ರೋಣ : ಸತತ ವರಣನ ಅವಕೃಪೆಗೆ ಒಳಗಾಗಿ ಕಂಗೆಟ್ಟಿರುವ ಜನತೆಗೆ ಬೇಸಿಗೆಯ ಮೊದಲೇ ಸೂರ್ಯ ಕಿರಣಗಳು ಫುಲ್ ಶಾಕ್ ನೀಡುವ ಮೂಲಕ ಮನೆ ಬಿಟ್ಟು ಹೊರ ಬರದಂತೆ ಮಾಡುತ್ತಿವೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸಿಲಿನ ತಾಪ ದಿನೇ ದಿನೆ ಹೆಚ್ಚಾಗುತ್ತಿದ್ದು, ಈಗಲೇ ಹೀಗಾದರೆ ಬೇಸಿಗೆಯಲ್ಲಿ ಏನು ಗತಿ ಎಂಬ ಆತಂಕದಲ್ಲಿ ಜನತೆ ಮುಳಗಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಪ್ರಾರಂಭಗೊಳ್ಳುವ ಬಿಸಿಲು, ಹತ್ತು ಗಂಟೆ ಅನ್ನುವಷ್ಟರಲ್ಲಿ ಫುಲ್ ಖಡಕ್ ಆಗಿ ಬೀಳುತ್ತದೆ.ಅಷ್ಟೇ ಪ್ರಮಾಣದಲ್ಲಿ ಶೆಕೆ ಇರುತ್ತದೆ. ಅನಿವಾರ್ಯವಾಗಿ ಜನರು ಫ್ಯಾನ್, ಕೂಲರ್, ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಮಧ್ಯಾಹ್ನ ಅಗ್ನಿಯಲ್ಲಿ ಸಿಲುಕಿದ ಅನುಭವ ಆಗುತ್ತಿದೆ.
ಮಳೆ ಮಾಯ :
ಸತತ ಮೂರ್ನಾಲ್ಕು ವರ್ಷಗಳಿಂದ ಮಳೆ ಕಣ್ಮರೆಯಾಗಿದೆ. ಇದರಿಂದ ಈ ಭಾಗದ ಜನತೆ ಇನ್ನಿಲ್ಲದ ಕಡು ಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಕೊರತೆಯಿಂಸ ಬರೀ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಜನತೆ ಆತಂಕದಲ್ಲಿ ಮುಳಗುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ರಾತ್ರಿ ಚಳಿಯಂತಹ ವಾತಾವರಣ ಕಂಡು ಬರುತ್ತಿದ್ದರೂ, ಹಗಲಿನಲ್ಲಿ ಸೂರ್ಯನ ಪ್ರಕರತೆ ಹೆಚ್ಚಾಗಿದ್ದು ಇದೆಂತಹ ಕಾಲ ಎಂಬ ಮಾತುಗಳು ಕೇಳಲಾರಂಬಿಸಿವೆ.
ರೈತರ ಕಂಗಾಲು :
ಇತ್ತ ಸರಿಯಾಗಿ ಮಳೆಯೂ ಆಗಲಿಲ್ಲ, ಅತ್ತ ಸರಕಾರ ಘೊಷಣೆ ಮಾಡಿದ ಯೋಜನೆಗಳು ರೈತರನ್ನು ತಲುಪುತ್ತಿಲ್ಲ. ಹೀಗಾದರೆ ನಮ್ಮ ಗತಿ ಏನು ಎಂದು ರೈತರು ಚಿಂತೆಯಲ್ಲಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ ಬೀಜಗಳು ಮಳೆ ಅಭಾವದಿಂದ ಮೊಳಕೆಯೊಡೆಯಲಿಲ್ಲ. ಇತ್ತ ಸಾಲ ಮನ್ನಾ ಹಾಗೂ ಕೇಂದ್ರದ ಕಿಸಾನ್ ಸನ್ಮಾನ ರೈತರನ್ನು ತಲುಪುವುದು ಯಾವಾಗ ಎಂಬುದು ರೈತರ ಅಸಮಾಧಾನ.
ಎಳೆ ನೀರು, ಹಣ್ಣುಗಳ ಬೇಡಿಕೆ :
ಬಿಸಿಲು ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಎಳೆ ನೀರಿಗೆ ಸಾಕಷ್ಟು ಬೇಡಿಕೆ ಹೆಚ್ಚಾಗುತ್ತಿದೆ. ಒಂದು ತೆಂಗಿನ ಎಳೆ ನೀರು 30 ರಿಂದ 35ರೂ. ವರೆಗೆ ಮಾರಾಟವಾಗುತ್ತಿದೆ. ಸೇಬು, ದ್ರಾಕ್ಷಿ, ಕಲ್ಲಂಗಡಿ, ಬಾಳೆಹಣ್ಣು ಸೇರಿದಂತೆ ಇತರ ಹಣ್ಣುಗಳಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ. ಜನರ ಬೇಡಿಕೆಯಷ್ಟು ಮಾರುಕಟ್ಟೆಯಲ್ಲಿ ಹಣ್ಣುಗಳು ದೊರೆಯದ್ದರಿಂದ ಇವುಗಳ ಬೆಲೆಯೂ ಗಗನಮುಖಿಯಾಗಿದೆ.
ಅಷ್ಟೇ ಅಲ್ಲ, ಮಧ್ಯಾಹ್ನ 12 ರಿಂದ ಸಂಜೆ 5 ರ ವರೆಗೆ ಪ್ರಮುಖ ರಸ್ತೆಗಳಲ್ಲಿ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ. ಮಾರುಕಟ್ಟೆಯಲ್ಲಿಯೂ ಜನ ಕಾಣುವುದು ವಿರಳ. ಕೆಲವರು ಅನಿವಾರ್ಯವಾಗಿ ಮಧ್ಯಾಹ್ನ ಅಂಗಡಿ ಮುಗ್ಗಟ್ಟುಗಳಿಗೆ ಬೀಗ ಹಾಕಿರುತ್ತಾರೆ. ಜನ ದೈನಂದಿನ ಕೆಲಸವನ್ನು ಮಧ್ಯಾಹ್ನ 12 ರೊಳಗೆ ಮುಗಿಸಿಕೊಳ್ಳುತ್ತಿದ್ದಾರೆ. ಸಂಜೆ 6ರ ನಂತರ ಕಾಣಿಸಿಕೊಳ್ಳುತ್ತಿದ್ದಾರೆ.
ರಸ್ತೆ ಸಂಚಾರ ವಿರಳ :
ಬೆಳಗ್ಗೆ ಏಳರಿಂದಲೇ ಬಿಸಿಲು ಮೈಸುಡಲಾರಂಬಿಸಿದೆ. ಸಂಜೆ 6 ರ ವರೆಗೆ ಸೂರ್ಯ ಕೆಂಡ ಕಾರುತ್ತಿದ್ದಾನೆ. ಬಿಸಿಲಿನ ಝಳಕ್ಕೆ ಜನ ಸೋತು ಸುಣ್ಣವಾಗುತ್ತಿದ್ದಾರೆ. ಇಷ್ಟು ದಿನ ಚಳಿಗಾಲವಿದ್ದ ಕಾಣ ಜನ ವಾಯು ವಿಹಾರಕ್ಕೆ ಬೆಳಗ್ಗೆ ಆರು ಗಂಟೆಯ ಹೋಗುತ್ತಿದ್ದರು. ಈಗ ಬಿಸಿಲು ಹೆಚ್ಚಾಗುತ್ತಿದ್ದಂತೆ 5.30ಕ್ಕೆಲ್ಲ ವಾಯುವಿವಾರಕ್ಕೆ ಬಂದು ಏಳು ಗಂಟೆಗೆ ಹಿಂತಿರುಗುತ್ತಿದ್ದಾರೆ. ಸಂಜೆ ಆರು ಗಂಟೆಯ ನಂತರ ಮತ್ತೆ ಹೊರ ಬರುತ್ತಿದ್ದಾರೆ. ಇದರಿಂದ ಕ್ರೀಡಾಂಗಣ ಮತ್ತು ಪ್ರಮುಖ ಸ್ಥಳಗಳು,ರಸ್ತೆಗಳು ಬೆಳಗ್ಗೆಯಿಂದ ಸಂಜೆವರೆಗೆ ಜನರಿಲ್ಲದೆ ಬಿಕೋ ಎನ್ನುತ್ತಿವೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸಿಲಿನ ತಾಪ ದಿನೇ ದಿನೆ ಹೆಚ್ಚಾಗುತ್ತಿದ್ದು, ಈಗಲೇ ಹೀಗಾದರೆ ಬೇಸಿಗೆಯಲ್ಲಿ ಏನು ಗತಿ ಎಂಬ ಆತಂಕದಲ್ಲಿ ಜನತೆ ಮುಳಗಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಪ್ರಾರಂಭಗೊಳ್ಳುವ ಬಿಸಿಲು, ಹತ್ತು ಗಂಟೆ ಅನ್ನುವಷ್ಟರಲ್ಲಿ ಫುಲ್ ಖಡಕ್ ಆಗಿ ಬೀಳುತ್ತದೆ.ಅಷ್ಟೇ ಪ್ರಮಾಣದಲ್ಲಿ ಶೆಕೆ ಇರುತ್ತದೆ. ಅನಿವಾರ್ಯವಾಗಿ ಜನರು ಫ್ಯಾನ್, ಕೂಲರ್, ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಮಧ್ಯಾಹ್ನ ಅಗ್ನಿಯಲ್ಲಿ ಸಿಲುಕಿದ ಅನುಭವ ಆಗುತ್ತಿದೆ.
ಮಳೆ ಮಾಯ :
ಸತತ ಮೂರ್ನಾಲ್ಕು ವರ್ಷಗಳಿಂದ ಮಳೆ ಕಣ್ಮರೆಯಾಗಿದೆ. ಇದರಿಂದ ಈ ಭಾಗದ ಜನತೆ ಇನ್ನಿಲ್ಲದ ಕಡು ಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಕೊರತೆಯಿಂಸ ಬರೀ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಜನತೆ ಆತಂಕದಲ್ಲಿ ಮುಳಗುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ರಾತ್ರಿ ಚಳಿಯಂತಹ ವಾತಾವರಣ ಕಂಡು ಬರುತ್ತಿದ್ದರೂ, ಹಗಲಿನಲ್ಲಿ ಸೂರ್ಯನ ಪ್ರಕರತೆ ಹೆಚ್ಚಾಗಿದ್ದು ಇದೆಂತಹ ಕಾಲ ಎಂಬ ಮಾತುಗಳು ಕೇಳಲಾರಂಬಿಸಿವೆ.
ರೈತರ ಕಂಗಾಲು :
ಇತ್ತ ಸರಿಯಾಗಿ ಮಳೆಯೂ ಆಗಲಿಲ್ಲ, ಅತ್ತ ಸರಕಾರ ಘೊಷಣೆ ಮಾಡಿದ ಯೋಜನೆಗಳು ರೈತರನ್ನು ತಲುಪುತ್ತಿಲ್ಲ. ಹೀಗಾದರೆ ನಮ್ಮ ಗತಿ ಏನು ಎಂದು ರೈತರು ಚಿಂತೆಯಲ್ಲಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ ಬೀಜಗಳು ಮಳೆ ಅಭಾವದಿಂದ ಮೊಳಕೆಯೊಡೆಯಲಿಲ್ಲ. ಇತ್ತ ಸಾಲ ಮನ್ನಾ ಹಾಗೂ ಕೇಂದ್ರದ ಕಿಸಾನ್ ಸನ್ಮಾನ ರೈತರನ್ನು ತಲುಪುವುದು ಯಾವಾಗ ಎಂಬುದು ರೈತರ ಅಸಮಾಧಾನ.
ಎಳೆ ನೀರು, ಹಣ್ಣುಗಳ ಬೇಡಿಕೆ :
ಬಿಸಿಲು ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಎಳೆ ನೀರಿಗೆ ಸಾಕಷ್ಟು ಬೇಡಿಕೆ ಹೆಚ್ಚಾಗುತ್ತಿದೆ. ಒಂದು ತೆಂಗಿನ ಎಳೆ ನೀರು 30 ರಿಂದ 35ರೂ. ವರೆಗೆ ಮಾರಾಟವಾಗುತ್ತಿದೆ. ಸೇಬು, ದ್ರಾಕ್ಷಿ, ಕಲ್ಲಂಗಡಿ, ಬಾಳೆಹಣ್ಣು ಸೇರಿದಂತೆ ಇತರ ಹಣ್ಣುಗಳಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ. ಜನರ ಬೇಡಿಕೆಯಷ್ಟು ಮಾರುಕಟ್ಟೆಯಲ್ಲಿ ಹಣ್ಣುಗಳು ದೊರೆಯದ್ದರಿಂದ ಇವುಗಳ ಬೆಲೆಯೂ ಗಗನಮುಖಿಯಾಗಿದೆ.
ಅಷ್ಟೇ ಅಲ್ಲ, ಮಧ್ಯಾಹ್ನ 12 ರಿಂದ ಸಂಜೆ 5 ರ ವರೆಗೆ ಪ್ರಮುಖ ರಸ್ತೆಗಳಲ್ಲಿ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ. ಮಾರುಕಟ್ಟೆಯಲ್ಲಿಯೂ ಜನ ಕಾಣುವುದು ವಿರಳ. ಕೆಲವರು ಅನಿವಾರ್ಯವಾಗಿ ಮಧ್ಯಾಹ್ನ ಅಂಗಡಿ ಮುಗ್ಗಟ್ಟುಗಳಿಗೆ ಬೀಗ ಹಾಕಿರುತ್ತಾರೆ. ಜನ ದೈನಂದಿನ ಕೆಲಸವನ್ನು ಮಧ್ಯಾಹ್ನ 12 ರೊಳಗೆ ಮುಗಿಸಿಕೊಳ್ಳುತ್ತಿದ್ದಾರೆ. ಸಂಜೆ 6ರ ನಂತರ ಕಾಣಿಸಿಕೊಳ್ಳುತ್ತಿದ್ದಾರೆ.
ರಸ್ತೆ ಸಂಚಾರ ವಿರಳ :
ಬೆಳಗ್ಗೆ ಏಳರಿಂದಲೇ ಬಿಸಿಲು ಮೈಸುಡಲಾರಂಬಿಸಿದೆ. ಸಂಜೆ 6 ರ ವರೆಗೆ ಸೂರ್ಯ ಕೆಂಡ ಕಾರುತ್ತಿದ್ದಾನೆ. ಬಿಸಿಲಿನ ಝಳಕ್ಕೆ ಜನ ಸೋತು ಸುಣ್ಣವಾಗುತ್ತಿದ್ದಾರೆ. ಇಷ್ಟು ದಿನ ಚಳಿಗಾಲವಿದ್ದ ಕಾಣ ಜನ ವಾಯು ವಿಹಾರಕ್ಕೆ ಬೆಳಗ್ಗೆ ಆರು ಗಂಟೆಯ ಹೋಗುತ್ತಿದ್ದರು. ಈಗ ಬಿಸಿಲು ಹೆಚ್ಚಾಗುತ್ತಿದ್ದಂತೆ 5.30ಕ್ಕೆಲ್ಲ ವಾಯುವಿವಾರಕ್ಕೆ ಬಂದು ಏಳು ಗಂಟೆಗೆ ಹಿಂತಿರುಗುತ್ತಿದ್ದಾರೆ. ಸಂಜೆ ಆರು ಗಂಟೆಯ ನಂತರ ಮತ್ತೆ ಹೊರ ಬರುತ್ತಿದ್ದಾರೆ. ಇದರಿಂದ ಕ್ರೀಡಾಂಗಣ ಮತ್ತು ಪ್ರಮುಖ ಸ್ಥಳಗಳು,ರಸ್ತೆಗಳು ಬೆಳಗ್ಗೆಯಿಂದ ಸಂಜೆವರೆಗೆ ಜನರಿಲ್ಲದೆ ಬಿಕೋ ಎನ್ನುತ್ತಿವೆ.