಗ್ರಾಪಂ ಅಧ್ಯಕ್ಷ ವಿ.ಡಿ.ರಂಗಪ್ಪನವರ ಹೇಳಿದರು.
Vijaya Karnataka Web it is everyones duty to shape the future of children
ಮಕ್ಕಳ ಭವಿಷ್ಯ ರೂಪಿಸುವುದು ಎಲ್ಲರ ಕರ್ತವ್ಯ


ತಾಲೂಕಿನ ಬಿಂಕದಕಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಜಿಪಂ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿನಡೆದ ಮಕ್ಕಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ಶಿಕ್ಷಕಿ ಕವಿತಾ ದಂಡಿನ ಮಾತನಾಡಿ, ಮಕ್ಕಳಲ್ಲಿವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿ ಅವರನ್ನು ಸದೃಢಎಡೆಗೆ ನಾವಿಂದು ಕೊಂಡೊಯ್ಯಬೇಕಿದೆ. ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವಲ್ಲಿಶಿಕ್ಷಕರೊಂದಿಗೆ ಸಮುದಾಯದವರು ಕೈಜೋಡಿಸಬೇಕೆಂದರು.

ಜಿಲ್ಲಾಮಕ್ಕಳ ರಕ್ಷಣಾ ಘಟಕದ ರೂಪಾ ಉಪ್ಪಿನ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರ ನೀಡಿರುವ ಯೋಜನೆ ಸದುಪಯೋಗ ಮಾಡಿಕೊಳ್ಳಬೇಕೆಂದರು.

ಪಿಡಿಒ ಆರ್‌.ಎಂ.ಕಿರೇಸೂರ ಮಾತನಾಡಿ, ಬಿಂಕದಕಟ್ಟಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಿರೇಹಂದಿಗೋಳ ಹಾಗೂ ಬಿಂಕದಕಟ್ಟಿ ಗ್ರಾಮಗಳ ಸರಕಾರಿ ಶಾಲೆಗಳಲ್ಲಿಮೂಲ ಸೌಲಭ್ಯಗಳನ್ನು ಈಗಾಗಲೇ ಒದಗಿಸಲು ಪ್ರಯತ್ನಿಸಲಾಗಿದ್ದು ಉಳಿದಂತೆ ಅನಾನುಕೂಲತೆಗಳಿದ್ದಲ್ಲಿಶೀಘ್ರವೇ ಪರಿಹಾರ ಕೈಗೊಳ್ಳಲಾಗುವುದು ಎಂದರು. ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿದರು.

ಪೊಲೀಸ್‌ ಇಲಾಖೆ ಪ್ರವೀಣ ಶಾಂತಪ್ಪನವರ, ಆರ್‌.ಡಿ.ಹುಲ್ಲೋಜಿ, ಮುಖ್ಯೋಪಾಧ್ಯಾಯನಿ ಶ್ಯಾಮಲಾ ರಂಗಪ್ಪನವರ, ಎಸ್‌.ಎಸ್‌.ಹೂಗಾರ, ಎನ್‌.ಎಸ್‌.ಚೌವರಡ್ಡಿ, ಸಿಆರ್‌ಪಿ ಟಿ.ಡಿ.ಲಮಾಣಿ,ಸುನಂದಾ ಕುರಡಗಿ, ನಂದಾ ಮುಳಗುಂದ, ಮಂಜುಳಾ ಬಡಿಗೇರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ