ಆ್ಯಪ್ನಗರ

ಇಂದು ಉಪನ್ಯಾಸ, ಸನ್ಮಾನ

ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿಡಿ. 9ರಂದು ತೋಂಟದಾರ್ಯ ಮಠದಲ್ಲಿಜರುಗುವ 2462 ನೇ ಶಿವಾನುಭವದಲ್ಲಿಉಪನ್ಯಾಸ, ಸಮ್ಮಾನ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ.

Vijaya Karnataka 9 Dec 2019, 5:00 am
ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿಡಿ. 9ರಂದು ತೋಂಟದಾರ್ಯ ಮಠದಲ್ಲಿಜರುಗುವ 2462 ನೇ ಶಿವಾನುಭವದಲ್ಲಿಉಪನ್ಯಾಸ, ಸಮ್ಮಾನ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ.
Vijaya Karnataka Web lecture today goodbye
ಇಂದು ಉಪನ್ಯಾಸ, ಸನ್ಮಾನ


ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಶರಣ ಬಾವೂರ ಬೊಮ್ಮಯ್ಯ ವಚನಸಾರ ಕುರಿತು ಡಿಡಿಪಿಐ ಎನ್‌.ಎಚ್‌.ನಾಗೂರ ಉಪನ್ಯಾಸ ನೀಡುವರು.

ಎನ್‌.ಎಚ್‌.ನಾಗೂರ ಇವರು ಸಂಪಾದಿಸಿರುವ ಬಾವೂರ ಬೊಮ್ಮಯ್ಯ ವಚನಗಳ ಕಿರುಹೊತ್ತಿಗೆಯನ್ನು ಶ್ರೀಗಳು ಲೋಕಾರ್ಪಣೆಗೊಳಿಸುವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿರುವ ಶರಣೆ ರತ್ನಕ್ಕ ಪಾಟೀಲ ಅವರಿಗೆ ಸನ್ಮಾನ ಜರುಗಲಿದೆ.

ಗುರುಬಸವ ಸಿಬಿಎಸ್‌ಇ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಧರ್ಮಗ್ರಂಥ ಪಠಣವನ್ನು ವಿನಯ ಸುರೇಶ ಅಗ್ನೂರ ಹಾಗೂ ವಚನ ಚಿಂತನವನ್ನು ರೇಖಾ ಸುರೇಶ ಅಗ್ನೂರ ನೆರವೇರಿಸುವರು.

ದಿ. ಮಂಜುನಾಥ ಅಕ್ಕಿ ಸ್ಮರಣಾರ್ಥ ಕೊಟ್ರಪ್ಪ ಅಕ್ಕಿ ತಂಬ್ರಳ್ಳಿ ದಾಸೋಹ ಸೇವೆ ವಹಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎಂ.ಸಿ. ಐಲಿ, ಶಿವಾನುಭವ ಸಮಿತಿ ಚೇರ್ಮನ್‌ ವಿವೇಕಾನಂದಗೌಡ ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ