ಆ್ಯಪ್ನಗರ

ವಿವಿಧ ಕಾಮಗಾರಿಗೆ ಭೂಮಿ ಪೂಜೆ

ಲಕ್ಕುಂಡಿ: ತಾಲೂಕು ಪಂಚಾಯತಿ ಅನುದಾನದಲ್ಲಿವಿವಿಧ ಕಾಮಗಾರಿಗಳಿಗೆ ತಾಪಂ ಉಪಾಧ್ಯಕ್ಷೆ ಸುಜಾತಾ ಖಂಡು ಭೂಮಿ ಪೂಜೆ ನೆರವೇರಿಸಿದರು.

Vijaya Karnataka 13 Dec 2019, 5:00 am
ಲಕ್ಕುಂಡಿ: ತಾಲೂಕು ಪಂಚಾಯತಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ತಾಪಂ ಉಪಾಧ್ಯಕ್ಷೆ ಸುಜಾತಾ ಖಂಡು ಭೂಮಿ ಪೂಜೆ ನೆರವೇರಿಸಿದರು.
Vijaya Karnataka Web land worship for various works
ವಿವಿಧ ಕಾಮಗಾರಿಗೆ ಭೂಮಿ ಪೂಜೆ


ನಂತರ ಮಾತನಾಡಿದ ಅವರು, 6 ಮತ್ತು 7 ನೇ ವಾರ್ಡಿನಲ್ಲಿ2.40 ಲಕ್ಷ ರೂ. ವೆಚ್ಚದಲ್ಲಿಸಿ.ಸಿ.ರಸ್ತೆ ನಿರ್ಮಾಣ, 1.70 ಲಕ್ಷ ರೂ.ದಲ್ಲಿಸರಕಾರಿ ಉರ್ದು ಶಾಲೆಯಲ್ಲಿಕಂಪೌಂಡ್‌, ಶೌಚಾಲಯ ನಿರ್ಮಾಣ, 3.40 ಲಕ್ಷ ರೂ.ದಲ್ಲಿ ಅಂಬೇಡ್ಕರ ನಗರದಲ್ಲಿರುವ ಅಂಗನವಾಡಿ ಕೇಂದ್ರದ ಸುತ್ತಲೂ ಕಂಪೌಂಡ್‌ ಮತ್ತು ಸಮುದಾಯ ಭವನದ ಸುತ್ತಲೂ ಕಂಪೌಂಡ್‌ ನಿರ್ಮಾಣ ಹಾಗೂ 5 ನೇ ವಾರ್ಡಿನಲ್ಲಿಸಮುದಾಯ ಭವನದ ಕಾಮಗಾರಿಗೆ 1.30 ಲಕ್ಷ ರೂ. ವಿನಿಯೋಗಿಸಲಾಗುವುದು ಎಂದ ಅವರು, ಗುತ್ತಿಗೆದಾರರು ಪ್ರಮಾಣಿಕವಾಗಿ ಕಾಮಗಾರಿ ನೆರವೇರಿಸಬೇಕೆಂದರು. ಗ್ರಾಪಂ ಅಧ್ಯಕ್ಷ ಎಸ್‌.ಎಂ.ಬೂದಿಹಾಳ, ಸದಸ್ಯರಾದ ಮಹಾಂತೇಶ ಮೆಣಸಿನಕಾಯಿ, ಶೇಖರಯ್ಯ ಗಂಧದ, ರಾಮಣ್ಣ ನಿಡಗುಂದಿ, ಎಂ.ಎಂ.ಹುಬ್ಬಳ್ಳಿ, ಅರವಿಂದ ತೋಫಿನ, ನಜ್ಜಿ ಮಾಲ್ದಾರ, ಅಡಿವೆವ್ವ ಅಬ್ಬಿಗೇರಿ,ಫಕ್ಕೀರವ್ವ ಸೋಮನಕಟ್ಟಿ, ಸತ್ಯಮ್ಮ ಹಟ್ಟಿ, ಬಸಮ್ಮ ಕಟಗಿ, ರೇಣವ್ವ ತೆಳಗಡೆ, ಕುಸುಮವ್ವ ಚೌಕಿಮಠ, ಹಾಗೂ ಕೆ.ಎಸ್‌.ಪೂಜಾರ, ಅಂದಪ್ಪ ಕಣವಿ, ಯಲ್ಲಪ್ಪ ಮುಳ್ಳಾಳ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ