ಆ್ಯಪ್ನಗರ

ಮಾಜಿ ಸೈನಿಕರಿಂದ ಕಾರ್ಗಿಲ್‌ ವಿಜಯೋತ್ಸವ

ಗದಗ : ಕಾರ್ಗಿಲ್‌ ಯುದ್ಧದಲ್ಲಿ ಭಾರತ ವಿಜಯ ಸಾಸಿದ 20ನೇ ವಾರ್ಷಿಕೋತ್ಸವ ಅಂಗವಾಗಿ ಜಿಲ್ಲಾ ಮಾಜಿ ಸೈನಿಕರ ಸಂಘ ಶುಕ್ರವಾರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕಾರ್ಗಿಲ್‌ ವಿಜಯೋತ್ಸವ ಆಚರಿಸಿದರು.

Vijaya Karnataka 27 Jul 2019, 5:00 am
ಗದಗ : ಕಾರ್ಗಿಲ್‌ ಯುದ್ಧದಲ್ಲಿ ಭಾರತ ವಿಜಯ ಸಾಸಿದ 20ನೇ ವಾರ್ಷಿಕೋತ್ಸವ ಅಂಗವಾಗಿ ಜಿಲ್ಲಾ ಮಾಜಿ ಸೈನಿಕರ ಸಂಘ ಶುಕ್ರವಾರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕಾರ್ಗಿಲ್‌ ವಿಜಯೋತ್ಸವ ಆಚರಿಸಿದರು.
Vijaya Karnataka Web kargil celebration by former soldiers
ಮಾಜಿ ಸೈನಿಕರಿಂದ ಕಾರ್ಗಿಲ್‌ ವಿಜಯೋತ್ಸವ


ಕಾರ್ಗಿಲ್‌ ಯುದ್ಧದದಲ್ಲಿ ಭಾರತ ವಿಜಯೋತ್ಸವ ಸಾರಲು ಕಾರಣರಾದ ಸೈನಿಕ ಸಮೂಹಕ್ಕೆ ಜಯಘೋಷ ಹಾಕಿ ನಂತರ ಮಹಾತ್ಮಾ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಂದಾನಪ್ಪ ಯರಗೇರಿ, ಜಿ.ಬಿ.ಮಾಲಗಿತ್ತಿಮಠ ಮಾತನಾಡಿ, ಭಾರತೀಯ ಯೋಧರು ವೀರರಾಗಿದ್ದು ದೇಶ ಸಂರಕ್ಷಿಸುವ, ಕಟ್ಟುವ ಕಾರ್ಯದಲ್ಲಿ ತೊಡಗಿದವರು ಮಳೆ, ಗಾಳಿ, ಬಿಸಿಲು, ಛಳಿ ಎನ್ನದೇ ದೇಶ ಕಾಯುವ ಕಾಯಕದಲ್ಲಿ ನಿರತರಾಗಿದ್ದು ಇವರ ಸೇವೆ ಸ್ಮರಣೀಯ ಎಂದರಲ್ಲದೆ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸಿದರು.

ಮಾಜಿ ಸೈನಿಕ ಎಸ್‌.ಬಿ.ಸೊನ್ನದ, ಎಸ್‌.ಎಸ್‌.ಪೆಂಟಾ, ಎ.ಎಸ್‌.ಚಿಗರಿ, ಎಸ್‌.ಆರ್‌.ಪಾಟೀಲ, ಎಚ್‌.ಕೆ.ಶಿವಪ್ಪ, ಎಸ್‌.ಬಿ.ಸರ್ವಿ ಕಾರ್ಗಿಲ್‌ ಯುದ್ಧದ ಸನ್ನಿವೇಶಗಳನ್ನು ವಿವರಿಸಿ ಮಾತನಾಡಿದರು.

ಎ.ಆರ್‌.ನದಾಫ, ಎಸ್‌.ಬಿ.ಧಾರವಾಡ, ಚನ್ನಯ್ಯ ಬಳಗಾನೂರಮಠ, ಡಿ.ಎ.ನೇಗಲಿ, ಎ.ಎಸ್‌.ಕರಡಿ, ಬಿ.ಎಸ್‌.ಪಾಟೀಲ, ಎಚ್‌.ಆರ್‌.ಪಾಟೀಲ, ಎಸ್‌.ವಿ.ಗೂಳರಡ್ಡಿ, ಎಂ.ಎಸ್‌.ಜಗರಡ್ಡಿ, ಬಿ.ವ್ಹಿ.ಅಬ್ಬಿಗೇರಿ, ಎಚ್‌.ಎನ್‌.ದಳವಾಯಿ, ಐ.ಡಿ.ಮೂಲಿಮನಿ, ಎನ್‌.ಎನ್‌.ಕಬಾಡಿ ಇದ್ದರು.ಐ.ಕೆ.ಪಟ್ಟಣಶೆಟ್ಟಿ ಸ್ವಾಗತಿಸಿದರು. ಎಸ್‌.ಸಿ.ಚಳಗೇರಿ ನಿರೂಪಿಸಿದರು. ಎಸ್‌.ವಿ.ಪಲ್ಲೇದ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ