ಆ್ಯಪ್ನಗರ

ಕೊಡಗು, ಕೇರಳದ ಹಾನಿ ಜಗತ್ತಿಗೆ ಪಾಠ

ನರೇಗಲ್ಲ :ಮಾನವ ತನ್ನ ದುರಾಸೆಯಿಂದ ಪರಿಸರ ಸಂಪತ್ತು ಹಾನಿಗೊಳಿಸಿದ ಪರಿಣಾಮವಾಗಿ ಕರ್ನಾಟಕದ ಕೊಡಗು ಹಾಗೂ ಕೇರಳದ ಕೆಲ ಜಿಲ್ಲೆಗಳು ಎಂದು ಕಂಡರಿಯದ ರೀತಿಯಲ್ಲಿ ಹಾನಿ ಅನುಭವಿಸಿವೆ. ಇದು ಜಗತ್ತಿಗೆ ಒಂದು ಪಾಠವಾಗಿದೆ ಎಂದು ಎಸ್‌ಕೆಡಿಆರ್‌ಡಿಪಿಯ ನರಗುಂದ, ರೋಣ ವಲಯದ ಕೃಷಿ ಅಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು.

Vijaya Karnataka 1 Sep 2018, 5:00 am
ನರೇಗಲ್ಲ :ಮಾನವ ತನ್ನ ದುರಾಸೆಯಿಂದ ಪರಿಸರ ಸಂಪತ್ತು ಹಾನಿಗೊಳಿಸಿದ ಪರಿಣಾಮವಾಗಿ ಕರ್ನಾಟಕದ ಕೊಡಗು ಹಾಗೂ ಕೇರಳದ ಕೆಲ ಜಿಲ್ಲೆಗಳು ಎಂದು ಕಂಡರಿಯದ ರೀತಿಯಲ್ಲಿ ಹಾನಿ ಅನುಭವಿಸಿವೆ. ಇದು ಜಗತ್ತಿಗೆ ಒಂದು ಪಾಠವಾಗಿದೆ ಎಂದು ಎಸ್‌ಕೆಡಿಆರ್‌ಡಿಪಿಯ ನರಗುಂದ, ರೋಣ ವಲಯದ ಕೃಷಿ ಅಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು.
Vijaya Karnataka Web kodagu a lesson to the world of damage to kerala
ಕೊಡಗು, ಕೇರಳದ ಹಾನಿ ಜಗತ್ತಿಗೆ ಪಾಠ


ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು (ಎಸ್‌ಕೆಡಿಆರ್‌ಡಿಪಿ) ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಭೂಮಿಯ ಹಂಗಿನಲ್ಲಿ ಬದುಕುತ್ತಿರುವ ಸೇವಕರು ಮಾತ್ರ. ಆದರೆ ಮಾಲೀಕರಂತೆ ವರ್ತಿಸಿದಾಗ ಹಾಗೂ ಪರಿಸರ ಸಂಪತ್ತು ಹಾಳು ಮಾಡುವ ಪ್ರಮಾಣ ಮಿತಿ ಮೀರಿದಾಗ ಪ್ರಕೃತಿ ವಿಕೋಪಗಳು ಆಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ಗಿಡ ಮರ ನೆಟ್ಟು ತಾಪಮಾನ ಕಡಿತ, ಜೀವ ವೈವಿಧ್ಯಗಳ ಸಂರಕ್ಷ ಣೆಗೆ ಮುಂದಾಗಬೇಕು ಎಂದರು.

ಮುಖ್ಯ ಶಿಕ್ಷ ಕ ಮೋಹನ ರಾಥೋಡ್‌ ಮಾತನಾಡಿ, ಮಾನವ ಸಂಕುಲ ಅಭಿವೃದ್ಧಿ ಮತ್ತು ಪರಿಸರ ಸಮತೋಲನ ಕಾಪಾಡಲು ಹಸಿರು ಸಂಪತ್ತು ಉಳಿಸಿ ಬೆಳೆಸುವುದು ಅವಶ್ಯವಾಗಿದೆ ಎಂದು ಹೇಳಿದರು.

ಮೇಲ್ವಿಚಾರಕಿ ರೂಪಾ ಹೆಬ್ಬಾಳಲ್ವಿ, ಲಲಿತಾ ರೇಣುಕಾಮಠ, ದೇವಕ್ಕ ಪಲ್ಲೇದ, ಸಂಗಮೇಶ ಮೇಣಸಗಿ, ಮಮತಾಜ ನದಾಫ್‌, ರೇಖಾ ಗಂಗಣವರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ