ಆ್ಯಪ್ನಗರ

ಇನ್ಫೋಸಿಸ್‌ನಿಂದ ನೀಡಿದ ಕಿಟ್‌ ವಿತರಣೆ

ನರಗುಂದ: ಮಲಪ್ರಭಾ ನದಿ ಮತ್ತು ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ಅಂತ್ರಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ದಾನಿಗಳು, ವಿವಿಧ ಸಂಘ ಸಂಸ್ಥೆಗಳಿಂದ ನೆರವಿನ ಮಹಾಪೂರವೆ ಹರಿದು ಬರುತ್ತಿದೆ.

Vijaya Karnataka 15 Aug 2019, 5:00 am
ನರಗುಂದ: ಮಲಪ್ರಭಾ ನದಿ ಮತ್ತು ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ಅಂತ್ರಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ದಾನಿಗಳು, ವಿವಿಧ ಸಂಘ ಸಂಸ್ಥೆಗಳಿಂದ ನೆರವಿನ ಮಹಾಪೂರವೆ ಹರಿದು ಬರುತ್ತಿದೆ.
Vijaya Karnataka Web GDG-13NRD1


ಇನ್ಫೋಸಿಸ್‌ ಸಂಸ್ಥೆ ಅಧ್ಯಕ್ಷ ಸುಧಾಮೂರ್ತಿ ಅವರು ಕಳುಹಿಸಿದ ಸಂತ್ರಸ್ತರಿಗೆ ಅವಶ್ಯವಾಗಿ ಬೇಕಾಗಿರುವ ವಸ್ತುಗಳನ್ನು ಒಳಗೊಂಡ ಕಿಟ್‌ಗಳನ್ನು ಕಾಳಜಿ ಕೇಂದ್ರದ ಸಂತ್ರಸ್ತರಿಗೆ ವಿತರಿಸಲಾಯಿತು. ಮನೆ, ಮಠ ಕಳೆದುಕೊಂಡು ಬೀದಿಗೆ ಬಂದಿರುವ ನೆರೆ ಸಂತ್ರಸ್ತರಿಗೆ ಅವಶ್ಯವಾಗಿರುವ ಆಹಾರ ಧಾನ್ಯ ಹೊರತು ಪಡಿಸಿ ಬಕೆಟ್‌, ಚಾಪೆ, ಹೊದಿಕೆ, ಸೋಪುಗಳು, ಟೂತ್‌ ಪೇಸ್ಟ್‌, ಬ್ರೆಸ್‌, ಟವಲ್‌, ಮಕ್ಕಳ, ಮಹಿಳೆಯರ ಉಡುಪುಗಳು ಸೇರಿದಂತೆ ಹಲವು ವಸ್ತುಗಳ ಕಿಟ್‌ ವಿತರಿಸಲಾಯಿತು.

ಇಲ್ಲಿನ ವಿನಾಯಕ ನಗರದ ಯುವಕರು ಕರಿಕಿಕಟ್ಟಿ, ಮೆಣಸಗಿ, ಹೊಳೆಆಲೂರ ಭಾಗದ ಸಂತ್ರಸ್ತರಿಗೆ ಪಲಾವ್‌, ಉಪ್ಪಿಟ್ಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ