ಆ್ಯಪ್ನಗರ

ಪ್ರಾಣಿ, ಪಕ್ಷಿಗಳಿಲ್ಲದೇ ಮನುಷ್ಯ ಜೀವಿಸಲು ಅಸಾಧ್ಯ

ಡಂಬಳ : ಮಾನವ ಪ್ರಕೃತಿಯಲ್ಲಿ ದೊರೆಯುವ ಸಕಲ ನೈಸರ್ಗಿಕ ಸಂಪತ್ತು ತನಗಾಗಿಯೇ ಮೀಸಲಾಗಿದ್ದು ಅದರ ಸಕಲ ಭೋಗದ ಹಕ್ಕುದಾರ ತಾನೊಬ್ಬನೇ ಎಂದು ನಿರ್ಧರಿಸಿ ಬಹಳ ದರ್ಪದಿಂದ ನಿಸರ್ಗವನ್ನು ಹಾಳು ಮಾಡುತ್ತಿದ್ದಾನೆ. ಈ ನಿಸರ್ಗ ಮನುಷ್ಯನಿಗೆ ಮಾತ್ರ ಸೀಮಿತವಲ್ಲ ಎಂದು ಧಾರವಾಡದ ಪಕ್ಷಿ ಪ್ರೇಮಿ ಪ್ರಕಾಶ ಗೌಡರ ಅಭಿಪ್ರಾಯಪಟ್ಟರು.

Vijaya Karnataka 19 Aug 2019, 5:00 am
ಡಂಬಳ : ಮಾನವ ಪ್ರಕೃತಿಯಲ್ಲಿ ದೊರೆಯುವ ಸಕಲ ನೈಸರ್ಗಿಕ ಸಂಪತ್ತು ತನಗಾಗಿಯೇ ಮೀಸಲಾಗಿದ್ದು ಅದರ ಸಕಲ ಭೋಗದ ಹಕ್ಕುದಾರ ತಾನೊಬ್ಬನೇ ಎಂದು ನಿರ್ಧರಿಸಿ ಬಹಳ ದರ್ಪದಿಂದ ನಿಸರ್ಗವನ್ನು ಹಾಳು ಮಾಡುತ್ತಿದ್ದಾನೆ. ಈ ನಿಸರ್ಗ ಮನುಷ್ಯನಿಗೆ ಮಾತ್ರ ಸೀಮಿತವಲ್ಲ ಎಂದು ಧಾರವಾಡದ ಪಕ್ಷಿ ಪ್ರೇಮಿ ಪ್ರಕಾಶ ಗೌಡರ ಅಭಿಪ್ರಾಯಪಟ್ಟರು.
Vijaya Karnataka Web it is impossible for a man to live without animals and birds
ಪ್ರಾಣಿ, ಪಕ್ಷಿಗಳಿಲ್ಲದೇ ಮನುಷ್ಯ ಜೀವಿಸಲು ಅಸಾಧ್ಯ


ಡಂಬಳ ಹೋಬಳಿ ಡೋಣಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಕ್ಷಿಗಳು ನಿಸರ್ಗದ ಆಧಾರ ಸ್ಥಂಭ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ನಿಸರ್ಗದ ಜೀವ ವೈವಿದ್ಯತೆ ಕಾಪಾಡಿಕೊಂಡು ಬರುವದರಲ್ಲಿ ಪ್ರಾಣಿ ಪಕ್ಷಿಗಳು ತಮ್ಮದೇ ಅಮೂಲ್ಯ ಕೊಡುಗೆ ನೀಡುತ್ತಿವೆ. ನಾವು ಬರುವದಕ್ಕಿಂತ ಮೊದಲೇ ಲಕ್ಷಾಂತರ ವರ್ಷಗಳ ಮುಂಚಿತವಾಗಿ ಪ್ರಾಣಿ ಪಕ್ಷಿಗಳು ಈ ಭೂಮಿಗೆ ಬಂದಿವೆ. ನಾವು ಸರಳವಾಗಿ ಜೀವಿಸಲು ಬೇಕಾದಂತಹ ಎಲ್ಲಾ ಪೂರಕ ವಾತರವಣ ನಿರ್ಮಿಸುತ್ತಾ ಬಂದಿವೆ. ಹೀಗಾಗಿ ಅವುಗಳೊಂದಿಗೆ ಸೌಹಾರ್ದತಯುತವಾಗಿ ಬದುಕಬೇಕು. ಪ್ರಾಣಿ ಪಕ್ಷಿಗಳು ಇಲ್ಲದಿದ್ದರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಹಲವು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.

ಪ್ರಾಚಾರ್ಯ ಎಂ.ಎಸ್‌ ಕುಲಕರ್ಣಿ ಮಾತನಾಡಿ, ಪಕ್ಷಿಗಳು ನಿಸರ್ಗದ ಅವಿಭಾಜ್ಯ ಜೀವಿಗಳು. ಅವುಗಳು ಇಲ್ಲದೆ ನಾವು ಜೀವನ ನಡೆಸುವುದು ಕಷ್ಟ. ಈಗಾಗಲೇ ನಿಸರ್ಗದ ನಾವು ಗುಬ್ಬಿ, ಹದ್ದಿನಂತಹ ಬಹುಮುಖ್ಯ ಪಕ್ಷಿಗಳನ್ನು ಕಳೆದುಕೊಳ್ಳುವ ಹಂತದಲ್ಲಿದ್ದೇವೆ. ಇನ್ನಾದರು ಎಚ್ಚೆತ್ತುಗೊಂಡು ಪಕ್ಷಿ ಸಂಕುಲ ರಕ್ಷ ಣೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪ್ರಕಾಶ ಗೌಡರ ಅವರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು. ಹಿರಿಯ ಶಿಕ್ಷ ಕ ಜೆ.ಆರ್‌ ಏಕಬೋಟೆ, ಉಪನ್ಯಾಸಕ ಎಸ್‌.ಎಸ್‌ ಸೋಮಣ್ಣವರ, ದಾವುಲಸಾಬ್‌ ಹಾಳಕೆರಿ,ವೈ.ಎಸ್‌ ಬೊಮ್ಮನಾಳ, ಬಿ.ಡಿ ಮೊಗೂರ, ಎ.ಎಸ್‌ ಶಿವನಗೌಡರ. ಯು.ಎಸ್‌ ಗಂಗಾಪೂರ.ಎಚ್‌.ಎ ಚಿಂತಗುಂಟಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ