ಆ್ಯಪ್ನಗರ

ಕಾದಂಬರಿ ಅಧ್ಯಯನದಿಂದ ಜ್ಞಾನ ವೃದ್ಧಿ

ಗಜೇಂದ್ರಗಡ : ಕಾಳಿದಾಸ ವಿರಚಿತ ಮೇಘಧೂತ, ಬಾಣ ರಚಿಸಿದ ಹರ್ಷ, ಪಂಚತಂತ್ರ, ಮುದ್ರಾರಕ್ಷ ಸ ಚರಿತೆಯಂತಹ ಹಲವು ಪೌರಾಣಿಕ ಮಹಾಕಾವ್ಯ, ಕಾದಂಬರಿಗಳು ನವ್ಯ ಯುವ ಸಾಹಿತಿಗಳಿಗೆ ಮಾರ್ಗದರ್ಶನಗಳಾಗಿವೆ ಎಂದು ನಿವೃತ್ತ ಶಿಕ್ಷ ಕ ಕೆ.ಎಸ್‌. ಗಾರವಾಡಹಿರೇಮಠ ಹೇಳಿದರು.

Vijaya Karnataka 2 Jul 2019, 5:00 am
ಗಜೇಂದ್ರಗಡ : ಕಾಳಿದಾಸ ವಿರಚಿತ ಮೇಘಧೂತ, ಬಾಣ ರಚಿಸಿದ ಹರ್ಷ, ಪಂಚತಂತ್ರ, ಮುದ್ರಾರಕ್ಷ ಸ ಚರಿತೆಯಂತಹ ಹಲವು ಪೌರಾಣಿಕ ಮಹಾಕಾವ್ಯ, ಕಾದಂಬರಿಗಳು ನವ್ಯ ಯುವ ಸಾಹಿತಿಗಳಿಗೆ ಮಾರ್ಗದರ್ಶನಗಳಾಗಿವೆ ಎಂದು ನಿವೃತ್ತ ಶಿಕ್ಷ ಕ ಕೆ.ಎಸ್‌. ಗಾರವಾಡಹಿರೇಮಠ ಹೇಳಿದರು.
Vijaya Karnataka Web GDG-1GJD5
ಗಜೇಂದ್ರಗಡ ಮೈಸೂರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ದಿಂದ 155 ನೇ ಸಾಹಿತ್ಯ ಚಿಂತನಾಗೊಷ್ಠಿಯಲ್ಲಿ ನಿವೃತ್ತ ಶಿಕ್ಷ ಕ ಕೆ.ಎಸ್‌. ಗಾರವಾಡಹಿರೇಮಠ ಮಾತನಾಡಿದರು.


ಸ್ಥಳೀಯ ಮೈಸೂರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ದಿಂದ ನಡೆದ 155ನೇ ಸಾಹಿತ್ಯ ಚಿಂತನಾಗೊಷ್ಠಿಯಲ್ಲಿ ಅವರು ಮಾತನಾಡಿದರು.

ಹಿಂದಿನ ಕಾಲದ ಸಾಮಾಜಿಕ, ಐತಿಹಾಸಿಕ ಹಾಗೂ ಅಂದಿನ ಜನರ ಸ್ಥಿತಿಗತಿಗಳನ್ನು ಮಹಾಕಾವ್ಯಗಳು, ಕಾದಂಬರಿಗಳು ಪ್ರತಿಬಿಂಬಿಸಲಿವೆ. ಅವುಗಳ ಅಧ್ಯಯನದಿಂದ ಸಾಹಿತ್ಯ ಜ್ಞಾನ ವೃದ್ಧಿಯಾಗಲಿದೆ ಎಂದರು.

ಮಹಿಳಾ ಘಟಕ ಅಧ್ಯಕ್ಷೆ ಶರಣಮ್ಮಾ ಅಂಗಡಿ ಮಾತನಾಡಿ, ಹಿಂದಿನ ಕಾಲದಲ್ಲಿ ರಚಿಸಿದ ಮಹಾಕಾವ್ಯಗಳು ಇಂದಿನ ಕಾಲಘಟ್ಟಕ್ಕೆ ತುಲನೆ ಮಾಡಿ ಓದುವುದರಿಂದ ಕನ್ನಡ ನಾಡು, ನುಡಿ, ಭಾಷಾಜ್ಞಾನ ಹೆಚ್ಚಲಿದೆ ಎಂದರು. ಭುವನೇಶ್ವರಿ ಅಂಗಡಿ, ಎಸ್‌.ವಿ. ನವಲಗುಂದ, ಎಸ್‌.ಕೆ. ಸಂಗಮದ, ಶಂಕರ್‌ ಕಲ್ಲಿಗನೂರ, ಎಸ್‌,ಎಸ್‌, ನರೇಗಲ್‌, ಎಮ್‌.ಎಸ್‌. ಮಕಾನದಾರ, ಎಚ್‌.ಆರ್‌. ಭಜೇಂತ್ರಿ, ಐ.ಆರ್‌. ಯಲಿಗಾರ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ