ಲಕ್ಕುಂಡಿ: ನರಗುಂದ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಇಲ್ಲಿಯ ನಾಗರಿಕರು ಸಹಾಯ ಹಸ್ತ ನೀಡಿದ್ದಾರೆ. ಗ್ರಾಮದ ಯುವ ಸಮೂಹವು ಶುಕ್ರವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂತ್ರಸ್ತರಿಗೆ ನೀಡಲು ದೇಣೆಗೆ ಸಂಗ್ರಹಿಸಿದ್ದಾರೆ. 15 ಕ್ವಿಂಟಲ್ ಅಕ್ಕಿ, 2 ಚೀಲ ಜೋಳ, 1 ಕ್ವಿಂಟಲ್ ಬಾಳೆ ಹಣ್ಣು, 1 ಸಾವಿರ ರೊಟ್ಟಿ, 5 ಕೆಜಿ ಶೇಂಗಾ ಹಿಂಡಿ, 25 ಕೆಜಿ ಉಪ್ಪಿನಕಾಯಿ, 50 ಸೀರೆ, 25 ಲುಂಗಿ ಸೇರಿದಂತೆ 11 ಸಾವಿರ ರೂ.ಗಳ ಚಾಫೆ, ಟೀ ಶರ್ಟ, ಸ್ವೆಟರ್ಗಳನ್ನು ಕೊಣ್ಣುರು, ವಾಸನ , ಸುರಕೋಡ ಮತ್ತು ಕುರ್ಲಗೇರಿ ಗ್ರಾಮಗಳ ಸಂತ್ರಸ್ತ ನೆರವು ಕೇಂದ್ರಗಳಿಗೆ ತೆರೆಳಿ ವಿತರಿಸಿದ್ದಾರೆ. ಇಲ್ಲಿಯ ಮಾಜಿ ಸೈನಿಕ ಪಿ.ಎಸ್. ಗುಂಡಳ್ಳಿಯವರು 4 ಬಾಕ್ಸ್ ಮೆಡಿಕಲ್ ಕಿಟ್ ಹಾಗೂ ಸಂತೋಷ ಗುಂಡಳ್ಳಿ ಅವರು 10 ರೂ. ಸಾವಿರ ದೇಣಿಗೆ ನೀಡಿದ್ದಾರೆ. ಶಿವು ಗುಂಡಳ್ಳಿ, ಮಂಜುನಾಥ ಕೊಳಸೆ, ರಾಮಣ್ಣ ನರಗುಂದ, ಆನಂದ ನರಗುಂದ ಗಿರೀಶ ಹಡಪದ, ಶಿವಪುತ್ರಪ್ಪ ಹುಬ್ಬಳ್ಳಿ, ಬಸಣ್ಣ ಬೇಲೇರಿ,ಅಜ್ಜಪ್ಪ ಬಿಳೇಕುದರಿ, ಗೋವಿಂದ ನೂಕಾಪೂರ ಈ ಸಂದರ್ಭದಲ್ಲಿ ಇದ್ದರು.
ಸಂತ್ರಸ್ತರಿಗೆ ಲಕ್ಕುಂಡಿ ಗ್ರಾಮಸ್ಥರ ನೆರವು
ಲಕ್ಕುಂಡಿ: ನರಗುಂದ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಇಲ್ಲಿಯ ನಾಗರಿಕರು ಸಹಾಯ ಹಸ್ತ ನೀಡಿದ್ದಾರೆ. ಗ್ರಾಮದ ಯುವ ಸಮೂಹವು ಶುಕ್ರವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂತ್ರಸ್ತರಿಗೆ ನೀಡಲು ದೇಣೆಗೆ ಸಂಗ್ರಹಿಸಿದ್ದಾರೆ. 15 ಕ್ವಿಂಟಲ್ ಅಕ್ಕಿ, 2 ಚೀಲ ಜೋಳ, 1 ಕ್ವಿಂಟಲ್
Vijaya Karnataka 12 Aug 2019, 5:00 am