ಆ್ಯಪ್ನಗರ

ಸ್ಪರ್ಧಾತ್ಮಕ ಪರೀಕ್ಷೆಯಿಂದ ಜ್ಞಾನ ಹೆಚ್ಚಳ

ನರೇಗಲ್ಲ: ಪ್ರೌಢಶಾಲೆಯ 8ನೇ ತರಗತಿಗೆ ನಡೆಯುವ ಎನ್‌ಎಂಎಂಎಸ್‌ ಮತ್ತು 10ನೇ ತರಗತಿಗೆ ನಡೆಯುವ ಎನ್‌ಟಿಎಸ್‌ಇ ಪರೀಕ್ಷೆಗಳು ಸಹಕಾರಿಯಾಗುತ್ತವೆ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಹೇಳಿದರು.

Vijaya Karnataka 21 Oct 2019, 5:00 am
ನರೇಗಲ್ಲ: ಪ್ರೌಢಶಾಲೆಯ 8ನೇ ತರಗತಿಗೆ ನಡೆಯುವ ಎನ್‌ಎಂಎಂಎಸ್‌ ಮತ್ತು 10ನೇ ತರಗತಿಗೆ ನಡೆಯುವ ಎನ್‌ಟಿಎಸ್‌ಇ ಪರೀಕ್ಷೆಗಳು ಸಹಕಾರಿಯಾಗುತ್ತವೆ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಹೇಳಿದರು.
Vijaya Karnataka Web knowledge increase from competitive examination
ಸ್ಪರ್ಧಾತ್ಮಕ ಪರೀಕ್ಷೆಯಿಂದ ಜ್ಞಾನ ಹೆಚ್ಚಳ


ಸಮೀಪದ ಕೋಟುಮಚಗಿಯ ಸೋಮೇಶ್ವರ ಪ್ರೌಢಶಾಲೆಯಲ್ಲಿವಿದ್ಯಾರ್ಥಿಗಳಿಗಾಗಿ ಕೋಟುಮಚಗಿಯ ಸೋಮೇಶ್ವರ ಪ್ರೌಢಶಾಲೆ ಮತ್ತು ಸರಕಾರಿ ಪ್ರೌಢಶಾಲೆಗಳ ಆಶ್ರಯದಲ್ಲಿನಡೆದ ಎನ್‌ಎಂಎಂಎಸ್‌ ಮತ್ತು ಎನ್‌ಟಿಎಸ್‌ಇ ಪರೀಕ್ಷೆಗಳ ಎರಡು ದಿನಗಳ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಮ್ಮಲ್ಲಿಸ್ಪರ್ಧಾತ್ಮಕ ಮನೋಭಾವನೆಯನ್ನು ಈಗಿನಿಂದಲೆ ಬೆಳೆಸಲು ಈ ಪರೀಕ್ಷೆಗಳು ಸಹಕಾರಿಯಾಗಿವೆ. ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.

ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ವಿನಾಯಕ ಬಂಡಾ ಮಾತನಾಡಿ, ಇಂತಹ ತರಬೇತಿ ನಡೆದಿರುವುದು ಇದೇ ಮೊದಲು. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಪರೀಕ್ಷೆಯಲ್ಲಿಯಶಸ್ಸು ಪಡೆಯಿರಿ ಎಂದರು.

ಸಂಪನ್ಮೂಲ ವ್ಯಕ್ತಿ ಜೆ.ವಿ.ಹಿರೇಮಠ ಅವರು ಪರೀಕ್ಷೆಯ ಸ್ವರೂಪವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ವೇದಿಕೆಯಲ್ಲಿಶಿಕ್ಷಕರಾದ ಎಂ.ಎಸ್‌.ಅಸುಂಡಿ, ಕೆ.ಆರ್‌.ಹಾಳಕೇರಿ ಉಪಸ್ಥಿತರಿದ್ದರು. ರತ್ನಾ ತಡಹಾಳ, ಮಹಾದೇವಿ ತಳವಾರ ಪ್ರಾರ್ಥಿಸಿದರು. ಸೀಮಾ ಕೊಪ್ಪಳ ನಿರೂಪಿಸಿದರು. ವಿಜಯಲಕ್ಷಿತ್ರ್ಮೕ ಸಂಕನಗೌಡ್ರ ಸ್ವಾಗತಿಸಿದರು. ಚಂದ್ರಶೇಖರ ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ