ಆ್ಯಪ್ನಗರ

ಮಕ್ಕಳಿಂದ ಉಪನ್ಯಾಸ ಕಾರ‍್ಯಕ್ರಮ

ಗದಗ: ಬೆಟಗೇರಿಯ ಶರಣ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ7ನೇ ತರಗತಿ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದ ನೀರು ಒಂದು ಅಮೂಲ್ಯ ಸಂಪತ್ತು ಎಂಬುವುದರ ಬಗ್ಗೆ ಮಕ್ಕಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

Vijaya Karnataka 5 Feb 2020, 5:00 am
ಗದಗ: ಬೆಟಗೇರಿಯ ಶರಣ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ7ನೇ ತರಗತಿ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದ ನೀರು ಒಂದು ಅಮೂಲ್ಯ ಸಂಪತ್ತು ಎಂಬುವುದರ ಬಗ್ಗೆ ಮಕ್ಕಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
Vijaya Karnataka Web lecture program by children
ಮಕ್ಕಳಿಂದ ಉಪನ್ಯಾಸ ಕಾರ‍್ಯಕ್ರಮ


ಅಧ್ಯಕ್ಷತೆ ಶಾಲೆಯ ಆಡಳಿತಾಧಿಕಾರಿ ವೈ.ಆರ್‌.ಪಾಟೀಲ ಮಾತನಾಡಿ, ನೀರನ್ನು ಯಾವ ರೀತಿಯಾಗಿ ಸಂರಕ್ಷಣೆ ಮಾಡಬೇಕು ಎಂಬುವುದರ ಬಗ್ಗೆ ತಿಳಿಸಿದರು.

ಮುಖ್ಯೋಪಾಧ್ಯಯನಿ ಎಸ್‌.ಪಿ. ಕುಲಕರ್ಣಿ ಮಾತನಾಡಿ, ನಮ್ಮ ದೇಶದಲ್ಲಿನೀರಿನ ಕೊರತೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಸರಿಯಾಗಿ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ವಿದ್ಯಾರ್ಥಿಗಳಾದ ಸಿಮ್ರನ ಕುರಟ್ಟಿ, ಕೃಷ್ಣಕುಮಾರ ಹೊನ್ನಾಲ, ಆಶಾ ಭಜಂತ್ರಿ, ಆಕಾಶ ಶ್ಯಾಗಾವಿ, ನವೀನ ಅಣ್ಣಿಗೇರಿ, ಶಂಕರ ಮುದಗಲ್‌, ಪ್ರಜ್ವಲ್‌ ಕರಬಿಷ್ಠಿ, ಸುಕನ್ಯ ಗುಗ್ಗರಿ ನೀರಿನ ಉಪಯೋಗ ಹೇಗೆ ಮಾಡಬೇಕು ಎಂಬುದರ ಕುರಿತು ಮಾತನಾಡಿದರು.

ಶಿಕ್ಷಕಿ ಎಸ್‌.ಎಸ್‌.ಮಾನೇದ ಮಾತನಾಡಿ, ಮಳೆನೀರಿನ ಕೊಯ್ಲನ್ನು ಪ್ರಯೋಗ ಮಾಡಿ ಕೊಳವೆಗಳ ಮೂಲಕ ನೀರು ಸರಬರಾಜು ಮಾಡುವ ಸಂದರ್ಭದಲ್ಲಿಕಟ್ಟಡಗಳಲ್ಲಿನ ಸೋರುವ ನಲ್ಲಿಗಳು ಮತ್ತು ಇತರೆ ಸ್ಥಳಗಳಲ್ಲಿನೀರು ಪೋಲಾಗುವ ಬಗ್ಗೆ ಆಲೋಚಿಸಬೇಕಾದ ಅಗತ್ಯವಿದೆ. ನೀರಿನ ಅನಗತ್ಯ ಬಳಕೆ ಮತ್ತು ಅತಿಯಾಗಿ ಅಂತರ್ಜಲ ಹೊರ ತೆಗೆಯುವುದನ್ನು ತಪ್ಪಿಸಬೇಕು ಭೂಮಿಯೊಳಗೆ ನೀರನ್ನು ಮರುಪೂರಣ ಮಾಡುವುದನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ