ಆ್ಯಪ್ನಗರ

ಕಾನೂನು ಅರಿವು ನೆರವು ಕಾರ‍್ಯಕ್ರಮ

ಲಕ್ಷ್ಮೇಶ್ವರ : ಮನುಷ್ಯ ಸಂಘ ಜೀವಿಯಾಗಿದ್ದರು ಅವನಲ್ಲಿನ ಅತಿಯಾದ ದುರಾಸೆ, ಸ್ವಾರ್ಥಗಳಿಂದ ಮಾನವೀಯತೆ ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್‌.ಒಡೆಯರ್‌ ಹೇಳಿದರು.

Vijaya Karnataka 15 Dec 2018, 5:00 am
ಲಕ್ಷ್ಮೇಶ್ವರ : ಮನುಷ್ಯ ಸಂಘ ಜೀವಿಯಾಗಿದ್ದರು ಅವನಲ್ಲಿನ ಅತಿಯಾದ ದುರಾಸೆ, ಸ್ವಾರ್ಥಗಳಿಂದ ಮಾನವೀಯತೆ ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್‌.ಒಡೆಯರ್‌ ಹೇಳಿದರು.
Vijaya Karnataka Web legal awareness program
ಕಾನೂನು ಅರಿವು ನೆರವು ಕಾರ‍್ಯಕ್ರಮ


ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಅರಕ್ಷ ಕ ಇಲಾಖೆ ಹಾಗೂ ಶ್ರೀ ಅರೋಬಿಂದೊ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆಯ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ತಾನು ಬದುಕುವುದರ ಜತೆಗೆ ಇತರರಿಗೆ ಬದುಕಲು ಬಿಟ್ಟರೇ ಅದೇ ನಿಜವಾದ ಮಾನವ ರಕ್ಷ ಣೆಯಾಗುತ್ತದೆ. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಅವನದೇ ಆದ ಹಕ್ಕು ಮತ್ತು ಕರ್ತವ್ಯ ಇದೆ. ಅದನ್ನು ಅರಿತುಕೊಂಡು ಎಲ್ಲರೂ ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕು ಎಂದರು.

ಅರೋಬಿಂದೊ ಆಶ್ರಯದ ಅಧ್ಯಕ್ಷ ಎಚ್‌.ಆರ್‌.ದೊಡ್ಡಗೌಡ್ರ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದಿವಾಣಿ ನ್ಯಾಯಾಧೀಶ ಎಚ್‌.ಐ.ಯಾದವಾಡ, ತಹಸೀಲ್ದಾರ್‌ ಕೆ.ಬಿ.ಕೋರಿಶೆಟ್ಟರ, ಸಹಾಯಕ ಸರಕಾರಿ ಅಭಿಯೋಜಕ ಜಿ.ಎಸ್‌.ಪಾಟೀಲ, ವಕೀಲರ ಸಂಘದ ಅಧ್ಯಕ್ಷ ವಿ.ಎಲ್‌.ಪೂಜಾರ, ಶಿರಹಟ್ಟಿ ಪಿಎಸ್‌ಐ ಬಿ.ವೈ.ಕಜಗಲ್‌, ಲಕ್ಷ್ಮೇಶ್ವರ ಪಿ.ಎಸ್‌.ಐ ವಿಶ್ವನಾಥ ಚೌಗಲೆ ಇದ್ದರು.

ಎಸ್‌.ಆರ್‌.ಕುಲಕರ್ಣಿ ಎಸ್‌.ಎನ್‌.ಕತ್ತಿ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ