ಜಿಂದಾಲ್ಗೆ ಜಮೀನು ನೀಡದಿರಲು ಆಗ್ರಹ
ಮುಂಡರಗಿ : ಸರಕಾರವು ಉಕ ಸಂಪನ್ಮೂಲವನ್ನು ಹಗಲು ದರೋಡೆ ಮಾಡಲು ಹೊರಟಿರುವುದು ಖಂಡನೀಯ ಎಂದು ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಕನ್ನಡ ಜಾನಪದ ಪರಿಷತ್ ರಾಜಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.
Vijaya Karnataka 17 Jun 2019, 5:00 am
ಮುಂಡರಗಿ : ಸರಕಾರವು ಉಕ ಸಂಪನ್ಮೂಲವನ್ನು ಹಗಲು ದರೋಡೆ ಮಾಡಲು ಹೊರಟಿರುವುದು ಖಂಡನೀಯ ಎಂದು ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಕನ್ನಡ ಜಾನಪದ ಪರಿಷತ್ ರಾಜಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಸ್ಟೀಲ್ ಕಂಪನಿ ಜತೆ ಕೈಜೋಡಿಸಿರುವ ಸರಕಾರ 3667 ಎಕರೆ ಜಮೀನನ್ನು ಕೇವಲ 1.20 ಲಕ್ಷ ಕ್ಕೆ ಮಾರಾಟ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಇದೊಂದು ದೊಡ್ಡ ಹಗರಣವಾಗಿದ್ದು ಈ ಕುರಿತು ಸಿಐಡಿ ತನಿಖೆ ನಡೆಸಲೇಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಯುವ ಸಬಲೀಕರಣ ಕಾರ್ಯ ನಡೆಯುತ್ತಿಲ್ಲ. ಉಕ ಭಾಗದಲ್ಲಿ ಯುವಜನ ಮೇಳ ಬಂದ್ ಮಾಡಲಾಗಿದ್ದು ಅದನ್ನು ಪುನಃ ಪ್ರಾರಂಭಿಸಬೇಕು. ಯುವಕರಿಗೆ ಉತ್ತೇಜನ ನೀಡುವ ಜತೆಗೆ ಯುವ ಪ್ರಾಧಿಕಾರ ಸ್ಥಾಪನೆ ಮಾಡಬೇಕು ಯುವ ನೀತಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಉಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಜಿಂದಾಲ್ ಸ್ಟೀಲ್ ಕಂಪನಿಗೆ ಭೂಮಿ ನೀಡುತ್ತಿರುವ ಸರಕಾರದ ಕ್ರಮ ಖಂಡಿಸಿ ಹದಿನೈದು ದಿನದಲ್ಲಿ ಸ್ವಾಮಿಗಳು, ಸಾಹಿತಿಗಳು, ಚಿಂತಕರು, ಹೋರಾಟಗಾರರು ಸೇರಿ ಕಪ್ಪತಗುಡ್ಡದಿಂದ ಜಿಂದಾಲ್ ಕಂಪನಿವರೆಗೆ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಗದಗ ಶಾಸಕ ಎಚ್.ಕೆ.ಪಾಟೀಲ ಕೂಡಾ ಸರಕಾರದ ಕ್ರಮ ವಿರೋಧಿಸಿದ್ದಾರೆ. ಉಕ ಮಹಾಸಭಾ ಹಮ್ಮಿಕೊಳ್ಳುವ ಜನಾಂದೋಲನ ಹೋರಾಟಕ್ಕೆ ಕೈಜೋಡಿಸಬೇಕು. ಹೀಗಾದಾಗ ಮಾತ್ರ ಸರಕಾರದ ಕೋಟ್ಯಂತರ ಆಸ್ತಿ ಉಳಿಯುತ್ತದೆ. ವಕೀಲ ಚನ್ನಾರೆಡ್ಡಿ ಗೂಳರೆಡ್ಡಿ ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಸ್ಟೀಲ್ ಕಂಪನಿ ಜತೆ ಕೈಜೋಡಿಸಿರುವ ಸರಕಾರ 3667 ಎಕರೆ ಜಮೀನನ್ನು ಕೇವಲ 1.20 ಲಕ್ಷ ಕ್ಕೆ ಮಾರಾಟ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಇದೊಂದು ದೊಡ್ಡ ಹಗರಣವಾಗಿದ್ದು ಈ ಕುರಿತು ಸಿಐಡಿ ತನಿಖೆ ನಡೆಸಲೇಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಯುವ ಸಬಲೀಕರಣ ಕಾರ್ಯ ನಡೆಯುತ್ತಿಲ್ಲ. ಉಕ ಭಾಗದಲ್ಲಿ ಯುವಜನ ಮೇಳ ಬಂದ್ ಮಾಡಲಾಗಿದ್ದು ಅದನ್ನು ಪುನಃ ಪ್ರಾರಂಭಿಸಬೇಕು. ಯುವಕರಿಗೆ ಉತ್ತೇಜನ ನೀಡುವ ಜತೆಗೆ ಯುವ ಪ್ರಾಧಿಕಾರ ಸ್ಥಾಪನೆ ಮಾಡಬೇಕು ಯುವ ನೀತಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಉಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಜಿಂದಾಲ್ ಸ್ಟೀಲ್ ಕಂಪನಿಗೆ ಭೂಮಿ ನೀಡುತ್ತಿರುವ ಸರಕಾರದ ಕ್ರಮ ಖಂಡಿಸಿ ಹದಿನೈದು ದಿನದಲ್ಲಿ ಸ್ವಾಮಿಗಳು, ಸಾಹಿತಿಗಳು, ಚಿಂತಕರು, ಹೋರಾಟಗಾರರು ಸೇರಿ ಕಪ್ಪತಗುಡ್ಡದಿಂದ ಜಿಂದಾಲ್ ಕಂಪನಿವರೆಗೆ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಗದಗ ಶಾಸಕ ಎಚ್.ಕೆ.ಪಾಟೀಲ ಕೂಡಾ ಸರಕಾರದ ಕ್ರಮ ವಿರೋಧಿಸಿದ್ದಾರೆ. ಉಕ ಮಹಾಸಭಾ ಹಮ್ಮಿಕೊಳ್ಳುವ ಜನಾಂದೋಲನ ಹೋರಾಟಕ್ಕೆ ಕೈಜೋಡಿಸಬೇಕು. ಹೀಗಾದಾಗ ಮಾತ್ರ ಸರಕಾರದ ಕೋಟ್ಯಂತರ ಆಸ್ತಿ ಉಳಿಯುತ್ತದೆ. ವಕೀಲ ಚನ್ನಾರೆಡ್ಡಿ ಗೂಳರೆಡ್ಡಿ ಉಪಸ್ಥಿತರಿದ್ದರು.