ಆ್ಯಪ್ನಗರ

ಸಾರಿಗೆ ಘಟಕದಲ್ಲಿ ಕನಕದಾಸರ ಜಯಂತಿ

ಮುಂಡರಗಿ: ಇಲ್ಲಿಯ ಸಾರಿಗೆ ಸಂಸ್ಥೆ ಘಟಕದಲ್ಲಿ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಅಚರಿಸಲಾಯಿತು.

Vijaya Karnataka 30 Nov 2018, 5:00 am
ಮುಂಡರಗಿ: ಇಲ್ಲಿಯ ಸಾರಿಗೆ ಸಂಸ್ಥೆ ಘಟಕದಲ್ಲಿ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಅಚರಿಸಲಾಯಿತು.
Vijaya Karnataka Web kanakadasara jayanti in the transport unit
ಸಾರಿಗೆ ಘಟಕದಲ್ಲಿ ಕನಕದಾಸರ ಜಯಂತಿ


ಘಟಕ ವ್ಯವಸ್ಥಾಪಕ ವಿಜಯಕುಮಾರ ಕಮಠಳ್ಳಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿಳಿಸಿ ಹೇಳುವುದರ ಜತೆಗೆ, ಅನೇಕ ಆದರ್ಶವನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಹಲವು ಕಾವ್ಯಗಳಿಂದಲೂ ಇಡೀ ಮನುಕುಲದ ಒಳಿತಿಗಾಗಿ ಕೈಗೊಳ್ಳಬೇಕಾದ ಮತ್ತು ಅನುಸರಿಸಬೇಕಾದ ಮಾರ್ಗಗಳ ಕುರಿತು ತಿಳಿಸಿಕೊಟ್ಟ ಮಹಾನುಭವರು. ವಾಲ್ಮೀಕಿ, ಅಂಬೇಡ್ಕರ್‌, ಬುದ್ದ ಬಸವಣ್ಣ ಸೇರಿದಂತೆ ಅನೇಕ ವಚನಕಾರರ ಮೂಲ ಉದ್ದೇಶ ಒಂದೇ ಆಗಿತ್ತು ಮನುಷ್ಯರೆಲ್ಲ ಸಮಾನರು ಮಾನವೀಯತೆ ನೆಲೆಗಟ್ಟಿನಲ್ಲಿ ಬದುಕಿ ಇನ್ನೊಬ್ಬರ ಬದುಕಿಗೆ ಆಸರೆಯಾಗಬೇಕು ಎಂದು ಅರಿತು ಅದರಂತೆ ನಡೆದಿದ್ದರು ಎಂದರು. ಸ್ವಯಂ ನಿವೃತ್ತಿ ಪಡೆದ ಎನ್‌.ಎಚ್‌.ಇಟಗಿ ಅವರನ್ನು ಸನ್ಮಾನಿಸಲಾಯಿತು. ಎಂ.ಕೆ.ಕುಂಬಾರಗೇರಿ, ಸಾರಿಗೆ ನಿರೀಕ್ಷ ಕ ಅಚನಾ ಬೆಟಗೇರಿ, ಸಂತೋಷ ಕುಲಕರ್ಣಿ, ವಿ.ಬಿ.ಹಾರೋಗೇರಿ, ಜಿಗಳೂರ, ಮಹಾದೇವಪ್ಪ ತಳವಾರ, ಶಿವಪ್ಪ ಕಟ್ಟಿ, ಅಶೋಕ ಕರಿಗಾರ, ಮೆಟ್ಟಿನ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ