ಆ್ಯಪ್ನಗರ

ಕೋರ್ಟ್‌ನಿಂದಲೇ ನ್ಯಾಯ: ಸೊಬರದಮಠ ವಿಶ್ವಾಸ

ನರಗುಂದ: ನ್ಯಾಯಾಧೀಕರಣ ತೀರ್ಪಿನಂತೆ ರಾಜ್ಯಕ್ಕೆ ಬರಬೇಕಾದ ಮಹದಾಯಿ ನೀರು ಪಡೆಯುವಲ್ಲಿನಾವು ಯಶಸ್ವಿಯಾಗುತ್ತೇವೆ. ಕೋರ್ಟ್‌ನಿಂದ ನಮಗೆ ನ್ಯಾಯ ಸಿಗುತ್ತದೆ. ಇದಕ್ಕಾಗಿ ಮನವಿ ಕೊಡಲ, ರಾಜಕೀಯ ಶಕ್ತಿ ಬೇಕಿಲ್ಲಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

Vijaya Karnataka 15 Jan 2020, 5:07 pm
ನರಗುಂದ: ನ್ಯಾಯಾಧೀಕರಣ ತೀರ್ಪಿನಂತೆ ರಾಜ್ಯಕ್ಕೆ ಬರಬೇಕಾದ ಮಹದಾಯಿ ನೀರು ಪಡೆಯುವಲ್ಲಿನಾವು ಯಶಸ್ವಿಯಾಗುತ್ತೇವೆ. ಕೋರ್ಟ್‌ನಿಂದ ನಮಗೆ ನ್ಯಾಯ ಸಿಗುತ್ತದೆ. ಇದಕ್ಕಾಗಿ ಮನವಿ ಕೊಡಲ, ರಾಜಕೀಯ ಶಕ್ತಿ ಬೇಕಿಲ್ಲಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
Vijaya Karnataka Web justice right from court trust
ಕೋರ್ಟ್‌ನಿಂದಲೇ ನ್ಯಾಯ: ಸೊಬರದಮಠ ವಿಶ್ವಾಸ


ಇಲ್ಲಿನ ರೈತ ಹೋರಾಟ ವೇದಿಕೆಯಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿಹುಬ್ಬಳ್ಳಿಗೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮೀತ್‌ ಶಾ ಅವರಿಗೆ ಮನವಿ ಕೊಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸು. ಕೋರ್ಟ್‌ ನಿಂದ ಸಿಹಿ ಸುದ್ದಿಸಿಗುತ್ತದೆ. ಇಂತಹ ಪವಿತ್ರ ಹೋರಾಟವನ್ನು ರಾಜಕಾರಣಿಗಳ ಹೆಗಲಿಗೆ ಹಾಕುವುದು ಬೇಡ. ಒಂದುವರೆ ವರ್ಷ ಕಳೆದರೂ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲಾಗಿಲ್ಲ. ರಾಜಕಾರಣದಿಂದ ಆಗುವುದಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ, ಕಳಸಾ ಬಂಡೂರಿ ಯೋಜನೆಯನ್ನು ರಾಜಕಾರಣಕ್ಕೆ ಬಳಸಿಕೊಂಡು ನನೆಗುದಿಗೆ ಬೀಳುವಂತೆ ಮಾಡಿರುವುದನ್ನು ಜನ ಮನಗಾಣಬೇಕು. ಮಧ್ಯಾಂತರ ಆದೇಶಕ್ಕೂ ಹಿನ್ನಡೆ ಮಾಡಿದರು. ಗೋವಾ ರಾಜಕಾರಣಿಗಳಿಗೆ ಜನರ ಮೇಲೆ, ರಾಜ್ಯದ ಮೇಲೆ ಇರುವ ಅಭಿಮಾನ ನಮ್ಮ ಸಂಸದರು, ಶಾಸಕರು, ಸಚಿವರಿಗೆ ಇಲ್ಲ. ಕೋರ್ಟ್‌ನಿಂದ ಕಡಿಮೆ ನೀರು ಸಿಕ್ಕರೂ ಪಡೆದು ಮುಂದೆ ಹೆಚ್ಚುವರಿ ನೀರಿಗೆ ಮೇಲ್ಮನವಿ ಮಾಡಿಕೊಳ್ಳೋಣ. ಇದಕ್ಕೆ ರಾಜಕೀಯ ಶಕ್ತಿಯ ಬೆಂಬಲ ಅವಶ್ಯಕತೆ ಇಲ್ಲಎಂದು ಪುನರುಚ್ಚರಿಸಿದರು.

ಎಸ್‌.ಬಿ.ಜೋಗಣ್ಣವರ, ರಾಮಪ್ಪ ಸಾಬಳೆ, ಹನಮಂತ ಸರನಾಯ್ಕರ, ಶಿವಾನಂದ ಹಳಕಟ್ಟಿ, ಸುಭಾಶ ಗಿರಿಯಣ್ಣವರ, ಅನಸವ್ವ ಶಿಂಧೆ, ಯಲ್ಲಪ್ಪ ಗುಡದರಿ, ಎಂಕಪ್ಪ ಹುಜರತ್ತಿ, ಕಲ್ಲಪ್ಪ ಮೊರಬದ, ವಾಸು ಚವ್ಹಾಣ, ಚನ್ನಬಸಪ್ಪ ಕತ್ತಿ, ಗಿರಿರಡ್ಡಿ ಕಿಲಬನೂರ, ಚನ್ನಪ್ಪಗೌಡ ಪಾಟೀಲ, ಸಿವಪ್ಪ ಸಾತನ್ನವರ, ಬಸವರಾಜ ಮುದೇನಗುಡಿ, ಪುಂಡಲಿಕ ಯಾದವ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ