ಸದಸ್ಯರ ಏಳ್ಗೆಗೆ ಶ್ರಮಿಸುವುದು ಅಗತ್ಯ
ಗದಗ: ಸರಕಾರವು ನೀಡಿರುವ ಹತ್ತು ಹಲವಾರು ರೈತ ಹಾಗೂ ಮಹಿಳೆಯರ ಪರ ಯೋಜನೆ ಉಪಯೋಗ ಮಾಡಿಕೊಂಡು ಎಲ್ಲಸಹಕಾರ ಸಂಘಗಳು ಸದಸ್ಯರಿಗೆ ಸೌಲಭ್ಯ ನೀಡುವುದರ ಮೂಲಕ ಸದಸ್ಯರ ಏಳ್ಗೆ್ಗಗಾಗಿ ಶ್ರಮಿಸಬೇಕೆಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
Vijaya Karnataka 21 Nov 2019, 5:00 am
ಗದಗ: ಸರಕಾರವು ನೀಡಿರುವ ಹತ್ತು ಹಲವಾರು ರೈತ ಹಾಗೂ ಮಹಿಳೆಯರ ಪರ ಯೋಜನೆ ಉಪಯೋಗ ಮಾಡಿಕೊಂಡು ಎಲ್ಲಸಹಕಾರ ಸಂಘಗಳು ಸದಸ್ಯರಿಗೆ ಸೌಲಭ್ಯ ನೀಡುವುದರ ಮೂಲಕ ಸದಸ್ಯರ ಏಳ್ಗೆ್ಗಗಾಗಿ ಶ್ರಮಿಸಬೇಕೆಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಶಿರಹಟ್ಟಿ ತಾಲೂಕಿನ ಹೆಬ್ಬಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾಸಹಕಾರ ಯೂನಿಯನ್, ಸಹಕಾರ ಇಲಾಖೆ, ಕೆಸಿಸಿ ಬ್ಯಾಂಕ್, ಕೆಎಂಎಫ್ ಧಾರವಾಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಶಿರಹಟ್ಟಿ ಹಾಗೂ ಲಕ್ಷೆತ್ರ್ಮೕಶ್ವರ ತಾಲೂಕುಗಳ ಎಲ್ಲಸಹಕಾರ ಸಂಘಗಳ ಆಶ್ರಯದಲ್ಲಿ66 ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ ಸ್ವಾತಂತ್ರ್ಯ ದೊರಕಿದಾಗ 30 ಕೋಟಿ ಜನಸಂಖ್ಯೆ ಇದ್ದು ಆಹಾರದ ಕೊರತೆ, ಅನಕ್ಷರತೆ, ಬಡತನ ಬಹಳ ಇತ್ತು. ಆ ಕಾಲದಲ್ಲಿಮಹಾತ್ಮಾ ಗಾಂಧೀಜಿ ಹಾಗೂ ನೆಹರು ಸಹಕಾರ ಕ್ಷೇತ್ರಕ್ಕೆ ಬಹಳಷ್ಟು ಒತ್ತು ಕೊಟ್ಟಿದ್ದರು ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ ಮಹಾಂತಶೆಟ್ಟರ ಮಾತನಾಡಿ, ಗ್ರಾಮ ಅಭಿವೃದ್ಧಿ ಆಗಬೇಕಾದರೆ ಸಣ್ಣ ರೈತರು ಮಹಿಳೆಯರು ಜತೆಗೆ ಯುವ ಜನಾಂಗ ಹೆಚ್ಚು ಆಸಕ್ತಿ ವಹಿಸಿ ವ್ಯವಸಾಯ ಮಾಡಿದಲ್ಲಿರೈತರ ಆರ್ಥಿಕ ಪ್ರಗತಿ ಸಹಜವಾಗಿ ಆಗುತ್ತದೆ. ನಮ್ಮ ಪೂರ್ವಜರು ಹೇಳಿಕೊಟ್ಟ ಕೃಷಿಯನ್ನು ಸರಿಯಾಗಿ ಪಾಲಿಸದೇ ಹಾಗೂ ಶ್ರಮಿಸದಿರುವುದರಿಂದ ಉತ್ತಮ ಬೆಳೆ ಬೆಳೆಯುವುದು ಕಷ್ಟದಾಯಕವಾಗಿದೆ. ಇಸ್ರೇಲ್ದಂತಹ ಚಿಕ್ಕ ದೇಶದಲ್ಲಿಬರಡು ಭೂಮಿ ಹಾಗೂ ನೀರಿನ ಕೊರತೆ ಇದ್ದರೂ ಸಮುದ್ರ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಕೃಷಿಗೆ ಉಪಯೋಗವಾಗುವಂತೆ ಸಿದ್ಧಪಡಿಸಿಕೊಂಡು ಕೃಷಿಯಲ್ಲಿಮಾಡಿರುವ ಸಾಧನೆ ನೋಡಿದಾಗ ವಿಶ್ವದಲ್ಲಿಉಳಿದ ರಾಷ್ಟ್ರಗಳು ಅವರನ್ನು ನೋಡಿ ಕಲಿಯುವಂತಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಕೃಷಿ ಭೂಮಿಗೆ ತಕ್ಕಂತೆ ಹೆಚ್ಚಿನ ಸಾಲ ಸೌಲಭ್ಯ ಸಿಗದಿರುವುದರಿಂದ ಹಾಗೂ ಸಂಪನ್ಮೂಲದ ಕೊರತೆ ಕಾಡುತ್ತಿದೆ. ರೈತರು ಪಡೆದ ಸಾಲವನ್ನು ಉದ್ದೇಶಕ್ಕನುಗುಣವಾಗಿ ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ ಹುರಕಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಮಹೇಂದ್ರ ಉಡಚಣ್ಣವರ, ಗದಿಗೆಪ್ಪ ಯತ್ನಳ್ಳಿ, ಕೆ.ಎಚ್. ಮಹಾದೇವಪ್ಪನವರ, ಬಿ.ಆರ್. ನಿಡಗುಂದಿ, ಎಸ್.ಜಿ. ಚೋಟಗಲ್, ಬಸವರಾಜ ಜುಮ್ಮಣ್ಣವರ, ನಾರಾಯಣಗೌಡ ಪಾಟೀಲ, ಬಸಪ್ಪ ಮುಂಡವಾಡ, ಚಂದ್ರಶೇಖರ ಮುಂಡವಾಡ, ಪ್ರಕಾಶಗೌಡ ತೆಗ್ಗಿನಮನಿ ಇದ್ದರು.
ಶಿರಹಟ್ಟಿ ತಾಲೂಕಿನ ಹೆಬ್ಬಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾಸಹಕಾರ ಯೂನಿಯನ್, ಸಹಕಾರ ಇಲಾಖೆ, ಕೆಸಿಸಿ ಬ್ಯಾಂಕ್, ಕೆಎಂಎಫ್ ಧಾರವಾಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಶಿರಹಟ್ಟಿ ಹಾಗೂ ಲಕ್ಷೆತ್ರ್ಮೕಶ್ವರ ತಾಲೂಕುಗಳ ಎಲ್ಲಸಹಕಾರ ಸಂಘಗಳ ಆಶ್ರಯದಲ್ಲಿ66 ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ ಸ್ವಾತಂತ್ರ್ಯ ದೊರಕಿದಾಗ 30 ಕೋಟಿ ಜನಸಂಖ್ಯೆ ಇದ್ದು ಆಹಾರದ ಕೊರತೆ, ಅನಕ್ಷರತೆ, ಬಡತನ ಬಹಳ ಇತ್ತು. ಆ ಕಾಲದಲ್ಲಿಮಹಾತ್ಮಾ ಗಾಂಧೀಜಿ ಹಾಗೂ ನೆಹರು ಸಹಕಾರ ಕ್ಷೇತ್ರಕ್ಕೆ ಬಹಳಷ್ಟು ಒತ್ತು ಕೊಟ್ಟಿದ್ದರು ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ ಮಹಾಂತಶೆಟ್ಟರ ಮಾತನಾಡಿ, ಗ್ರಾಮ ಅಭಿವೃದ್ಧಿ ಆಗಬೇಕಾದರೆ ಸಣ್ಣ ರೈತರು ಮಹಿಳೆಯರು ಜತೆಗೆ ಯುವ ಜನಾಂಗ ಹೆಚ್ಚು ಆಸಕ್ತಿ ವಹಿಸಿ ವ್ಯವಸಾಯ ಮಾಡಿದಲ್ಲಿರೈತರ ಆರ್ಥಿಕ ಪ್ರಗತಿ ಸಹಜವಾಗಿ ಆಗುತ್ತದೆ. ನಮ್ಮ ಪೂರ್ವಜರು ಹೇಳಿಕೊಟ್ಟ ಕೃಷಿಯನ್ನು ಸರಿಯಾಗಿ ಪಾಲಿಸದೇ ಹಾಗೂ ಶ್ರಮಿಸದಿರುವುದರಿಂದ ಉತ್ತಮ ಬೆಳೆ ಬೆಳೆಯುವುದು ಕಷ್ಟದಾಯಕವಾಗಿದೆ. ಇಸ್ರೇಲ್ದಂತಹ ಚಿಕ್ಕ ದೇಶದಲ್ಲಿಬರಡು ಭೂಮಿ ಹಾಗೂ ನೀರಿನ ಕೊರತೆ ಇದ್ದರೂ ಸಮುದ್ರ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಕೃಷಿಗೆ ಉಪಯೋಗವಾಗುವಂತೆ ಸಿದ್ಧಪಡಿಸಿಕೊಂಡು ಕೃಷಿಯಲ್ಲಿಮಾಡಿರುವ ಸಾಧನೆ ನೋಡಿದಾಗ ವಿಶ್ವದಲ್ಲಿಉಳಿದ ರಾಷ್ಟ್ರಗಳು ಅವರನ್ನು ನೋಡಿ ಕಲಿಯುವಂತಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಕೃಷಿ ಭೂಮಿಗೆ ತಕ್ಕಂತೆ ಹೆಚ್ಚಿನ ಸಾಲ ಸೌಲಭ್ಯ ಸಿಗದಿರುವುದರಿಂದ ಹಾಗೂ ಸಂಪನ್ಮೂಲದ ಕೊರತೆ ಕಾಡುತ್ತಿದೆ. ರೈತರು ಪಡೆದ ಸಾಲವನ್ನು ಉದ್ದೇಶಕ್ಕನುಗುಣವಾಗಿ ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ ಹುರಕಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಮಹೇಂದ್ರ ಉಡಚಣ್ಣವರ, ಗದಿಗೆಪ್ಪ ಯತ್ನಳ್ಳಿ, ಕೆ.ಎಚ್. ಮಹಾದೇವಪ್ಪನವರ, ಬಿ.ಆರ್. ನಿಡಗುಂದಿ, ಎಸ್.ಜಿ. ಚೋಟಗಲ್, ಬಸವರಾಜ ಜುಮ್ಮಣ್ಣವರ, ನಾರಾಯಣಗೌಡ ಪಾಟೀಲ, ಬಸಪ್ಪ ಮುಂಡವಾಡ, ಚಂದ್ರಶೇಖರ ಮುಂಡವಾಡ, ಪ್ರಕಾಶಗೌಡ ತೆಗ್ಗಿನಮನಿ ಇದ್ದರು.