ಆ್ಯಪ್ನಗರ

ಇಂದು ಉಪನ್ಯಾಸ ಕಾರ್ಯಕ್ರಮ

ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿನ. 4ರಂದು ತೋಂಟದಾರ್ಯ ಮಠದಲ್ಲಿಜರಗುವ 2457 ನೆಯ ಶಿವಾನುಭವದಲ್ಲಿಕನ್ನಡ ತಿಂಗಳಿನ ಅಂಗವಾಗಿ ವಿಶೇಷ ಉಪನ್ಯಾಸ, ಸನ್ಮಾನ ಹಾಗೂ ಕನ್ನಡ ನಾಡುನುಡಿ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

Vijaya Karnataka 4 Nov 2019, 5:00 am
ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿನ. 4ರಂದು ತೋಂಟದಾರ್ಯ ಮಠದಲ್ಲಿಜರಗುವ 2457 ನೆಯ ಶಿವಾನುಭವದಲ್ಲಿಕನ್ನಡ ತಿಂಗಳಿನ ಅಂಗವಾಗಿ ವಿಶೇಷ ಉಪನ್ಯಾಸ, ಸನ್ಮಾನ ಹಾಗೂ ಕನ್ನಡ ನಾಡುನುಡಿ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
Vijaya Karnataka Web lecture program today
ಇಂದು ಉಪನ್ಯಾಸ ಕಾರ್ಯಕ್ರಮ


ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸುವರು. ಕನ್ನಡ ಅರಿವು ಕನ್ನಡದಲ್ಲೆಇದೆ ಕುರಿತು ಹಿರಿಯ ಸಾಹಿತಿ ಡಾ. ಶಾಮಸುಂದರ ಬಿದರಕುಂದಿ ಉಪನ್ಯಾಸ ನೀಡುವರು. 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್‌.ಆರ್‌.ಗುಂಜಾಳ ಅವರಿಗೆ ಸನ್ಮಾನ ನಡೆಯಲಿದೆ. ಕನ್ನಡ ನಾಡು ನುಡಿ ಕುರಿತಾದ ಗೀತಗಾಯನವನ್ನು ಸಂಗೀತ ಕಲಾವಿದರಾದ ಶ್ರೀನಿವಾಸ ಕುಲಕರ್ಣಿ ಹಾಗೂ ತಂಡದವರಿಂದ ಜರುಗಲಿದೆ.

ಧರ್ಮಗ್ರಂಥ ಪಠಣವನ್ನು ಕುಮಾರ ಆದಿತ್ಯ ಶ್ರೀನಿವಾಸ ಜಾಧವ ಹಾಗೂ ವಚನ ಚಿಂತನವನ್ನು ಶ್ರೀನಿವಾಸ ಬಾಬುರಾವ ಜಾಧವ ನೆರವೇರಿಸುವರು. ದಾಸೋಹ ಸೇವೆಯನ್ನು ಶರಣ ಬಸಪ್ಪ ಅಮೃತಪ್ಪ ಪಲ್ಲೇದ ಅಣ್ಣಿಗೇರಿ ವಹಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎಂ.ಸಿ.ಐಲಿ, ಶಿವಾನುಭವ ಸಮಿತಿ ಚೇರ್ಮನ್‌ ವಿವೇಕಾನಂದಗೌಡ ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ