ಗದಗ: ಜಿಲ್ಲೆಯ ವಿವಿಧೆಡೆ ರೈತರು ಮುಂಗಾರಿನ ಮೊದಲ ಹಬ್ಬ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು. ರೈತರು ತಮ್ಮ ಎತ್ತು, ಹಸುಗಳಿಗೆ ಹಳ್ಳದಲ್ಲಿ ಸ್ನಾನ ಮಾಡಿಸಿ ವಿವಿಧ ಬಗೆಯ ಅಲಂಕಾರ ಮಾಡಿ ಸಂಭ್ರಮಿಸಿದರು. ರೈತರ ಜೀವನಾಡಿಯಾಗಿರುವ ಎತ್ತುಗಳ ತಲೆಗೆ ಹೂವಿನ ಗೊಂಡೆ, ಕೊರಳಿಗೆ ಗೆಜ್ಜೆ, ಟೊಂಕಕ್ಕೆ ಕಪ್ಪುದಾರ, ಕೋಡಿಗೆ ಬಣ್ಣ, ದೇಹಕ್ಕೆ ಕೆಂಪು, ಹಳದಿ ಬಣ್ಣ ಹಚ್ಚಿ ಶೃಂಗಾರಗೊಳಿಸಿ ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಸಂಜೆ ರೈತರು ತಮ್ಮ ನೆಚ್ಚಿನ ಎತ್ತುಗಳಿಂದ ಕರಿ ಹರಿಯುವ ಮೂಲಕ ಕಾರಹುಣ್ಣಿಮೆ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.
ವರ್ಷವಿಡೀ ದುಡಿಯುವ ಎತ್ತುಗಳಿಗೆ ಸಿಂಗಾರ ಮಾಡುವಲ್ಲಿ ರೈತ ದಿನ ಕಳೆಯುತ್ತಾನೆ. ರೈತರು ಹಾಗೂ ಎತ್ತುಗಳಿಗೆ ಕಾರ ಹುಣ್ಣಿಮೆ ಮನರಂಜನಾ ಕೂಟವಾಗಿದ್ದು, ಎತ್ತುಗಳಿಗೆ ವಿಶೇಷ ಅಲಂಕಾರ ಹಾಗೂ ಭಕ್ಷ್ಯ ಉಣಿಸುವ ಸಂಪ್ರದಾಯ ರೂಢಿಯಲ್ಲಿದೆ.
ಇನ್ನು ಕಾರ ಹುಣ್ಣಿಮೆ ಅಂಗವಾಗಿ ರೈತರ ಮನೆಯಲ್ಲಿ ಹೋಳಿಗೆ, ಕರಿಗಡಬು, ವಡೆ, ಪಾಯಸ, ಕೋಡ್ಬಳೆ ಸೇರಿದಂತೆ ಬಗೆ-ಬಗೆಯ ತಿಂಡಿ ತಯಾರಿಸಿ ದೇವರಿಗೆ ಪೂಜೆ ಸಲ್ಲಿಸಿ ಭೋಜನ ಸವಿದರು. ಸಂಜೆ ಊರ ಅಗಸಿ ಬಾಗಿಲಲ್ಲಿ ಸಿಂಗರಿಸಿದ ಎತ್ತುಗಳಲ್ಲಿ ಒಂದು ಕಂದು ಹಾಗೂ ಬಿಳಿ ಬಣ್ಣದ ಎತ್ತುಗಳ ಮೂಲಕ ಕರಿ ಹರಿಯಲಾಯಿತು.
ನಗರದ ಮಾರುಕಟ್ಟೆಯಲ್ಲಿ ಕಳೆದ 2-3 ದಿನಗಳಿಂದ ಮಕ್ಕಳು ವಿವಿಧ ಆಕಾರದ ಗಾಳಿಪಟ ಖರೀದಿ ಮಾಡಲು ಮುಂದಾಗಿದ್ದರು. ಗ್ರಾಮೀಣ ಭಾಗದಲ್ಲಿ ಗಾಳಿಪಟಗಳ ಖರೀದಿ ಹಾಗೂ ಪಟ ಹಾರಿಸುವ ಸಂಭ್ರಮ ಜೋರಾಗಿದೆ.
ಕಾರಹುಣ್ಣಿಮೆ ಬಂದರೆ ಸಾಕು ಮಕ್ಕಳು, ಯುವಕರು, ಮಹಿಳೆಯರು ಗಾಳಿಪಟ ಹಾರಿಸುವ ಸಂಭ್ರಮ ಜೋರಾಗಿರುತ್ತದೆ. ಯುವಕರು ಮಕ್ಕಳೊಂದಿಗೆ ನಾನಾ ಬಣ್ಣ ಹಾಗೂ ವಿನ್ಯಾಸದ ಗಾಳಿಪಟ ಹಾರಿಸಿ ಸಂತಸಪಟ್ಟರು.
ಆಕಾಶದಲ್ಲಿ ಹಾರಾಡುತ್ತಿರುವ ಬಣ್ಣ-ಬಣ್ಣದ ಗಾಳಿಪಟಗಳು ನೋಡುಗರನ್ನು ಸೆಳೆದವು. ಆಗಸದಲ್ಲಿ ಹಾರುತ್ತಿರುವ ಹಕ್ಕಿಗಳ ಜತೆ ಗಾಳಿಪಟಗಳು ಹಾರಾಟದ ಪೈಪೋಟಿ ಮನಸ್ಸಿಗೆ ಮುದನೀಡುವಂತಿದ್ದವು.
ಕಾರುಹುಣ್ಣಿಮೆಯಲ್ಲಿ ಎತ್ತುಗಳ ನಾಲಿಗೆ (ಟಂಗ್ ಕ್ಲೀನ್) ಸ್ವಚ್ಛ ಮಾಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕಂಡು ಬರುತ್ತಿದೆ. ಕಾರು ಹುಣ್ಣಿಮೆ ಮೂಲಕ ಕೃಷಿ ಚಟುವಟಿಕೆ ಆರಂಭವಾಗುವುದು ವಾಡಿಕೆಯಾಗಿದೆ. ಹೊಲ ಹಸನು ಮಾಡುವುದು, ಬಿತ್ತುವುದು ಸೇರಿದಂತೆ ಕೃಷಿ ಚಟುವಟಿಕೆ ಜೋರಾಗಿ ಆರಂಭವಾಗುತ್ತದೆ. ಆಗ ಎತ್ತುಗಳು ಬಿಡುವಿಲ್ಲದ ಕೆಲಸದಲ್ಲಿ ತಲ್ಲಿನವಾಗುತ್ತವೆ.
ಎತ್ತುಗಳ ಸ್ವಚ್ಛತೆಗೆ ಆದ್ಯತೆ:
ಅಂದಹಾಗೆಎತ್ತುಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಎತ್ತುಗಳ ಮೈತೊಳೆಯಲಾಗುತ್ತದೆ. ನಂತರ ಅದರ ಕೋಡನ್ನು ಗಾಜಿನ ಚೂರು ಮೂಲಕ ಕೆತ್ತಲಾಗುವುದು. ಸುಮಾರು ಅರ್ಧ ಗಂಟೆವರೆಗೂ ಎತ್ತುಗಳ ಕೋಡುಗಳನ್ನು ಕೆತ್ತುವ ಮೂಲಕ ಕೋಡಿಗೆ ಒಂದು ರೂಪ ನೀಡಲಾಗುತ್ತದೆ. ಬಳಿಕ ಅರಿದ ಜೀರಿಗೆ, ಅರಿಷಿನಪುಡಿ, ಉಪ್ಪು ಮಿಶ್ರಣವನ್ನು ಎತ್ತುಗಳ ಬಾಯಿ, ಗಂಟಲಿಗೆ ತಿಕ್ಕಿ ಸ್ವಚ್ಛ ಮಾಡಲಾಗುವುದು. ನಂತರ ಎತ್ತುಗಳ ನಾಲಿಗೆಯನ್ನು ಸ್ವಚ್ಛ ಮಾಡಲಾಗುತ್ತದೆ. ಬಳಿಕ ಕೋಡಿಗೆ ಎಣ್ಣೆ ಮಿಶ್ರಿತ ಅರಿಷಿನ ಹಚ್ಚಿ, ಹಿತ್ತಾಳೆಯ ಕೊಡೆನ್ಸ್ ಹಾಕಿ, ಬಣ್ಣ ಬಣ್ಣದ ರಿಬ್ಬನ್ ಮತ್ತು ಹಣೆಕಟ್ಟು ಕಟ್ಟಿ ಸಿಂಗಾರ ಮಾಡುತ್ತಾರೆ. ಎತ್ತುಗಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಆಶೀರ್ವಾದ ಪಡೆದು ಬರುತ್ತಾರೆ.
ಮನೆ ಬಾಗಿಲಿನ ಮಧ್ಯದಲ್ಲಿ ಕಂಬಳಿ ಹಾಸಿ ಜೋಳ ತುಂಬಿದ ಕಾಲಪಾವಿನಲ್ಲಿ ನಾಣ್ಯ, ಬಂಗಾರವಿಟ್ಟು ಎತ್ತುಗಳ ಬಲಗಾಲಿನಿಂದ ಬಡಿಸುವ ಮೂಲಕ ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಳ್ಳುವರು. ಇದರಿಂದ ಮನೆಯಲ್ಲಿ ಬೇಳೆ-ಕಾಳುಗಳು ಸದಾಕಾಲ ತುಂಬಿರುತ್ತವೆ ಎಂಬ ಕಲ್ಪನೆ ರೈತರಲ್ಲಿದೆ. ನಂತರ ಜೋಳ ಕುದಿಸಿ, ಕುಸುಬೆ ಹಾಲಿನ ಜತೆಗೆ ಮಿಶ್ರಣ ಮಾಡಿದ ಕಿಚಡಿಯನ್ನು ಎತ್ತುಗಳಿಗೆ ತಿನಿಸಲಾಗುತ್ತದೆ. ಸಂಜೆ ಕಾರಹುಣ್ಣಿಮೆ ಕರಿ ಹರಿಯಲಾಗುತ್ತದೆ.
ವರ್ಷವಿಡೀ ದುಡಿಯುವ ಎತ್ತುಗಳಿಗೆ ಸಿಂಗಾರ ಮಾಡುವಲ್ಲಿ ರೈತ ದಿನ ಕಳೆಯುತ್ತಾನೆ. ರೈತರು ಹಾಗೂ ಎತ್ತುಗಳಿಗೆ ಕಾರ ಹುಣ್ಣಿಮೆ ಮನರಂಜನಾ ಕೂಟವಾಗಿದ್ದು, ಎತ್ತುಗಳಿಗೆ ವಿಶೇಷ ಅಲಂಕಾರ ಹಾಗೂ ಭಕ್ಷ್ಯ ಉಣಿಸುವ ಸಂಪ್ರದಾಯ ರೂಢಿಯಲ್ಲಿದೆ.
ಇನ್ನು ಕಾರ ಹುಣ್ಣಿಮೆ ಅಂಗವಾಗಿ ರೈತರ ಮನೆಯಲ್ಲಿ ಹೋಳಿಗೆ, ಕರಿಗಡಬು, ವಡೆ, ಪಾಯಸ, ಕೋಡ್ಬಳೆ ಸೇರಿದಂತೆ ಬಗೆ-ಬಗೆಯ ತಿಂಡಿ ತಯಾರಿಸಿ ದೇವರಿಗೆ ಪೂಜೆ ಸಲ್ಲಿಸಿ ಭೋಜನ ಸವಿದರು. ಸಂಜೆ ಊರ ಅಗಸಿ ಬಾಗಿಲಲ್ಲಿ ಸಿಂಗರಿಸಿದ ಎತ್ತುಗಳಲ್ಲಿ ಒಂದು ಕಂದು ಹಾಗೂ ಬಿಳಿ ಬಣ್ಣದ ಎತ್ತುಗಳ ಮೂಲಕ ಕರಿ ಹರಿಯಲಾಯಿತು.
ನಗರದ ಮಾರುಕಟ್ಟೆಯಲ್ಲಿ ಕಳೆದ 2-3 ದಿನಗಳಿಂದ ಮಕ್ಕಳು ವಿವಿಧ ಆಕಾರದ ಗಾಳಿಪಟ ಖರೀದಿ ಮಾಡಲು ಮುಂದಾಗಿದ್ದರು. ಗ್ರಾಮೀಣ ಭಾಗದಲ್ಲಿ ಗಾಳಿಪಟಗಳ ಖರೀದಿ ಹಾಗೂ ಪಟ ಹಾರಿಸುವ ಸಂಭ್ರಮ ಜೋರಾಗಿದೆ.
ಕಾರಹುಣ್ಣಿಮೆ ಬಂದರೆ ಸಾಕು ಮಕ್ಕಳು, ಯುವಕರು, ಮಹಿಳೆಯರು ಗಾಳಿಪಟ ಹಾರಿಸುವ ಸಂಭ್ರಮ ಜೋರಾಗಿರುತ್ತದೆ. ಯುವಕರು ಮಕ್ಕಳೊಂದಿಗೆ ನಾನಾ ಬಣ್ಣ ಹಾಗೂ ವಿನ್ಯಾಸದ ಗಾಳಿಪಟ ಹಾರಿಸಿ ಸಂತಸಪಟ್ಟರು.
ಆಕಾಶದಲ್ಲಿ ಹಾರಾಡುತ್ತಿರುವ ಬಣ್ಣ-ಬಣ್ಣದ ಗಾಳಿಪಟಗಳು ನೋಡುಗರನ್ನು ಸೆಳೆದವು. ಆಗಸದಲ್ಲಿ ಹಾರುತ್ತಿರುವ ಹಕ್ಕಿಗಳ ಜತೆ ಗಾಳಿಪಟಗಳು ಹಾರಾಟದ ಪೈಪೋಟಿ ಮನಸ್ಸಿಗೆ ಮುದನೀಡುವಂತಿದ್ದವು.
ಕಾರುಹುಣ್ಣಿಮೆಯಲ್ಲಿ ಎತ್ತುಗಳ ನಾಲಿಗೆ (ಟಂಗ್ ಕ್ಲೀನ್) ಸ್ವಚ್ಛ ಮಾಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕಂಡು ಬರುತ್ತಿದೆ. ಕಾರು ಹುಣ್ಣಿಮೆ ಮೂಲಕ ಕೃಷಿ ಚಟುವಟಿಕೆ ಆರಂಭವಾಗುವುದು ವಾಡಿಕೆಯಾಗಿದೆ. ಹೊಲ ಹಸನು ಮಾಡುವುದು, ಬಿತ್ತುವುದು ಸೇರಿದಂತೆ ಕೃಷಿ ಚಟುವಟಿಕೆ ಜೋರಾಗಿ ಆರಂಭವಾಗುತ್ತದೆ. ಆಗ ಎತ್ತುಗಳು ಬಿಡುವಿಲ್ಲದ ಕೆಲಸದಲ್ಲಿ ತಲ್ಲಿನವಾಗುತ್ತವೆ.
ಎತ್ತುಗಳ ಸ್ವಚ್ಛತೆಗೆ ಆದ್ಯತೆ:
ಅಂದಹಾಗೆಎತ್ತುಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಎತ್ತುಗಳ ಮೈತೊಳೆಯಲಾಗುತ್ತದೆ. ನಂತರ ಅದರ ಕೋಡನ್ನು ಗಾಜಿನ ಚೂರು ಮೂಲಕ ಕೆತ್ತಲಾಗುವುದು. ಸುಮಾರು ಅರ್ಧ ಗಂಟೆವರೆಗೂ ಎತ್ತುಗಳ ಕೋಡುಗಳನ್ನು ಕೆತ್ತುವ ಮೂಲಕ ಕೋಡಿಗೆ ಒಂದು ರೂಪ ನೀಡಲಾಗುತ್ತದೆ. ಬಳಿಕ ಅರಿದ ಜೀರಿಗೆ, ಅರಿಷಿನಪುಡಿ, ಉಪ್ಪು ಮಿಶ್ರಣವನ್ನು ಎತ್ತುಗಳ ಬಾಯಿ, ಗಂಟಲಿಗೆ ತಿಕ್ಕಿ ಸ್ವಚ್ಛ ಮಾಡಲಾಗುವುದು. ನಂತರ ಎತ್ತುಗಳ ನಾಲಿಗೆಯನ್ನು ಸ್ವಚ್ಛ ಮಾಡಲಾಗುತ್ತದೆ. ಬಳಿಕ ಕೋಡಿಗೆ ಎಣ್ಣೆ ಮಿಶ್ರಿತ ಅರಿಷಿನ ಹಚ್ಚಿ, ಹಿತ್ತಾಳೆಯ ಕೊಡೆನ್ಸ್ ಹಾಕಿ, ಬಣ್ಣ ಬಣ್ಣದ ರಿಬ್ಬನ್ ಮತ್ತು ಹಣೆಕಟ್ಟು ಕಟ್ಟಿ ಸಿಂಗಾರ ಮಾಡುತ್ತಾರೆ. ಎತ್ತುಗಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಆಶೀರ್ವಾದ ಪಡೆದು ಬರುತ್ತಾರೆ.
ಮನೆ ಬಾಗಿಲಿನ ಮಧ್ಯದಲ್ಲಿ ಕಂಬಳಿ ಹಾಸಿ ಜೋಳ ತುಂಬಿದ ಕಾಲಪಾವಿನಲ್ಲಿ ನಾಣ್ಯ, ಬಂಗಾರವಿಟ್ಟು ಎತ್ತುಗಳ ಬಲಗಾಲಿನಿಂದ ಬಡಿಸುವ ಮೂಲಕ ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಳ್ಳುವರು. ಇದರಿಂದ ಮನೆಯಲ್ಲಿ ಬೇಳೆ-ಕಾಳುಗಳು ಸದಾಕಾಲ ತುಂಬಿರುತ್ತವೆ ಎಂಬ ಕಲ್ಪನೆ ರೈತರಲ್ಲಿದೆ. ನಂತರ ಜೋಳ ಕುದಿಸಿ, ಕುಸುಬೆ ಹಾಲಿನ ಜತೆಗೆ ಮಿಶ್ರಣ ಮಾಡಿದ ಕಿಚಡಿಯನ್ನು ಎತ್ತುಗಳಿಗೆ ತಿನಿಸಲಾಗುತ್ತದೆ. ಸಂಜೆ ಕಾರಹುಣ್ಣಿಮೆ ಕರಿ ಹರಿಯಲಾಗುತ್ತದೆ.