ಆ್ಯಪ್ನಗರ

ಔಷಧ ಸಸ್ಯಗಳ ಆಗರ, ಕಪ್ಪತಗುಡ್ಡ ಈಗ ವನ್ಯಧಾಮ

ರಾಜ್ಯ ಸರಕಾರದ ಈ ನಿರ್ಧಾರ ಕಪ್ಪತಗುಡ್ಡ ರಕ್ಷ ಣೆ ಸಂಬಂಧ ದಶಕಗಳಿಂದ ಅನೇಕ ಮಠಾಧೀಶರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರ ಪ್ರಿಯರು ನಡೆಸಿದ್ದ ಹೋರಾಟ, ಪತ್ರ ಚಳವಳಿಗೆ ಸಿಕ್ಕಿದ ಜಯ. ಸರಕಾರ ತೀರ್ಮಾನ ಶೀಘ್ರವೇ ಅನುಷ್ಠಾನಗೊಳ್ಳುವುದನ್ನು ಈ ಭಾಗದ ಜನರು ಎದುರು ನೋಡುವಂತಾಗಿದೆ.

Vijaya Karnataka Web 11 Jan 2019, 8:11 am
ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧ ಸಸ್ಯಗಳ ಕಾಶಿ, ಜೀವವೈವಿಧ್ಯತೆಯ ತಾಣ ಕಪ್ಪತಗುಡ್ಡ ಈಗ ವನ್ಯಧಾಮವಾಗಿ ಘೋಷಣೆಯಾಗಿದ್ದು, ಪರಿಸರ ಪ್ರಿಯರಲ್ಲಿ ಸಂಭ್ರಮ ಮನೆ ಮಾಡಿದೆ.
Vijaya Karnataka Web kappattagudda is now a sanctuary
ಔಷಧ ಸಸ್ಯಗಳ ಆಗರ, ಕಪ್ಪತಗುಡ್ಡ ಈಗ ವನ್ಯಧಾಮ


ಬೆಂಗಳೂರಿನಲ್ಲಿ ಬುಧವಾರ ವನ್ಯಜೀವಿ ಮಂಡಳಿ ಅಧ್ಯಕ್ಷ ರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಹಾಗೂ ಅರಣ್ಯ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರ, ಕಪ್ಪತಗುಡ್ಡ ರಕ್ಷ ಣೆ ವಿಷಯದಲ್ಲಿ ಮಹತ್ವದ ಮೈಲುಗಲ್ಲಾಗಿದೆ.

ರಾಜ್ಯ ಸರಕಾರದ ಈ ನಿರ್ಧಾರ ಕಪ್ಪತಗುಡ್ಡ ರಕ್ಷ ಣೆ ಸಂಬಂಧ ದಶಕಗಳಿಂದ ಅನೇಕ ಮಠಾಧೀಶರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರ ಪ್ರಿಯರು ನಡೆಸಿದ್ದ ಹೋರಾಟ, ಪತ್ರ ಚಳವಳಿಗೆ ಸಿಕ್ಕಿದ ಜಯ. ಸರಕಾರ ತೀರ್ಮಾನ ಶೀಘ್ರವೇ ಅನುಷ್ಠಾನಗೊಳ್ಳುವುದನ್ನು ಈ ಭಾಗದ ಜನರು ಎದುರು ನೋಡುವಂತಾಗಿದೆ.

ಸರಕಾರದ ಘೋಷಣೆ :
ಔಷಧೀಯ ಸಸ್ಯಗಳ ಕಾಶಿ ಕಪ್ಪತಗುಡ್ಡವು ಗದಗ, ಮುಂಡರಗಿ, ಶಿರಹಟ್ಟಿ ತಾಲೂಕುಗಳಲ್ಲಿ ಹರಡಿಕೊಂಡಿದೆ. ಈ ಹಿಂದಿನಂತೆ ಗದಗ ತಾಲೂಕಿನ 401.811 ಹೆಕ್ಟೇರ್‌, ಮುಂಡರಗಿ ತಾಲೂಕಿನ 15,453.673 ಹೆಕ್ಟೇರ್‌, ಶಿರಹಟ್ಟಿ ತಾಲೂಕಿನ 2,016.764 ಹೆಕ್ಟೇರ್‌ ಸಹಿತ ಒಟ್ಟು 330 ಚದರ ಕಿ.ಮೀ. ವ್ಯಾಪ್ತಿಯನ್ನು ವನ್ಯಧಾಮ/ಅಭಯಾರಣ್ಯ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ.

ಮಹತ್ವದ ನಿರ್ಧಾರ: ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಕಪ್ಪತಗುಡ್ಡಕ್ಕೆ ವನ್ಯಧಾಮ ಸ್ಥಾನಮಾನ ಕಲ್ಪಿಸುವ ಜೊತೆಗೆ ತುಮಕೂರ ವಿಭಾಗದ ಬುಕ್ಕಾ ಪಟ್ಟಣ ಮೀಸಲು ಅರಣ್ಯ ಪ್ರದೇಶವನ್ನೂ ವನ್ಯಧಾಮವಾಗಿ ಘೋಷಿಸಿದೆ. ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಬಳ್ಳಾರಿ ಜಿಲ್ಲೆಯ ಗುಡಿಕೋಟೆ ಕರಡಿಧಾಮವನ್ನು 4500 ಹೆಕ್ಟೇರ್‌ ನಿಂದ 15000 ಹೆಕ್ಟೇರ್‌ಗೆ ವಿಸ್ತರಣೆ ಹಾಗೂ ಕೈಗಾ ಅಣು ವಿದ್ಯುತ್‌ ಯೋಜನೆಯ 5 ಮತ್ತು 6 ನೇ ಘಟಕ ಸ್ಥಾಪನೆಗೆ ನಿರಪೇಕ್ಷ ಣಾ ಪತ್ರ ನೀಡಲು ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಜಾರಕಿಹೊಳಿ ಭೇಟಿ : ಈ ಹಿಂದೆ ಅಬಕಾರಿ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಅವರು ಅತ್ಯಂತ ಆಸಕ್ತಿಯಿಂದ ಕಪ್ಪತಗುಡ್ಡಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪರಿಸರವಾದಿಗಳು ಕಪ್ಪತಗುಡ್ಡ ರಕ್ಷ ಣೆಗೆ ಆದ್ಯತೆ ನೀಡುವಂತೆ ವಿನಂತಿಸಿದ್ದರು. ಸದ್ಯ ಸಮ್ಮಿಶ್ರ ಸರಕಾರದಲ್ಲಿ ಅರಣ್ಯ ಮಂತ್ರಿಯಾಗಿರುವ ಸತೀಶ ಜಾರಕಿಹೊಳಿ ಕಪ್ಪತಗುಡ್ಡವನ್ನು ವನ್ಯಧಾಮ ಎಂದು ಘೋಷಣೆ ಮಾಡುವ ಮೂಲಕ ಕಪ್ಪತ್ತಗುಡ್ಡ ಸಂರಕ್ಷ ಣೆæ ಕೊಡುಗೆ ನೀಡಿರುವುದು ಪರಿಸರ ಪ್ರಿಯರಿಗೆ ಸಂತಸ ಉಂಟು ಮಾಡಿದೆ.

ಅಂತೂ ಘೋಷಣೆ : 2009ರಿಂದ ಆರಂಭವಾದ ಹೋರಾಟ ಫಲವಾಗಿ ಈಗ ಕಪ್ಪತಗುಡ್ಡ ವನ್ಯಧಾಮವಾಗಿ ಘೋಷಣೆಯಾಗಿದೆ. ಇದು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ರಕ್ಷ ಣೆ ಅಗತ್ಯ: ಮಧ್ಯ ಕರ್ನಾಟಕದ ಪರಿಸರ ಸಮತೋಲನದಲ್ಲಿ ಕಪ್ಪತಗುಡ್ಡವು ಪ್ರಮುಖ ಪಾತ್ರ ವಹಿಸಿದೆ. ಗದಗ, ಧಾರವಾಡ, ಹಾವೇರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಮಳೆ-ಬೆಳೆ ಕಪ್ಪತಗುಡ್ಡದ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಕಪ್ಪತಗುಡ್ಡ ಕರಗಿ ಹೋದರೆ ಐದು ಜಿಲ್ಲೆಗಳ ವಾತಾವರಣವೇ ಏರುಪೇರಾಗುತ್ತದೆ. ಅದರಿಂದಾಗುವ ದುಷ್ಪರಿಣಾಮಗಳನ್ನು ಊಹಿಸುವುದು ಕಷ್ಟ.

ಪರಿಸರ ಸಮತೋಲನವಾಗಿರಲು ವೈಜ್ಞಾನಿಕವಾಗಿ ಒಟ್ಟು ಭೂಪ್ರದೇಶದ ಶೇ.33 ರಷ್ಟು ಅರಣ್ಯ ಇರಬೇಕು. ಆದರೆ, ಜಿಲ್ಲೆಯಲ್ಲಿ ಕಪ್ಪತಗುಡ್ಡ ಸೇರಿದಂತೆ ಕೇವಲ ಶೇ.7 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಒಂದು ವೇಳೆ ಕಪ್ಪತಗುಡ್ಡ ಕರಗಿದರೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಇಲ್ಲದಂತಾಗುತ್ತದೆ, ಮಳೆ ಪ್ರಮಾಣ ತೀವ್ರ ಕುಸಿಯುತ್ತದೆ. ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ