ಆ್ಯಪ್ನಗರ

ಕಪ್ಪತಮಲ್ಲಯ್ಯನ ಜಾತ್ರಾ ಮಹೋತ್ಸವ

ಮುಂಡರಗಿ : ತಾಲೂಕಿನ ದಕ್ಷಿಣ ಸಹ್ಯಾದ್ರಿ, ಆಯುರ್ವೇದ ಔಷಧಿಯ ಸಸ್ಯತಾಣ ಮುಖ್ಯವಾಗಿ ಧರ್ಮವೀಡು ಕಪ್ಪತಗುಡ್ಡ ಶ್ರೀ ಕಪ್ಪತ್ತ ಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಬಾದೇವಿ ದೇವಸ್ಥಾನ ಜಾತ್ರಾ ಮಹೋತ್ಸವ ಆ.22ರಿಂದ 25ರ ವರೆಗೆ ಜರುಗಲಿದೆ ಎಂದು ದೇವಸ್ಥಾನ ಧರ್ಮಾಧಿಕಾರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

Vijaya Karnataka 17 Aug 2019, 5:00 am
ಮುಂಡರಗಿ : ತಾಲೂಕಿನ ದಕ್ಷಿಣ ಸಹ್ಯಾದ್ರಿ, ಆಯುರ್ವೇದ ಔಷಧಿಯ ಸಸ್ಯತಾಣ ಮುಖ್ಯವಾಗಿ ಧರ್ಮವೀಡು ಕಪ್ಪತಗುಡ್ಡ ಶ್ರೀ ಕಪ್ಪತ್ತ ಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಬಾದೇವಿ ದೇವಸ್ಥಾನ ಜಾತ್ರಾ ಮಹೋತ್ಸವ ಆ.22ರಿಂದ 25ರ ವರೆಗೆ ಜರುಗಲಿದೆ ಎಂದು ದೇವಸ್ಥಾನ ಧರ್ಮಾಧಿಕಾರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
Vijaya Karnataka Web jatra mahotsavam of kappadamalliah
ಕಪ್ಪತಮಲ್ಲಯ್ಯನ ಜಾತ್ರಾ ಮಹೋತ್ಸವ


ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.22ರಂದು ಬೆಳಗ್ಗೆ 11ಕ್ಕೆ ಕಪ್ಪತ್ತ ಮಲ್ಲೇಶ್ವರ ಹಾಗೂ ಭ್ರಮರಾಂಭದೇವಿ ವಿವಾಹದೊಂದಿಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಆ.24ರಂದು ಕಪ್ಪತಗುಡ್ಡದ ದೇವಸ್ಥಾನಕ್ಕೆ ಡಂಬಳ ಗ್ರಾಮದ ಕಪ್ಪತ್ತ ಮಲ್ಲೇಶ್ವರ ಮತ್ತು ಭ್ರಮರಾಂಭದೇವಿ ಮೂರ್ತಿ ಆಗಮಿಸಲಿದೆ. ಆ.25ರಂದು ಬೆಳಗ್ಗೆ 11 ಕ್ಕೆ ಡಂಬಳ ಮತ್ತು ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರೊಂದಿಗೆ ವಿಶೇಷ ಜಾತ್ರಾ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದರು.

ಶ್ರಾವಣ ಮಾಸದ ನಿಮಿತ್ತ ಪ್ರತಿದಿನ ಕಪ್ಪತ್ತಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಭದೇವಿಗೆ ಮಹಾರುದ್ರಾಭಿಷೇಕ ಜರುಗುತ್ತಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಗದಗದಿಂದ ಬಸ್‌ ಸೌಲಭ್ಯವಿದೆ. ಕುಡಿಯುವ ನೀರಿನ ಸೌಲಭ್ಯ ಇದೆ ಕಲ್ಪಿಸಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ