ಆ್ಯಪ್ನಗರ

ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಕಾಶಿ ಯಾತ್ರಾ ಪ್ರತಿಭಟನೆ

ಮುಂಡರಗಿ : ಮುಂಡರಗಿ ಜೆ.ಟಿ ಮಠದಲ್ಲಿ ಡಿ. 21 ರಂದು ಬೆಳಗ್ಗೆ 10 ಕ್ಕೆ ಸಭೆ ಸೇರಿ ರೈಲ್ವೆ ಹೋರಾಟಗಾರರ ರಾರ‍ಯಲಿಯು ಉತ್ತರಪ್ರದೇಶ ರಾಜ್ಯದ ಕಾಶಿ ವಿಶ್ವನಾಥನಿಗೆ ಪ್ರತಿಭಟನಾ ರಾರ‍ಯಲಿ ತೆರಳುವುದು ಎಂದು ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿ ಕ್ರೀಯಾ ಸಮಿತಿ ಅಧ್ಯಕ್ಷ ಬಸವರಾಜ ನವಲಗುಂದ ತಿಳಿಸಿದ್ದಾರೆ.

Vijaya Karnataka 20 Dec 2018, 5:00 am
ಮುಂಡರಗಿ : ಮುಂಡರಗಿ ಜೆ.ಟಿ ಮಠದಲ್ಲಿ ಡಿ. 21 ರಂದು ಬೆಳಗ್ಗೆ 10 ಕ್ಕೆ ಸಭೆ ಸೇರಿ ರೈಲ್ವೆ ಹೋರಾಟಗಾರರ ರಾರ‍ಯಲಿಯು ಉತ್ತರಪ್ರದೇಶ ರಾಜ್ಯದ ಕಾಶಿ ವಿಶ್ವನಾಥನಿಗೆ ಪ್ರತಿಭಟನಾ ರಾರ‍ಯಲಿ ತೆರಳುವುದು ಎಂದು ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿ ಕ್ರೀಯಾ ಸಮಿತಿ ಅಧ್ಯಕ್ಷ ಬಸವರಾಜ ನವಲಗುಂದ ತಿಳಿಸಿದ್ದಾರೆ.
Vijaya Karnataka Web kashi yatra protest demanding railway route
ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಕಾಶಿ ಯಾತ್ರಾ ಪ್ರತಿಭಟನೆ


ಡಿ.24 ರಂದು ಉತ್ತರ ಪ್ರದೇಶ ಕಾಶಿ ವಿಶ್ವನಾಥನ ಗಂಗಾ ನದಿ ದಡದ ಮೇಲೆ ಮರಳಿನ ರುದ್ರಾರಾಭಿಷೇಕದ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನಾ ರಾರ‍ಯಲಿಗೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಚಾಲನೆಯನ್ನು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿ.ಎಸ್‌.ಗಟ್ಟಿ, ಕೊಟ್ರಗೌಡ ಪಾಟೀಲ, ಯಮನಪ್ಪ ಭಜಂತ್ರಿ, ಅಂದನಗೌಡ ಪಾಟೀಲ ಮುಂತಾದವರು ಪಾಲ್ಗೊಳ್ಳುವರು ಎಂದರು.

ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆ ಜಂಟಿ ಕ್ರಿಯಾ ಸಮಿತಿ, ಎಲ್ಲ ವ್ಯಾಪಾರಸ್ಥರ ಸಂಘ ಮುಂಡರಗಿ, ಹಳೇ ತರಕಾರಿ ಮಾರುಕಟ್ಟೆ ಹೋರಾಟ ಸಮಿತಿ, ಕಲಕೇರಿ ಶಿಂಗಟಾಲೂರ ಏತ ನೀರಾವರಿ ಸಮಿತಿ, ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ, ವಿವಿಧ ಕರ್ನಾಟಕ ರಕ್ಷ ಣಾ ವೇದಿಕೆ ಆಶ್ರಯದಲ್ಲಿ ನಡೆಯಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ