ಆ್ಯಪ್ನಗರ

ಕುಡುಕರ ಉಪಟಳ ತಡೆಗೆ ಮನವಿ

ನರೇಗಲ್ಲ: ನರೇಗಲ್ಲ ತೆಗ್ಗಿನಕೇರಿ ಓಣಿಯಲ್ಲಿ ಕುಡುಕರ ಉಪಟಳ ನಿಲ್ಲಿಸುವಂತೆ ನಾಗರಿಕರು ಹಾಗೂ ಮಹಿಳೆಯರು ಸ್ಥಳೀಯ ಪೊಲೀಸ್‌ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.

Vijaya Karnataka 26 Mar 2019, 5:00 am
ನರೇಗಲ್ಲ: ನರೇಗಲ್ಲ ತೆಗ್ಗಿನಕೇರಿ ಓಣಿಯಲ್ಲಿ ಕುಡುಕರ ಉಪಟಳ ನಿಲ್ಲಿಸುವಂತೆ ನಾಗರಿಕರು ಹಾಗೂ ಮಹಿಳೆಯರು ಸ್ಥಳೀಯ ಪೊಲೀಸ್‌ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
Vijaya Karnataka Web GDG-25NRGL2-73558


ಸಂತೋಷ ನಿರಂಜನ ಪೊಲೀಸ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಓಣಿಯಲ್ಲಿ ಪ್ರತಿದಿನ ಸಂಜೆಯಾಗುತ್ತಿದ್ದಂತೆ ಕುಡಕರು ಕಂಠಪೂರ್ತಿ ಕುಡಿದು ಅವಾಚ್ಯವಾಗಿ ಕೂಗಾಡುತ್ತು ಹಾಓಗುತ್ತಾರೆ. ಇವರ ಕಾಟದಿಂದ ಓಣಿಯಲ್ಲಿ ಮಹಿಳೆಯರು, ಮಕ್ಕಳು ನಿರ್ಭೀತಿಯಿಂದ ತಿರುಗಾಡಲು ಹಿಂಜರಿಯುವಂತಾಗಿದೆ. ಇಲ್ಲಿನ ಕೆಲವು ಅಂಗಡಿಗಳು ತಮ್ಮ ವ್ಯಾಪಾರ ಆಸೆಗಾಗಿ ರಾತ್ರಿ 11 ಘಂಟೆಯಾದರೂ ವಹಿವಾಟು ನಡೆಸುತ್ತಿದ್ದು ಇದರಿಂದಾಗಿ ಕುಡಕರ ಹಾವಳಿ ಹೆಚ್ಚಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಮಂಜು ಕಮಲಾಪೂರ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಈ ಕುಡಕರ ಹಾವಳಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು ಕಾರಣ ಪ್ರತಿನಿತ್ಯ ಈ ಓಣಿಯಲ್ಲಿ ತಮ್ಮ ಸಿಬ್ಬಂದಿ ಇಂತವರ ಮೇಲೆ ಕ್ರಮಕೈಗೊಳ್ಳುವಂತೆ ನರೇಗಲ್‌ ಪೊಲೀಸ್‌ ಸಿಬ್ಬಂದಿಗೆ ಮನವರಿಕೆ ಮಾಡಿದರು. ಎ. ಎಚ್‌. ಪೂಜಾರ, ಗಂಗಮ್ಮ ಪೂಜಾರ, ಎಸ್‌. ಎಸ್‌. ಜೋಳದ, ಮೇರುನಾ ಸಾಬನವರ, ಮಲ್ಲಮ್ಮ ಕವಲೂರ, ಬಾಳಮ್ಮ ತಳವಾರ, ಪಾತಮ್ಮ ನಾಮಾಜಿ, ತಿಮ್ಮಪ್ಪ ಹಳ್ಳಿಕೇರಿ, ಹನಮಮ್ಮ ಪೂಜಾರ, ವಿಶ್ವನಾಥ ಬಡಿಗೇರ, ಮಾನಪ್ಪ ಬಡಿಗೇರ, ರಫೀಕ ಮುದರಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ