ಆ್ಯಪ್ನಗರ

ಬಿಸಿಲಲ್ಲಿ ಮಕ್ಕಳ ಡಾನ್ಸ್‌ !

ರೋಣ: ಮಕ್ಕಳು ಸುಡು ಬಿಸಿಲಿನಲ್ಲಿಕುಣಿದರು. ಬಿಸಿಲಿನಲ್ಲಿಯೇ ನಿಲ್ಲಿಸಿದ ನೀರಿನ ಟ್ಯಾಂಕ್‌ ...ಶಿಕ್ಷಕರು ನೆರಳಿನಲ್ಲಿಕುಳಿತಿದ್ದರು.... ಇಂತಹ ಚಿತ್ರಣ ಪಟ್ಟಣದ ನ್ಯೂ ಲೀಟಲ್‌ ಫ್ಲಾವರ್‌ ಶಾಲೆ ಮೈದಾನದಲ್ಲಿಜಿಪಂ,ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಹಾಗೂ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ,

Vijaya Karnataka 13 Nov 2019, 5:00 am
ರೋಣ: ಮಕ್ಕಳು ಸುಡು ಬಿಸಿಲಿನಲ್ಲಿಕುಣಿದರು. ಬಿಸಿಲಿನಲ್ಲಿಯೇ ನಿಲ್ಲಿಸಿದ ನೀರಿನ ಟ್ಯಾಂಕ್‌ ...ಶಿಕ್ಷಕರು ನೆರಳಿನಲ್ಲಿಕುಳಿತಿದ್ದರು.... ಇಂತಹ ಚಿತ್ರಣ ಪಟ್ಟಣದ ನ್ಯೂ ಲೀಟಲ್‌ ಫ್ಲಾವರ್‌ ಶಾಲೆ ಮೈದಾನದಲ್ಲಿಜಿಪಂ,ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಹಾಗೂ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
Vijaya Karnataka Web 12 RON 3A_25
ರೋಣದಲ್ಲಿಜರುಗಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿವಿದ್ಯಾರ್ಥಿಗಳು ಬಿಸಿಲಲ್ಲಿನೃತ್ಯ ಮಾಡಿದರು.


ಕಾರ್ಯಕ್ರಮದಲ್ಲಿಮಕ್ಕಳು ಸುಡು ಬಿಸಿಲಿನಲ್ಲಿಕುಂತರೆ, ಶಿಕ್ಷಕರು, ಅಧಿಕಾರಿಗಳು ಮರದ ನೆರಳಿನ ಆಸನಗಳಲ್ಲಿಕೂಳಿತಿರುವುದು ಕಂಡು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಾದ ಕಾರ್ಯಕ್ರಮ 12.15ಕ್ಕೆ ಆರಂಭವಾಯಿತು. ಆದರೆ, ಸುಮಾರು ಎರಡೂವರೆ ತಾಸು ಮಕ್ಕಳು ಸುಡು ಬಿಸಿಲಿನ ನೆಲದ ಮೇಲೆ ಕುಳಿತುಕೊಳ್ಳುವಂತಾಯಿತು.ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ಪಾಟೀಲ, ತಾಪಂ ಸದಸ್ಯ ಎಂ.ಎ.ತರಪದಾರ, ಬಿಇಒ ಎನ್‌.ನಂಜುಂಡಯ್ಯ, ಬಿಆರ್‌ಸಿ ಎನ್‌.ವಿ.ಹಿರೇಮಠ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ಇದ್ದರು.

ಬಿಸಿ ನೀರು :
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದ ನಾನಾ ಶಾಲೆಗಳ ಮಕ್ಕಳು ಬಿಸಿ ನೀರು ಕುಡಿಯಬೇಕಾದ ಅನಿವಾರ್ಯತೆ ಎದುರಾಯಿತು. ಶಾಲೆ ಮೈದಾನದಲ್ಲಿಸಾಕಷ್ಟು ಗಿಡಮರಗಳಿದ್ದರೂ, ಕುಡಿಯುವ ನೀರಿನ ಟ್ಯಾಂಕರ್‌, ಬಾಟಲ್‌ಗಳನ್ನು ಬಿಸಿಲಿನಲ್ಲಿಇಡಲಾಗಿತ್ತು. ಸುಡು ಬಿಸಿಲಿಗೆ ಕಾಯ್ದ ಟ್ಯಾಂಕರ್‌ ನೀರನ್ನು ವಿದ್ಯಾರ್ಥಿಗಳು ಕುಡಿಯಬೇಕಾಯಿತು.

ಕಾಟಾಚಾರಕ್ಕೆ ಪ್ರತಿಭಾ ಕಾರಂಜಿ :
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2 ಲಕ್ಷ ರೂ. ಅನುದಾನವಿದ್ದು, ಯಾವುದೇ ಸಮರ್ಪಕ ಕಾರ್ಯಗಳು ಶಿಕ್ಷಣ ಇಲಾಖೆಯಿಂದ ಮಾಡಿದ್ದು ಕಂಡು ಬರಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾಗಿರುವುದು ಒಂದೆಡೆಯಾದರೆ, ಮಕ್ಕಳು ಹಸಿದ ಹೊಟ್ಟೆಯಲ್ಲಿಅನಾವರಣಗೊಳಿಸಿದ ನಾನಾ ಪ್ರತಿಭೆ ಹಾಗೂ ನೃತ್ಯಗಳನ್ನು ಮಾಡುತ್ತಿರುವುದು ಕಂಡು ಬಂದಿತು.

ಬಿಸಿಲಲ್ಲಿಯೇ ನೃತ್ಯ :
ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ತಿಂಗಳುಗಟ್ಟಲೇ ಜಾನಪದ ನೃತ್ಯ, ಗುಂಪು ನ್ಯತ್ಯ, ವೀರಗಾಸೆ ಸೇರಿದಂತೆ ಹಲವು ಜನಪದ ಶೈಲಿಗಳ ನೃತ್ಯ ಪ್ರ್ಯಾಕ್ಟಿಸ್‌ ಮಾಡಿಕೊಂಡು, ಪ್ರತಿಭಾ ಕಾರಂಜಿಯಲ್ಲಿಸ್ಪರ್ಧೆಗಿಳಿಯಲು ಬಂದಿದ್ದರು. ಆದರೆ ಮಕ್ಕಳಿಗೆ ವೇದಿಕೆಯ ಕೊರತೆ ಕಾಡಿತು. ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದೇ ನಿಯಮ ಎನ್ನುವಂತೆ ನಿರ್ಣಾಯಕರಾದ ಶಿಕ್ಷಕರಿಗೆ ಗಿಡಮರಗಳಡಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಸ್ಪರ್ಧಾಳು ಮಕ್ಕಳು ಸುಡು ಬಿಸಿಲಿನಲ್ಲೇ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಮೈದಾನದ ನೆಲದ ಮೇಲೆ ಆಯೋಜಕರು ಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದರಿಂದ ಮಕ್ಕಳ ಕುಣಿತಕ್ಕೆ ಧೂಳು ಏಳುತ್ತಿತ್ತು. ಅದನ್ನು ಸಹಿಸಿಕೊಂಡು ಮಕ್ಕಳು ಕೋಲಾಟ, ಜನಪದ ನೃತ್ಯ, ವೀರಗಾಸೆ ಮುಂತಾದ ಗುಂಪು ಸ್ಪರ್ಧೆಗಳಲ್ಲಿಪಾಲ್ಗೊಂಡರು.ಇದೆಂತಹ ವ್ಯವಸ್ಥೆ ಎಂದು ಅಧಿಕಾರಿಗಳ ವಿರುದ್ದ ಪಾಲಕರು ಹರಿಹಾಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ