ಆ್ಯಪ್ನಗರ

ಕನ್ನಡ ಪುಸ್ತಕ ಪ್ರಾಧಿಕಾರ ಕಾರ‍್ಯ ಶ್ಲಾಘನೀಯ

ಗದಗ: ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷ ುಕರು ಹುಟ್ಟಿಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎನ್ನುವ ದಾರ್ಶನಿಕರ ಮಾತಿನಲ್ಲಿ ಪುಸ್ತಕಗಳ ಮಹತ್ವ ಬಿಂಬಿತವಾಗಿದೆ ಎಂದು ಡಾ.ರಾಮಚಂದ್ರ ಹಂಸನೂರ ಹೇಳಿದರು.

Vijaya Karnataka 19 Aug 2019, 5:00 am
ಗದಗ: ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷ ುಕರು ಹುಟ್ಟಿಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎನ್ನುವ ದಾರ್ಶನಿಕರ ಮಾತಿನಲ್ಲಿ ಪುಸ್ತಕಗಳ ಮಹತ್ವ ಬಿಂಬಿತವಾಗಿದೆ ಎಂದು ಡಾ.ರಾಮಚಂದ್ರ ಹಂಸನೂರ ಹೇಳಿದರು.
Vijaya Karnataka Web kannada book authority is commendable
ಕನ್ನಡ ಪುಸ್ತಕ ಪ್ರಾಧಿಕಾರ ಕಾರ‍್ಯ ಶ್ಲಾಘನೀಯ


ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಸರಕಾರಿ ಪ್ರೌಢಶಾಲೆ ರಾಜೀವಗಾಂಧಿ ನಗರದಲ್ಲಿ ಏರ್ಪಡಿಸಿದ್ದ ಅಚ್ಚು ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆಯಲ್ಲಿ ಮಾತನಾಡಿ, ಹಂಚಿದಂತೆ ಬೆಳೆಯುವುದು ಜ್ಞಾನ, ಅದಕ್ಕಾಗಿಯೇ ವಿಶ್ವಸಂಸ್ಥೆ ಜ್ಞಾನ ದಿನವನ್ನು ಆಚರಿಸಿತು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಸ್‌.ಬಿ.ಗೌಡರ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿರುವ ಪುಸ್ತಕದ ಸ್ಪರ್ಧೆ ಮಕ್ಕಳ ಮಸ್ತಕ ಮುಟ್ಟಿರುವುದು, ವಿದ್ಯಾರ್ಥಿಗಳು ತಾವು ಓದಿರುವ ಪುಸ್ತಕವನ್ನು ಎಳೆ ಎಳೆಯಾಗಿ ತಮ್ಮ ಮೇಲೆ ಬೀರಿದ ಪರಿಣಾಮವನ್ನು ತಮ್ಮದೇ ಶೈಲಿಯಲ್ಲಿ ಮಂಡಿಸಿರುವುದನ್ನು ಆಲಿಸಿದರೆ ಭವಿಷ್ಯದಲ್ಲಿ ಉತ್ತಮ ವಾಗ್ಮಿಗಳನ್ನು ಪಡೆಯುತ್ತೇವೆಂದರು. ಪ್ರಾಧಿಕಾರದ ಕಾರ್ಯ ಶ್ಲಾಘನೀಯವಾದುದು ಎಂದರು.

ಪುಸ್ತಕ ಸ್ಪರ್ಧೆಯಲ್ಲಿ ಅಭಿಪ್ರಾಯ ಮಂಡಿಸಿದ ಮನೋಜ ಬಾಗಲಿ ಪ್ರಥಮ, ಪಲ್ಲವಿ ಹಿರೇಮಠ ದ್ವಿತೀಯ, ತೇಜಸ್ವಿನಿ ಮಡಿವಾಳರ ತೃತೀಯ ಸ್ಥಾನವನ್ನು ಪಡೆದು ಪುಸ್ತಕಗಳು ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡರು.

ಸ್ಪರ್ಧೆಯಲ್ಲಿ ಸಾಧನಾ ಹಿರೇಮಠ, ಪಲ್ಲವಿ ಹಿರೇಮಠ, ತೇಜಸ್ವಿನಿ ಮಡಿವಾಳರ, ವೇದಾವತಿ ಕುಲಕರ್ಣಿ, ಶ್ವೇತಾ ಆಲೂರ, ಫಿಜಾ ಬಾಗಲಕೋಟಿ, ಅಂಜಲಿ ಬೆಂತೂರ, ವೀಣಾ ಕಿತ್ತೂರ, ಆದರ್ಶ ಬಡಿಗೇರ, ಮನೋಜ ಬಾಗಲಿ, ವಿಶ್ವನಾಥ ಚಿಕ್ಕೊಪ್ಪ ಭಾಗವಹಿಸಿದ್ದರು.

ವಿದ್ಯಾ ಪ್ರಾರ್ಥಿಸಿದರು. ಎ.ವಿ.ಕೊರಡ್ಡಿ ಸ್ವಾಗತಿಸಿದರು. ಸಿ.ಎಸ್‌.ಮಾನ್ವಿ ವಂದಿಸಿದರು. ಎ.ಬಿ.ಬೇವಿನಕಟ್ಟಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ