ಕುಮಾರಸ್ವಾಮಿ ಯೋಗ್ಯತೆ ಇಲ್ಲದ ಸಿಎಂ
ಗದಗ : ಕುಮಾರಸ್ವಾಮಿ ಸಿಎಂ ಆಗಲು ಅಯೋಗ್ಯ ಎಂದು ಹೇಳಿದ್ದೆ. ಅದು ಅವರಿಗೆ ಬೇಸರ ಮೂಡಿಸಿದೆ. ಅದಕ್ಕಾಗಿ ಅಯೋಗ್ಯ ಬದಲಾಗಿ ಯೋಗ್ಯತೆ ಇಲ್ಲದ ಸಿಎಂ ಎಂದು ಹೇಳಲು ಬಯಸುತ್ತೇನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
Vijaya Karnataka 13 Apr 2019, 5:00 am
ಗದಗ : ಕುಮಾರಸ್ವಾಮಿ ಸಿಎಂ ಆಗಲು ಅಯೋಗ್ಯ ಎಂದು ಹೇಳಿದ್ದೆ. ಅದು ಅವರಿಗೆ ಬೇಸರ ಮೂಡಿಸಿದೆ. ಅದಕ್ಕಾಗಿ ಅಯೋಗ್ಯ ಬದಲಾಗಿ ಯೋಗ್ಯತೆ ಇಲ್ಲದ ಸಿಎಂ ಎಂದು ಹೇಳಲು ಬಯಸುತ್ತೇನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಗುರುವಾರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ವೈಚಾರಿಕ ಚರ್ಚೆ ನಡೆಯುತ್ತಿದ್ದರೆ ಕಾಂಗ್ರೆಸ್-ಜೆಡಿಎಸ್ ಜಾತಿ ಸಂಘರ್ಷಕ್ಕೆ ನಾಂದಿ ಹಾಡುತ್ತಿವೆ. ಅಲ್ಲದೇ ಚುನಾವಣೆಯಲ್ಲಿ ಮಾಧ್ಯಮಗಳ ಮೇಲೆ ಹಲ್ಲೆ ನಡೆಯುತ್ತೆ ಎನ್ನುವುದನ್ನು ಮುಖ್ಯಮಂತ್ರಿಯೇ ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ದೇಶದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗಲೂ ಬಿಜೆಪಿ ಮಾಧ್ಯಮಗಳ ರಕ್ಷ ಣೆಗೆ ನಿಂತಿತ್ತು ಈಗಲೂ ನಿಲ್ಲುತ್ತದೆ. ಮಾಧ್ಯಮದವರನ್ನು ರಕ್ಷ ಣೆ ಮಾಡಲು ಸಾಧ್ಯವಾಗದ ಸಿಎಂ ರಾಜ್ಯಕ್ಕೆ ಏಕೆ ಬೇಕು. ತಕ್ಷ ಣವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ತಿರುಗೇಟು ನೀಡಿದರು.
ಗುರುವಾರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ವೈಚಾರಿಕ ಚರ್ಚೆ ನಡೆಯುತ್ತಿದ್ದರೆ ಕಾಂಗ್ರೆಸ್-ಜೆಡಿಎಸ್ ಜಾತಿ ಸಂಘರ್ಷಕ್ಕೆ ನಾಂದಿ ಹಾಡುತ್ತಿವೆ. ಅಲ್ಲದೇ ಚುನಾವಣೆಯಲ್ಲಿ ಮಾಧ್ಯಮಗಳ ಮೇಲೆ ಹಲ್ಲೆ ನಡೆಯುತ್ತೆ ಎನ್ನುವುದನ್ನು ಮುಖ್ಯಮಂತ್ರಿಯೇ ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ದೇಶದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗಲೂ ಬಿಜೆಪಿ ಮಾಧ್ಯಮಗಳ ರಕ್ಷ ಣೆಗೆ ನಿಂತಿತ್ತು ಈಗಲೂ ನಿಲ್ಲುತ್ತದೆ. ಮಾಧ್ಯಮದವರನ್ನು ರಕ್ಷ ಣೆ ಮಾಡಲು ಸಾಧ್ಯವಾಗದ ಸಿಎಂ ರಾಜ್ಯಕ್ಕೆ ಏಕೆ ಬೇಕು. ತಕ್ಷ ಣವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ತಿರುಗೇಟು ನೀಡಿದರು.