ಗದಗ : ರಾಜ್ಯದ ವಿವಿಧ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಮಾದರಿಯಲ್ಲಿ ಜಿಲ್ಲೆಯ ಸ್ಲಂ ಪ್ರದೇಶದಲ್ಲಿ ಸ್ಲಂ ವಾಸ್ತವ್ಯ ಮಾಡಬೇಕು. ಇದರಿಂದ ಸ್ಲಂ ನಿವಾಸಿಗಳ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಲು ಸಾಧ್ಯ ಎಂದು ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.
ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಭಾನುವಾರ ಸ್ಲಂ ಜನಾಂದೋಲನ ಹಾಗೂ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡ ಸ್ಲಂ ಜನರ ಬೃಹತ್ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಸ್ಲಂ ಪ್ರದೇಶಗಳನ್ನು ಪಟ್ಟಿ ಮಾಡಿ ಅಲ್ಲಿನ ಸಮಸ್ಯೆಗಳ ಅನುಗುಣವಾಗಿ ಸಿಎಂ ಕುಮಾರಸ್ವಾಮಿ ಅವರು ಮುಂದಿನ ದಿನಮಾನದಲ್ಲಿ ಸ್ಲಂ ವಾಸ್ತವ್ಯ ಮಾಡಬೇಕು. ಸ್ಲಂ ನಿವಾಸಿಗಳ ನಿಜವಾದ ಕಷ್ಟಗಳಿಗೆ ಸೂಕ್ತ ಪರಿಹಾರ ಹೂಡುಕಲು ಸಾಧ್ಯವಾಗುತ್ತಿದೆ. ಸ್ಲಂ ನಿವಾಸಿಗಳ ಸಮಸ್ಯೆಗೂ ಮುಕ್ತಿ ನೀಡಲು ಸಾಧ್ಯವಾಗುತ್ತಿದೆ ಎಂದರು.
ಸ್ಲಂ ನಿವಾಸಿಗಳ ಕಷ್ಟ ಪರಿಹಾರ ಮಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದರಿಂದ ಜಿಲ್ಲೆಯ ಎಲ್ಲ ಸ್ಲಂ ನಿವಾಸಿಗಳು ಸಂಘಟನೆ ಮೂಲಕ ಹೋರಾಟ ಮಾಡಬೇಕು. ಸಂಘಟನಾ ಹೋರಾಟಕ್ಕೆ ಗೆಲುವು ಕಟ್ಟಿ ಇಟ್ಟ ಬುತ್ತಿ. ಆದ್ದರಿಂದ ಸ್ಲಂ ನಿವಾಸಿಗಳ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವ ಮೂಲಕ ಉನ್ನತ ಹುದ್ದೆ ಅಲಂಕಾರಿಸಬಹುದು ಎಂದರು.
ಸ್ಲಂ ನಿವಾಸಿಗಳಿಗೆ ಮನೆ ನೀಡಿ:
ನಗರದ ವಸತಿರಹಿತರ ಮತ್ತು ಮೂಲ ಗುಡಿಸಲ ನಿವಾಸಿಗಳಿಗೆ ಪ್ರಧಾನ ಮಂತ್ರಿಗಳ ಆವಾಜ್ ಯೋಜನೆಯಲ್ಲಿ 3630 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಂಚಬೇಕು. ಜತೆಗೆ ಸ್ಲಂ ನಿವಾಸಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಲಂ ಪ್ರದೇಶ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.
ಮಾನವೀಯ ಮೌಲ್ಯಗಳಿಗೆ ಗೌರವ ನೀಡುವ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಸ್ಲಂ ನಿವಾಸಿಗಳಿಗೆ ರಾಜಕಾರಣಿಗಳಿಗೆ ನಾವುಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಅವರ ನೆನಪಿಗೆ ಬರುತ್ತವೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳಿಗೆ ಕೊಳಚೆ ಪ್ರದೇಶಗಳು ಕೇವಲ ವೊಟ್ ಬ್ಯಾಂಕ್ಗಳಾಗಿವೆ. ಆದ್ದರಿಂದ ನಾವುಗಳು ಬದಲಾವಣೆ ಹೊಂದುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಸ್ಲಂ ಸಮಿತಿ ಜಿಲ್ಲಾಧ್ಯಕ್ಷ ಇಮ್ತಿಯಾಜ ಮಾನ್ವಿ ಮಾತನಾಡಿದರು.
ಬೃಹತ್ ಜಾಥಾ:
ಸ್ಲಂ ಜನರ ಬೃಹತ್ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಇಲ್ಲಿನ ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಪಾದಯಾತ್ರೆ ಮೂಲಕ ನೂರಾರು ಸ್ಲಂ ಕಾರ್ಯಕರ್ತರೊಂದಿ ಗಾಂಧಿ ವೃತ್ತದಿಂದ ರೋಟರಿ ಸರ್ಕಲ್, ಭೂಮ್ಮರಡ್ಡಿ ಸರ್ಕಲ್, ಎಂಪಿಎಂಸಿ ಆವರಣದ ಮೂಲಕ ಕೆ.ಎಚ್.ಪಾಟೀಲ ಸಭಾಭವನದ ಮೂಲಕ ಪಾದಯಾತ್ರೆ ಮೂಲಕ ಜಾಥಾ ಮಾಡಿದರು.
ಅಶೋಕ ಕುಸಬಿ, ಶೋಭಾ ಕಮತರ, ರಸೂಲ್ ನದಾಫ್,ಫಕೀರಪ್ಪ ತಳವಾರ, ಪ್ರವೀಣಾಬಾನು ಹವಾಲ್ದಾರ, ರಫೀಕ್ ಧಾರವಾಡ, ಪೀರಸಾಬ್ ಡಾಲರ್, ಉಸ್ಮಾನ ಚಿತ್ತಾಪುರ, ಇಬ್ರಾಹಿಂ ಮುಲ್ಲಾ, ತಮನ್ನಾ ಧಾರವಾಡ, ಮೇಹರುನ್ನಿಸಾ ಢಾಲಾಯತ, ಮಲ್ಲಿಕಾರ್ಜುನ ಕರಡಿ ಇದ್ದರು.
ಬಾರದ ಅಧಿಕಾರಿಗಳು:
ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸ್ಲಂ ಜನರ ಬೃಹತ್ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸಮಾವೇಶವು ಸ್ಥಳೀಯ ನಾಯಕರಿಗೆ ಸೀಮಿತವಾಯಿತು. ಸಮಿತಿ ಪದಾಧಿಕಾರಿಗಳು ಮಾತನಾಡುವ ಸಂದರ್ಭದಲ್ಲಿ ಅಧಿಕಾರಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ನಾನಾ ಕಾರಣ ಹೇಳಿ ಜಾರಿ ಕೋಳುತ್ತಾರೆ. ಕಾರ್ಯಕ್ರಮಕ್ಕೆ ಭಾಗವಹಿಸಿದ ನೂರಾರು ಸ್ಲಂ ನಿವಾಸಿಗಳು ತಮ್ಮ ಬೇಕು ಬೇಡಿಕೆಗನ್ನು ಅಧಿಕಾರಿಗಳ ಮುಂದೆ ಇಡುವ ಉದ್ದೇಶದಿಂದ ಅವರು ನಮ್ಮ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಭಾನುವಾರ ಸ್ಲಂ ಜನಾಂದೋಲನ ಹಾಗೂ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡ ಸ್ಲಂ ಜನರ ಬೃಹತ್ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಸ್ಲಂ ಪ್ರದೇಶಗಳನ್ನು ಪಟ್ಟಿ ಮಾಡಿ ಅಲ್ಲಿನ ಸಮಸ್ಯೆಗಳ ಅನುಗುಣವಾಗಿ ಸಿಎಂ ಕುಮಾರಸ್ವಾಮಿ ಅವರು ಮುಂದಿನ ದಿನಮಾನದಲ್ಲಿ ಸ್ಲಂ ವಾಸ್ತವ್ಯ ಮಾಡಬೇಕು. ಸ್ಲಂ ನಿವಾಸಿಗಳ ನಿಜವಾದ ಕಷ್ಟಗಳಿಗೆ ಸೂಕ್ತ ಪರಿಹಾರ ಹೂಡುಕಲು ಸಾಧ್ಯವಾಗುತ್ತಿದೆ. ಸ್ಲಂ ನಿವಾಸಿಗಳ ಸಮಸ್ಯೆಗೂ ಮುಕ್ತಿ ನೀಡಲು ಸಾಧ್ಯವಾಗುತ್ತಿದೆ ಎಂದರು.
ಸ್ಲಂ ನಿವಾಸಿಗಳ ಕಷ್ಟ ಪರಿಹಾರ ಮಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದರಿಂದ ಜಿಲ್ಲೆಯ ಎಲ್ಲ ಸ್ಲಂ ನಿವಾಸಿಗಳು ಸಂಘಟನೆ ಮೂಲಕ ಹೋರಾಟ ಮಾಡಬೇಕು. ಸಂಘಟನಾ ಹೋರಾಟಕ್ಕೆ ಗೆಲುವು ಕಟ್ಟಿ ಇಟ್ಟ ಬುತ್ತಿ. ಆದ್ದರಿಂದ ಸ್ಲಂ ನಿವಾಸಿಗಳ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವ ಮೂಲಕ ಉನ್ನತ ಹುದ್ದೆ ಅಲಂಕಾರಿಸಬಹುದು ಎಂದರು.
ಸ್ಲಂ ನಿವಾಸಿಗಳಿಗೆ ಮನೆ ನೀಡಿ:
ನಗರದ ವಸತಿರಹಿತರ ಮತ್ತು ಮೂಲ ಗುಡಿಸಲ ನಿವಾಸಿಗಳಿಗೆ ಪ್ರಧಾನ ಮಂತ್ರಿಗಳ ಆವಾಜ್ ಯೋಜನೆಯಲ್ಲಿ 3630 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಂಚಬೇಕು. ಜತೆಗೆ ಸ್ಲಂ ನಿವಾಸಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಲಂ ಪ್ರದೇಶ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.
ಮಾನವೀಯ ಮೌಲ್ಯಗಳಿಗೆ ಗೌರವ ನೀಡುವ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಸ್ಲಂ ನಿವಾಸಿಗಳಿಗೆ ರಾಜಕಾರಣಿಗಳಿಗೆ ನಾವುಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಅವರ ನೆನಪಿಗೆ ಬರುತ್ತವೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳಿಗೆ ಕೊಳಚೆ ಪ್ರದೇಶಗಳು ಕೇವಲ ವೊಟ್ ಬ್ಯಾಂಕ್ಗಳಾಗಿವೆ. ಆದ್ದರಿಂದ ನಾವುಗಳು ಬದಲಾವಣೆ ಹೊಂದುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಸ್ಲಂ ಸಮಿತಿ ಜಿಲ್ಲಾಧ್ಯಕ್ಷ ಇಮ್ತಿಯಾಜ ಮಾನ್ವಿ ಮಾತನಾಡಿದರು.
ಬೃಹತ್ ಜಾಥಾ:
ಸ್ಲಂ ಜನರ ಬೃಹತ್ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಇಲ್ಲಿನ ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಪಾದಯಾತ್ರೆ ಮೂಲಕ ನೂರಾರು ಸ್ಲಂ ಕಾರ್ಯಕರ್ತರೊಂದಿ ಗಾಂಧಿ ವೃತ್ತದಿಂದ ರೋಟರಿ ಸರ್ಕಲ್, ಭೂಮ್ಮರಡ್ಡಿ ಸರ್ಕಲ್, ಎಂಪಿಎಂಸಿ ಆವರಣದ ಮೂಲಕ ಕೆ.ಎಚ್.ಪಾಟೀಲ ಸಭಾಭವನದ ಮೂಲಕ ಪಾದಯಾತ್ರೆ ಮೂಲಕ ಜಾಥಾ ಮಾಡಿದರು.
ಅಶೋಕ ಕುಸಬಿ, ಶೋಭಾ ಕಮತರ, ರಸೂಲ್ ನದಾಫ್,ಫಕೀರಪ್ಪ ತಳವಾರ, ಪ್ರವೀಣಾಬಾನು ಹವಾಲ್ದಾರ, ರಫೀಕ್ ಧಾರವಾಡ, ಪೀರಸಾಬ್ ಡಾಲರ್, ಉಸ್ಮಾನ ಚಿತ್ತಾಪುರ, ಇಬ್ರಾಹಿಂ ಮುಲ್ಲಾ, ತಮನ್ನಾ ಧಾರವಾಡ, ಮೇಹರುನ್ನಿಸಾ ಢಾಲಾಯತ, ಮಲ್ಲಿಕಾರ್ಜುನ ಕರಡಿ ಇದ್ದರು.
ಬಾರದ ಅಧಿಕಾರಿಗಳು:
ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸ್ಲಂ ಜನರ ಬೃಹತ್ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸಮಾವೇಶವು ಸ್ಥಳೀಯ ನಾಯಕರಿಗೆ ಸೀಮಿತವಾಯಿತು. ಸಮಿತಿ ಪದಾಧಿಕಾರಿಗಳು ಮಾತನಾಡುವ ಸಂದರ್ಭದಲ್ಲಿ ಅಧಿಕಾರಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ನಾನಾ ಕಾರಣ ಹೇಳಿ ಜಾರಿ ಕೋಳುತ್ತಾರೆ. ಕಾರ್ಯಕ್ರಮಕ್ಕೆ ಭಾಗವಹಿಸಿದ ನೂರಾರು ಸ್ಲಂ ನಿವಾಸಿಗಳು ತಮ್ಮ ಬೇಕು ಬೇಡಿಕೆಗನ್ನು ಅಧಿಕಾರಿಗಳ ಮುಂದೆ ಇಡುವ ಉದ್ದೇಶದಿಂದ ಅವರು ನಮ್ಮ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.